tag:blogger.com,1999:blog-13129892962480465312024-03-05T15:48:11.738-08:00ಅಕ್ಷರ ಹೂಮನದ ಮೊಗ್ಗೊಡೆದು ಘಮಘಮಿಸಿ...ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.comBlogger18125tag:blogger.com,1999:blog-1312989296248046531.post-85915390008234492232013-03-18T06:27:00.000-07:002013-03-18T06:27:01.598-07:00ಅವನು ನೀಲ್.....<div dir="ltr" style="text-align: left;" trbidi="on">
<br /><br />ತುಂಬ ದಿನಗಳ ಬಳಿಕ <br />ಸಮುದ್ರ ತೀರಕ್ಕೆ ಬಂದಿದ್ದೆ., ನಡು ಮಧ್ಯಾಹ್ನ<br />ತಲೆಮೇಲೆ ಬಿರುಬಿಸಿಲು<br />ಉಪ್ಪುನೀರಿನೊಂದಿಗೆ ಬೀಸುವ ಹಸಿಗಾಳಿ<br /><br />ಅವನು ಎದುರಿಗೇ ಬಂದು ವಿಶ್ ಮಾಡಿದಾಗ<br />ತಡವರಿಸುವ ಹಾಗಾಯ್ತು<br />ನನ್ನ ನೀಲಿ ಸ್ಕಟರ್್ನ್ನು, ಕೆಳಗಿನ ಪಾದವನ್ನು <br />ಅಚಾನಕ್ ಅನ್ನುವ ಹಾಗೆ ನೋಡಿ<br />ನಾನೇನೋ ಹೇಳಲು ಹೊರಟಾಗ<br />ಎಚ್ಚರಾದವನ ಹಾಗೆ <br /><br />ನೀಲ್..ಅವನ ಹೆಸರು<br />ತುಂಬ ಚೆಂದ ಅಂತಲ್ಲ,<br />ಒಂಥರಾ ಹ್ಯಾಂಡ್ಸಮ್<br />ಗೊತ್ತಾಗದ ಹಾಗೆ ಅವನ ಕಾಲ್ಬೆರಳು<br />ನೋಡುವುದು ನನಗಿಷ್ಟ<br /><br />ನಮ್ಮಿಬ್ಬರ ನಡುವೆ ಅಂತರವಿತ್ತು<br />ಅವನ ಕೈ ಗೊತ್ತಿಲ್ಲದ ಹಾಗೆ ಸ್ಕಟರ್್ನ ಅಂಚು ಸೋಕುತ್ತಿತ್ತು<br />ತುಂಬ ದಿನಗಳ ನಂತರ ಸಿಕ್ಕಿದ್ದ<br />ಮಾತನಾಡಲು ಅಂತ ವಿಷಯ ಏನಿರಲಿಲ್ಲ<br /><br />ಮರಳ ದಂಡೆಯಲ್ಲಿ ಚಪ್ಪಲಿಬಿಟ್ಟೆ.<br />ಪಾದದ ತುಂಬ ಬಿಳಿಬಿಳಿ ಮರಳು<br />ನೀಲ್ ಮಾತು ಕಡಿಮೆ ಮಾಡಿದ್ದ<br /> ಗಂಭೀರವಾಗಿದ್ದ..<br /><br />ಹೇಗೆ ನಡೆಯುತ್ತಿದೆ ಸಂಸಾರ?<br />ಚೆನ್ನಾಗಿದೆಯಪ್ಪ<br />ನಿನ್ನ ಕಥೆ?<br />ಮತ್ತೊಂದು ಸಂಸಾರ<br /><br />ಗೊತ್ತಾಗತ್ತೆ, ಡುಮ್ಮಿ!<br />ನೀನು ಹೊತ್ಕೊಂಡಿದಿಯಾ?<br />ನೀನು ಬಿಟ್ರೆ, ಅದಕ್ಕೂ ರೆಡಿ<br />ಬೇಡ ಮಾರಾಯ, ಸುಮ್ನೆ ನಡಿ..<br /><br />ನಾವಿಬ್ಬರೂ ಮೊದಲಿನ ಹಾಗೆ <br />ಜೋರಾಗಿ ನಕ್ಕೆವು<br /> ತಲೆ ಮೇಲೆ ಮೊಟಕಿದ<br />ಕಟ್ಟಿದ ಕೂದಲು ಬಿಚ್ಚಿ ಹರಡಿದ<br /><br />ನಾವು ಕಡಲುದ್ದ ನಡೆದೆವು..<br />ಅಲೆಗಳೊಂದಿಗೆ ಜಾರಿದೆವು<br /><br />ಅದೆಷ್ಟೋ ಹೊತ್ತಾದ ಮೇಲೆ<br />ನಾನು ಮತ್ತೆ ಚಪ್ಪಲಿ ಮೆಟ್ಟಿದೆ<br />ಕಂದು ಸಾಕ್ಸ್ ಅವನ ಪಾದ ಮುಚ್ಚಿತು<br />ನಾವು ಹೊರಟುಹೋದೆವು<br /><br /><br /><br /></div>
ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com0tag:blogger.com,1999:blog-1312989296248046531.post-44931454308894533972012-12-11T02:51:00.002-08:002012-12-11T02:51:51.410-08:00ದೂರ ಬೆಟ್ಟದ ಧಾಬಾ ಚಾಚಾ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhgapIrD1BAajWq5_Eq8wCFmTSZWTAmMZ7xffusJIOtOCrix7xPxo0ziX4v3cb2vKMtizyeWOeJwlcYVgfQTPmiacwv9JYJAHp_70UNVmiojwdgKXkenP9i_47WlTEeZRZl8ikROa6wsQU/s1600/Photo0260.jpg" imageanchor="1" style="margin-left: 1em; margin-right: 1em;"><img border="0" height="240" src="https://blogger.googleusercontent.com/img/b/R29vZ2xl/AVvXsEhgapIrD1BAajWq5_Eq8wCFmTSZWTAmMZ7xffusJIOtOCrix7xPxo0ziX4v3cb2vKMtizyeWOeJwlcYVgfQTPmiacwv9JYJAHp_70UNVmiojwdgKXkenP9i_47WlTEeZRZl8ikROa6wsQU/s320/Photo0260.jpg" width="320" /></a></div>
<br /><br />`ಕ್ಯಾ ಚಾಹಿಯೆ ಬೇಟಿ?' ಪ್ರೀತಿ ಬೆರೆತ ದನಿಯೊಂದು ಪ್ರಶ್ನಿಸುತ್ತದೆ. `ರೋಟಿ, ಚಾವಲ್, ಸಬ್ಜಿ...?' ಖಾಲಿ ಹೊಟ್ಟೆ ಏನನ್ನೋ ಬಯಸುತ್ತದೆ. ಅಂಕುಡೊಂಕಾದ ಪೆಟ್ಟಿಗೆ ಬೆಂಚಿನಲ್ಲಿ `ಉಸ್ಸಬ್ಬಾ' ಅಂತ ಕೂತ ಕೂಡಲೇ ಬಿಸಿಬಿಸಿ ರೊಟ್ಟಿ ಸಬ್ಜಿ ಅನ್ನ ದಾಲ್ ಪ್ರತ್ಯಕ್ಷ. ಹೊರಗಿನ ಹಿಮಗಾಳಿಯಿಂದ ಬಚ್ಚಿಟ್ಟು, ಬೆಚ್ಚನೆಯ ಕೋಣೆಯೊಳಗೆ ಕೂತು ಬಿಸಿಬಿಸಿ ಊಟ ಮಾಡುವಾಗ, ದೋಜರ್ಿ ದಂಪತಿಗಳ ಅಕ್ಕರೆಯ ಸತ್ಕಾರ ಮನಸ್ಸನ್ನೂ ಬೆಚ್ಚಗಾಗಿಸುತ್ತದೆ. <br /><br />`ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು' ಎಂದು ಹಾಡಿಕೊಳ್ಳುವುದು ಸುಲಭ. ಅದರ ಕಷ್ಟ ಅರಿತವರಿಗೇ ಗೊತ್ತು. ವರ್ಷದ ಒಂಬತ್ತು ತಿಂಗಳು ಹೆಪ್ಪುಗಟ್ಟಿಸುವ ಹಿಮ, ಉಸಿರುಗಟ್ಟಿಸುವ ಗಾಳಿ, ನಡುಗಿಸುವ ಚಳಿ. ತುಸು ಬಿಸಿಲು ಜಾಸ್ತಿ ಬಿದ್ದರೆ ಸೊಕ್ಕಿ ಹರಿವ ನದಿ ಪಕ್ಕದಲ್ಲೇ. ತಮ್ಮ ನಿಗೂಢವನ್ನು ಬಿಟ್ಟುಕೊಡದ ಹಿಮಾಲಯ ಪರ್ವತಗಳು ಸುತ್ತಲೂ. ಜನಸಂಚಾರ ಬಿಡಿ, ಕ್ರಿಮಿಕೀಟಗಳೂ ಇಲ್ಲ. ಇಂಥ ಉಸಿರುಗಟ್ಟಿಸುವ ಕಟ್ಟೇಕಾಂತದಲ್ಲಿ ಜೀವನ ಸಾಗಿಸುವ ಇವರ ಪರಿ ಬೆರಗು ಮೂಡಿಸುತ್ತದೆ.<br /><br />ಹಿಮಾಲಯದ ತಪ್ಪಲಿನ ಒಂದು ಪಾಶ್ರ್ವದ ಅತೀ ಎತ್ತರದ ಹಾಗೂ ಕೊನೆಯ ವಾಹನ ನಿಲ್ದಾಣ ಸ್ಪಿತಿ ಜಿಲ್ಲೆಯಲ್ಲಿ ಬರುತ್ತದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಒಂದೇ ಸಾಮ್ಯದ ಅವಳಿ ಜಿಲ್ಲೆಗಳು. ಸ್ಪಿತಿಯ ಕೇಂದ್ರ ಸ್ಥಾನ ಕಾಜಾ. ಕಡಿಮೆ ಜನಸಂಖ್ಯೆಯಿರುವ ಈ ಜಿಲ್ಲೆಗಳಲ್ಲಿ ಜನಜೀವನ ಕಠಿಣವಾದದ್ದು. ಹಿಮ ಕಡಿಮೆ ಇರುವ ಸಮಯದಲ್ಲಿ ಗದ್ದೆಗಳಲ್ಲಿ ಬಟಾಣಿಕಾಳು, ಗೋಧಿ ಬೆಳೆಯುತ್ತಾ, ಉಳಿದ ಸಮಯದಲ್ಲಿ ಉಣ್ಣೆ, ತುಪ್ಪಳಗಳಿಂದ ಸ್ವೆಟರ್, ಶಾಲ್ ಹೆಣೆಯುತ್ತಾ ಬದುಕು ಕಂಡುಕೊಳ್ಳುತ್ತಾರೆ. <br /><br />ಮುಖ್ಯ ನಗರ ಮನಾಲಿಗೂ ಕಾಜಾಕ್ಕೂ ತಪ್ಪದ ನಂಟು. ಆದರೆ ಮನಾಲಿಯಿಂದ ಸ್ಪಿತಿ ವ್ಯಾಲಿ ನಡುವಿನ ವಾಹನ ಮಾರ್ಗ ನಾಲ್ಕು ತಿಂಗಳಷ್ಟೆ ತೆರೆದಿರುತ್ತದೆ. ವರ್ಷದ ಉಳಿದೆಲ್ಲ ಸಮಯ ಹಿಮದಿಂದ ಮುಚ್ಚಿರುತ್ತದೆ. ಮೇ ತಿಂಗಳು ಬರುತ್ತಿದ್ದಂತೆ ರೋಡ್ ರಿಪೇರಿ ಆರಂಭವಾಗುತ್ತದೆ. ಜೂನ್ ಹೊತ್ತಿಗೆ ರೋಡ್ ವಾಹನ ಓಡಾಟಕ್ಕೆ ಸಜ್ಜಾದರೂ ಪರ್ವತಗಳಿಂದ ಕುಸಿಯುವ ಮಣ್ಣು, ಹಿಮಗಡ್ಡೆಗಳು, ನದೀಪ್ರವಾಹಗಳಿಂದಾಗಿ ನಾಲ್ಕೂ ತಿಂಗಳೂ ರೋಡ್ ರಿಪೇರಿ ನಡೆಯುತ್ತಲೇ ಇರುತ್ತದೆ. ರಸ್ತೆ ತೆರೆದುಕೊಳ್ಳುತ್ತಿದ್ದಂತೇ ಇಲ್ಲಿನ ಹಳ್ಳಿಗರೂ ಪ್ರವಾಸಿಗರನ್ನು ಸ್ವಾಗತಿಸಲು ಎದುರುನೋಡುತ್ತಿರುತ್ತಾರೆ. ಇದು ಅವರಿಗೆ ಒಂದಿಷ್ಟು ಹಣ, ನೆಮ್ಮದಿ ಕೊಡುವ ಕಾಲ. <br /><br />ಮನಾಲಿಯಿಂದ ಬೆಳಗಿನ ಜಾವ ಐದಕ್ಕೆ ಸರಿಯಾಗಿ ಹೊರಡುವ ಎಚ್ಆರ್ಟಿಸಿ ಬಸ್, ಕಣ್ಣಕೊನೆ ಮುಟ್ಟದ ದೈತ್ಯ ಪರ್ವತಗಳಿಗೆ ಸುತ್ತು ಹೊಡೆಯುತ್ತಾ ಸಾಗುತ್ತದೆ. ರೋಹತಾಂಗ್ ಪಾಸ್ ಸೇರಿದಂತೆ ಹಲವೆಡೆ ನೀರ್ಗಲ್ಲುಗಳು, ದೈತ್ಯಬಂಡೆಗಳು, ರಸ್ತೆ ಮೇಲೇ ಹರಿಯುವ ಝರಿ, ಅಪಾಯಕಾರಿ ತಿರುವುಗಳ ಇಕ್ಕಟ್ಟಾದ ಹಾದಿಯಲ್ಲಿ ಸಂಚರಿಸಿ ಮಧ್ಯಾಹ್ನದ ಹೊತ್ತಿಗೆ ಸರಿಯಾಗಿ ಬತಾಲ್ನಲ್ಲಿ ನಿಲ್ಲುತ್ತದೆ. ಸುತ್ತಲೂ ಮುಗಿಲೆತ್ತರ ಚಾಚಿದ ಹಿಮಾಲಯ ಪರ್ವತಶ್ರೇಣಿ. ಪಕ್ಕದಲ್ಲೇ ಹರಿವ ಚಂದ್ರಾ ನದಿ. ಮುಂದೆ ಭಾಗಾ ನದಿ ಜತೆ ಸೇರಿ ಇದು `ಚಂದ್ರಭಾಗಾ'ವಾಗುತ್ತದೆ. ಮುಚ್ಚಿದ ಕಿಟಕಿಯಿಂದಾಗಿ ಬಸ್ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಹಿಮಗಾಳಿ, ಇಳಿದಾಗ ಒಂದು ಕ್ಷಣ ನಡುಗಿಸಿಬಿಡುತ್ತದೆ. ಆಗ ಆಪದ್ಬಾಂಧವನಾಗಿ ಕಾಣುವುದು `ಚಂದ್ರಾ ಧಾಬಾ'. <br /><br />ಚಳಿಗಾಳಿಯಿಂದ ಕಂಗೆಟ್ಟು ಒಳಹೊಕ್ಕವರನ್ನು ಅಕ್ಕರೆಯಿಂದ ಆದರಿಸುತ್ತಾರೆ ದೋಜರ್ಿ ದಂಪತಿ. ಈ ಧಾಬಾದ ಚಂದ್ರ ದೋಜರ್ಿಮಾ ಮತ್ತು ಬೋದ್ ದೋಜರ್ಿ ಕಳೆದ ಮೂವತ್ತಾರು ವರ್ಷಗಳಿಂದ ಇಲ್ಲಿ ಸಾವಿರಾರು ಪ್ರವಾಸಿಗರನ್ನು ಸತ್ಕರಿಸಿದ್ದಾರೆ. ಇದನ್ನು ದಾಟಿದರೆ ಮುಂದೆ ಸುಮಾರು 100 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಹೊಟೇಲಾಗಲಿ, ವಸತಿ ಪ್ರದೇಶಗಳಾಗಲಿ, ಪೆಟ್ರೋಲ್ ಬಂಕ್ಗಳಾಗಲಿ ಸಿಗುವುದಿಲ್ಲ. ಹಾಗಾಗಿ ಎಲ್ಲ ಪ್ರಯಾಣಿಕರು ಇಲ್ಲಿ ಹಸಿವು, ದಾಹ ತಣಿಸಿಕೊಂಡೇ ಮುಂದೆ ಹೋಗುತ್ತಾರೆ. ದಿನಂಪ್ರತಿ ಇಲ್ಲಿ ಓಡಾಡುವ ಬಸ್ನ ಪ್ರಯಾಣಿಕರಷ್ಟೇ ಅಲ್ಲ, ಕಾಜಾಕ್ಕೆ ಹೋಗುವ ಟ್ಯಾಕ್ಸಿ, ಬೈಕ್ಗಳಲ್ಲಿ ತೆರಳುವ ಪ್ರವಾಸಿಗರು, ಸ್ಥಳೀಯ ನಿವಾಸಿಗಳು, ಚಾರಣಿಗರು ಎಲ್ಲ ಇಲ್ಲಿ ಹೊಟ್ಟೆಗೊಂದಿಷ್ಟು ಹಾಕಿಯೇ ಮುಂದೆ ಹೋಗುತ್ತಾರೆ. ಹಾಗೆ ನೋಡಿದರೆ ಇಲ್ಲಿ ಪ್ರವಾಸಿಗರನ್ನು ಸುಲಿಯಲು ಸಾಕಷ್ಟು ಅವಕಾಶವಿದೆ. ಆದರೆ ಈ ದಂಪತಿಗಳು ಇದಕ್ಕೆ ಹೊರತಾದವರು. ತಮ್ಮ ಪ್ರಾಮಾಣಿಕತೆಯಿಂದಲೇ ಪ್ರವಾಸಿಗರ ಮನ ಗೆದ್ದವರು. ದೋಜರ್ಿಯಂತೂ ಮಾತು ಮಾತಿಗೂ ಹಾಸ್ಯ ಮಾಡುತ್ತಾ, ಇಡೀ ವಾತಾವರಣಕ್ಕೇ ತಿಳಿನಗೆಯ ಸ್ಪರ್ಶ ನೀಡುತ್ತಾರೆ. <br /><br />ನಗರದಿಂದ ಸಾಕಷ್ಟು ದೂರದಲ್ಲಿರುವ ಈ ಸ್ಥಳಕ್ಕೆ ಆಹಾರ ಪದಾರ್ಥದ ಸಾಗಣೆಯೇ ಹರಸಾಹಸದ ಕೆಲಸ. ಮನಾಲಿ-ಕಜಾ ರಸ್ತೆ ವಾಹನ ಓಡಾಟಕ್ಕೆ ತೆರೆದುಕೊಳ್ಳುವುದಕ್ಕೂ ಮೊದಲೇ ಇವರು ಧಾನ್ಯ, ಅಕ್ಕಿ, ಬೇಳೆ ಸಂಗ್ರಹದಲ್ಲಿ ತೊಡಗುತ್ತಾರೆ. ಬಳಿಕ ಸಾಗಾಟ. ವಾಹನ ಓಡಾಟ ಆರಂಭವಾದದ್ದೇ ತಡ ಇವರ ಧಾಬಾವೂ ತೆರೆದುಕೊಳ್ಳುತ್ತದೆ. ಜೂನ್ನಿಂದ ಅಕ್ಟೋಬರ್ 20ರವರೆಗೆ ತೆರೆದಿರುತ್ತದೆ. ಪ್ರವಾಸಿಗರ ಆತಿಥ್ಯಕ್ಕೆ ಸಿದ್ಧರಾಗಿ ಸ್ವಾಗತದ ನಗೆ ಚೆಲ್ಲುತ್ತಾರೆ ಈ ದಂಪತಿ. ದಿನವೊಂದಕ್ಕೆ ನೂರಕ್ಕಿಂತಲೂ ಅಧಿಕ ಮಂದಿಗೆ ಆಹಾರ ನೀಡಿ ಸತ್ಕರಿಸುತ್ತಾರೆ. ತಮ್ಮ ಗುಡಿಸಲಿನ ಇನ್ನೊಂದು ಪಾಶ್ರ್ವದಲ್ಲಿರುವ ಬೆಚ್ಚನೆಯ ಕೋಣೆಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಮಾಡುತ್ತಾರೆ. ಇಲ್ಲಿ ದಿನವೊಂದಕ್ಕೆ 13 ಜನ ಉಳಿದುಕೊಳ್ಳುವಷ್ಟು ಜಾಗವಿದೆ. ಅವರಿಗೆ ಆಹಾರದಿಂದ ಹಿಡಿದು ಬಿಸಿನೀರಿನವರೆಗೆ ಎಲ್ಲ ವ್ಯವಸ್ಥೆಯನ್ನೂ ದೋಜರ್ಿ ಮಾಡಿಕೊಡುತ್ತಾರೆ. <br /><br />ದೋಜರ್ಿ ಊರು ಮನಾಲಿ ಸಮೀಪದ ಹಳ್ಳಿ. ಮದುವೆಯ ಹೊಸತರಲ್ಲಿ ಹವಾಮಾನ ವೈಪರೀತ್ಯದಿಂದ ಹೊಟ್ಟೆಹೊರೆದುಕೊಳ್ಳುವುದೇ ಕಷ್ಟವಾಗಿತ್ತು. ಅತಿಯಾದ ಮಳೆಯಿಂದ ಬೆಳೆಯೂ ಕೈಕೊಟ್ಟಿತ್ತು. ಯಾಕೋ ಕೃಷಿಯಿಂದ ಮೇಲುಬೀಳುವ ಲಕ್ಷಣ ಕಾಣಿಸದಾಗ, ತಕ್ಷಣಕ್ಕೆ ಹೊಳೆದದ್ದು ಧಾಬಾ ಆರಂಭಿಸುವ ಯೋಚನೆ. ಅವರಿದ್ದ ಊರಲ್ಲಾಗಲೇ ಧಾಬಾ, ಹೊಟೇಲ್ಗಳು ಸಾಕಷ್ಟಿದ್ದವು. ಅವುಗಳೇ ನಷ್ಟದಲ್ಲಿ ನಡೆಯುತ್ತಿದ್ದವು. ಆದರೆ ಈ ಭಾಗದಿಂದ ಹಿಮಾಲಯ ಚಾರಣಕ್ಕೆ ತೆರಳುವ ಮಂದಿಗೆ ಆಗ ಮಧ್ಯದಲ್ಲೆಲ್ಲೂ ಆಹಾರ ಸಿಗುತ್ತಿರಲಿಲ್ಲ. ಕಾಜಾ, ಚಂದ್ರತಾಲ್ ಕಡೆ ಹೋಗುವ ಪ್ರಯಾಣಿಕರಿಗೂ ಇದೇ ಸಮಸ್ಯೆ. ಎಲ್ಲಕ್ಕೂ ಮಧ್ಯದಲ್ಲಿರುವ ಬತಾಲ್ನಲ್ಲಿ ಧಾಬಾ ತೆರೆದರೆ ತಮ್ಮ ಹೊಟ್ಟೆಪಾಡಿನ ಜತೆಗೆ ಯಾತ್ರಿಕರಿಗೆ ಅನುಕೂಲವಾಗಬಹುದು ಎಂಬ ಯೋಚನೆ ತಲೆಗೆ ಬಂದಿದ್ದೇ ತಡ, ದಂಪತಿಗಳು ಅದರ ಸಿದ್ಧತೆಯಲ್ಲಿ ತೊಡಗಿದರು. ಈಗಲಾದರೆ ಮೊದಲಿನಷ್ಟು ಹಿಮವಿರುವುದಿಲ್ಲ. ಅವರು ಧಾಬಾ ತೆರೆಯುವ ಹೊತ್ತಿಗೆ ಹಿಮದಿಂದ ರಕ್ಷಣೆ ಪಡೆಯುವುದೇ ದೊಡ್ಡ ಸವಾಲಾಗಿತ್ತು. ಆದರೂ ಹುಂಬ ಧೈರ್ಯದಿಂದ ಸಾಕಷ್ಟು ತಯಾರಿಯಿಲ್ಲದೇ, ಪತ್ನಿ ಚಂದ್ರಾ ಹೆಸರಿನಲ್ಲೇ ಧಾಬಾ ತೆರೆದರು. ಆರಂಭದಲ್ಲಿ ಬಹಳ ಕಷ್ಟವಾದರೂ ಬರುಬರುತ್ತಾ ದೋಜರ್ಿ ದಂಪತಿಗಳ ಆತ್ಮವಿಶ್ವಾಸ ಬೆಳೆಯಿತು. <br /><br />ಚಂದ್ರ-ದೋಜರ್ಿ, ವರ್ಷದ ಐದು ತಿಂಗಳು ಬತಾಲ್ನಲ್ಲಿ ಕಳೆದು, ದಟ್ಟ ಹಿಮ ಬೀಳುವ ಸಮಯಕ್ಕೆ ಸರಿಯಾಗಿ ಊರಿಗೆ ಹಿಂತಿರುಗುತ್ತಾರೆ. ಆಗ ಸಿಗುವ ಸಮಯದಲ್ಲಿ ದೇಸಿ ಹಾರಗಳನ್ನು ತಯಾರಿಸುತ್ತಾರೆ. ಮತ್ತೂ ಸಮಯ ಸಿಕ್ಕರೆ ಇತರ ಸ್ಥಳೀಯರಂತೆ ಉಣ್ಣೆ ಶಾಲು, ಸ್ವೆಟ್ಟರ್ ಹಣೆಯುತ್ತಾರೆ. ಧಾಬಾ ತೆರೆದ ಮೇಲೆ ಹಾರಗಳನ್ನು ಪ್ರವಾಸಿಗರಿಗೆ ಮಾರುತ್ತಾರೆ. <br /><br />ಕ್ಷಣ ಕ್ಷಣಕ್ಕೂ ಬದಲಾಗುವ ಹವಾಮಾನ, ಜೋರಾಗಿ ಬೀಳುವ ಮಳೆಗೆ ಕುಸಿಯುವ ಪರ್ವತದ ಮಣ್ಣು, ಕೊರೆಯುವ ತಣ್ಣನೆಯ ಗಾಳಿ... ಇಂತಹ ಹವಾಮಾನ ವೈರುಧ್ಯಗಳಿಂದ ತುಂಬಿದ ಬತಾಲ್ನಲ್ಲಿ ದಿನ ನೂಕುವುದೇ ಸವಾಲು. ಆದರೆ ವಯಸ್ಸು ಐವತ್ತು ದಾಟಿದರೂ ದೋಜರ್ಿ ದಂಪತಿಗಳ ಮನಸ್ಸು ಪರ್ವತದಷ್ಟೇ ಸ್ಥಿರ. ಚಳಿ, ಮಳೆ, ಗಾಳಿಗೆ ಅಳುಕಿದವರಲ್ಲ. ಆ ಕೊರೆಯುವ ಚಳಿಗೆ, ಹಿಮಪರ್ವತದಿಂದ ಇಳಿದು ಬರುವ ಮರಗಟ್ಟಿಸುವ ನೀರಿನಿಂದಲೇ ಅಡುಗೆ, ಪಾತ್ರೆ ತೊಳೆಯುವುದು ಮಾಡುತ್ತಾರೆ. ಎಲ್ಲವನ್ನೂ ಸಹಜವಾಗಿಯೇ ತೆಗೆದುಕೊಂಡು, ಕೆಲಸವನ್ನು ಬಹುವಾಗಿ ಪ್ರೀತಿಸುತ್ತಾರೆ. ಅಷ್ಟೆಲ್ಲ ಕಷ್ಟಪಟ್ಟರೂ ಪ್ರವಾಸಿಗರಲ್ಲಿ ಹಣಕ್ಕಾಗಿ ದುಂಬಾಲು ಬೀಳುವವರಲ್ಲ. ಸ್ವಲ್ಪ ಹಣ ಕಡಿಮೆ ಬಿದ್ದರೂ, `ಪರ್ವಾಗಿಲ್ಲ' ಅನ್ನುವ ಹಾಗೆ ನಕ್ಕು ಸುಮ್ಮನಾಗುವರು. <br /><br />ಮನಾಲಿಯಿಂದ ಕಾಜಾಕ್ಕೆ ಹೋಗುವ ದಾರಿ ನಡುನಡುವೆ ಬೆರಳೆಣಿಯ ಧಾಬಾಗಳು ಕಾಣಸಿಗುತ್ತವೆ. ನೆರಿಗೆಗಟ್ಟಿದ ಮುಖದಲ್ಲಿ ಪ್ರೀತಿಯ ನಗೆ ಸೂಸುವ ಪುಟ್ಟ ಕಣ್ಣಿನ ಜನರು ಸತ್ಕರಿಸುತ್ತಾರೆ. ಮನೆಮಂದಿಯೇ ಇಲ್ಲಿ ಅಡುಗೆಯಿಂದ ಹಿಡಿದು ಕ್ಲೀನಿಂಗ್ ಕೆಲಸದವರೆಗೆ ಎಲ್ಲವನ್ನೂ ಮಾಡುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಅಚಲವಾಗಿ ನಿಂತ ಹಿಮಬೆಟ್ಟಗಳೇ ಇವರಿಗೆ ಮಾದರಿ, ಬದುಕು ಎಲ್ಲವೂ...<br /><br />ಚಿತ್ರ, ಲೇಖನ: ಪ್ರಿಯಾ ಕೆವರ್ಾಶೆ<br /> ಬೆಂಗಳೂರು<br />(ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟ)</div>
ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com1tag:blogger.com,1999:blog-1312989296248046531.post-6652343166485486712012-11-30T01:49:00.002-08:002012-11-30T02:06:14.296-08:00ನಾಟ್ಕ ಮಾಡ್ತಾರೆ- ಥಿಯೇಟರ್ನಲ್ಲಿ ಯಂಗ್ ಸ್ಟಾರ್ಸ್<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjtPlMlBoGxCli65MuZCTEWfiAZYBy9XA3JW_88NZxN3FcDQLiAoGoG5HJkZ-d9Y4YZckEO12uKi9hceCHHEfpLSnLM04FTpZwtoYBOwpVnx_R2aATeOwSqKckxN1vFx0jMnYQeKGje9BA/s1600/young.jpg" imageanchor="1" style="margin-left: 1em; margin-right: 1em;"><img border="0" height="213" src="https://blogger.googleusercontent.com/img/b/R29vZ2xl/AVvXsEjtPlMlBoGxCli65MuZCTEWfiAZYBy9XA3JW_88NZxN3FcDQLiAoGoG5HJkZ-d9Y4YZckEO12uKi9hceCHHEfpLSnLM04FTpZwtoYBOwpVnx_R2aATeOwSqKckxN1vFx0jMnYQeKGje9BA/s320/young.jpg" width="320" /></a></div>
<br />
<br />
<br />
ಕಣ್ಬಿಟ್ಟರೆ ಅದೇ ಜಗತ್ತು, ಅದೇ ಬದುಕು, ಎಂದಿನಂತೆ ತನ್ನ ಪಾತ್ರವೂ ಹಾಗೇ ಏರಿಳಿತವಿಲ್ಲದೇ ಸಾಗುತ್ತದೆ. ಜಾಸ್ತಿಯೆಂದರೆ ವೀಡಿಯೋ ಗೇಮ್, ಫ್ರೆಂಡ್ಸ್, ಮಾಲ್, ಸಿನಿಮಾ ಅಷ್ಟೆ. ಟೆನ್ಶನ್, ವಕರ್್ಲೋಡ್, ಎಕ್ಸಾಂ, ಪ್ರಮೋಶನ್ ಅನ್ನುವ ಕಿರಿಕಿರಿ ಇದರಿಂದ ಕೊಂಚ ದೂರಾದಂತೆ ಅನಿಸಿದರೂ ಸಂಪೂರ್ಣ ರಿಲೀಫ್? ಉಫ್, ಅದು ಈ ಜನ್ಮದಲ್ಲಿ ಸಾಧ್ಯವಾಗಲ್ಲ ಅನಿಸಿ, ಮನಸ್ಸು ಮತ್ತಷ್ಟು ಉದ್ವಿಗ್ನವಾಗುತ್ತದೆ. ಯಾಕೋ ಇದೆಲ್ಲದರಿಂದ ಕ್ಷಣಕಾಲವಾದರೂ ಹೊರಬರಬೇಕೆಂದು ಹಳೇ ಗೆಳೆಯನ ಬೆನ್ನು ಹತ್ತಿಹೊರಟಾಗ ಅಲ್ಲಿ ಹಳೇ ನೆನಪುಗಳ ಫಲಕು. ಶಾಲೆ- ಓದಲಾರದೇ ಮತ್ತೊಬ್ಬ ಓದುವುದನ್ನು ನೋಡಲಾಗದೇ ಓದಿದ್ದು, ಓಡುವಾಗ ಬಿದ್ದು ಮಂಡಿ ಒಡೆದಾಗ ಮಿಸ್ ಹಾಕಿದ ಟಿಂಚರ್ನ ಉರಿಗೆ ಜೀವ ಹೋದಂತಾಗಿದ್ದು, ಸ್ಕೂಲ್ ಡೇಗೆ ಕನ್ನಡ ಮೇಷ್ಟ್ರು ನಾಟಕ ಮಾಡಿಸಿದ್ದು, ಅಲ್ಲಿ ತನಗೆ ಸಿಕ್ಕ ದುರ್ಯೋಧನನ ಪಾತ್ರ, ಡೈಲಾಗ್ ನಡುವೆಯೇ ಪ್ರೇಕ್ಷಕರ ನಡುವೆ ಕುಳಿತ ಅಮ್ಮನನ್ನು ಹುಡುಕಿದ್ದು ..ಹೀಗೆ. ನೆನಪುಗಳಿಂದ ಈಚೆ ಬಂದರೆ ಅದೇ ವರ್ತಮಾನ. ಹಳೆಯದೆಲ್ಲ ಮುಗಿದುಹೋದ ಮಂಕು. <br />
<br />
`ನಿಂಗೆ ನಾಟಕದಲ್ಲಿ ಅಂದಿನ ಇಂಟ್ರೆಸ್ಟ್ ಈಗ್ಲೂ ಇದೆಯಾ?' ಗೆಳೆಯ ಕೇಳಿದರೆ ಪೆಕರನಂತೆ ಅವನ ಮುಖ ನೋಡಿದ. ಈಗಿನ ಬದುಕಿಗೂ ನಾಟಕಕ್ಕೂ ಎತ್ತಲಿನ ಸಂಬಂಧ. ಬೆಳಗಾದರೆ ತಲೆತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಇಪ್ಪತ್ತೈದರ ಪ್ರಾಯದಲ್ಲೇ ಮುರುಟಿ ಹೋಗಿರುವ ಮನಸ್ಸು. ಇದೆಲ್ಲದರಿಂದ ತೀವ್ರ ಬದಲಾವಣೆ ಬೇಕನಿಸಿದ ಕ್ಷಣ,`ಯಾವುದಾದ್ರೂ ನಾಟಕಕ್ಕೆ ಹೋಗೋಣ ಬಾರೋ' ಅಂದ. ಗೆಳೆಯನ ಮನಸ್ಥಿತಿಯೂ ಇವನಿಗಿಂತ ಹೊರತಾದದ್ದಲ್ಲ. ಅವನೂ ಇವನ ನಾಟಕದಲ್ಲಿ ಅಭಿಮನ್ಯು ಪಾಟರ್ು ಮಾಡಿದವ ತಾನೇ. ಆಧುನಿಕ ಥಿಯೇಟರ್ ಒಳಗೆ ಅಡಿಯಿಟ್ಟರು. ಅಲ್ಲಿ ಯಾವುದೋ ಹವ್ಯಾಸಿ ನಾಟಕ. ಏನೇನೋ ನಿರೀಕ್ಷೆಯಲ್ಲಿ ಬಂದಿದ್ದ ಗೆಳೆಯರಲ್ಲಿ ಗೊಂದಲ. ಮೊದಲರ್ಧವಂತೂ ಏನೂ ಅರ್ಥವಾಗಲಿಲ್ಲ. ಎದ್ದುಹೋಗಬೇಕೆಂದುಕೊಂಡವರು ಯಾವುದೋ ಎಳೆತಕ್ಕೊಳಗಾದವರಂತೆ ಕುಳಿತರು. ನಿಧಾನಕ್ಕೆ ನಾಟಕ ಮನಸ್ಸಿಗಿಳಿಯತೊಡಗಿತು. ಹಾಗೇ ಕತ್ತಲಲ್ಲಿ ಕೂತು ಒಂದೂವರೆ ಗಂಟೆ ನಾಟಕ ನೋಡಿ ಮುಗಿಸಿದರು. ಬೇರೆ ಜಗತ್ತಿಗೆ ಹೋಗಿಬಂದಂತನಿಸಿತು. ಥಿಯೇಟರ್ನಿಂದ ಹೊರಬಂದರೂ ನಾಟಕದ ಮೂಡ್ನಿಂದ ಹೊರಬರಲಾಗಲಿಲ್ಲ. ಮತ್ತೆ ಥಿಯೇಟರ್ ಭೇಟಿ ಜಾಸ್ತಿಯಾಯಿತು. ಇವರೊಂದಿಗೆ ಉಳಿದ ಗೆಳೆಯರೂ ಜೊತೆಯಾದರು. ಕೊನೆಗೆ ಇವರದೇ ಟೀಂ ಹುಟ್ಟಿಕೊಂಡಿತು. <br />
<br />
ರಂಗಭೂಮಿಯಿಂದ ಸಂಪೂರ್ಣ ಹೊರಗಿದ್ದ ಒಂದು ಪಂಗಡ ನಾಟಕಕ್ಕೆ ಹತ್ತಿರವಾದ ಬಗೆಯಿದು. ಅದೊಂದು ಕಾಲವಿತ್ತು. ಯುವಜನತೆಗೆ ಹಳ್ಳಿಯ ಏಕತಾನತೆಯ ಬದುಕು ಅನಿವಾರ್ಯವಾಗಿತ್ತು. ಆಗಾಗ ಊರಿಗೆ ಬರುತ್ತಿದ್ದ ಕಂಪೆನಿ ನಾಟಕಗಳು, ಟೆಂಟ್ ಸಿನಿಮಾಗಳಷ್ಟೇ ಮನರಂಜನಾ ಮಾಧ್ಯಮವಾಗಿತ್ತು. ವರ್ಷಕ್ಕೊಮ್ಮೆ ಊರಲ್ಲಿ ನಡೆಯುವ ನಾಟಕದಲ್ಲಿ ಪುಟ್ಟ ಪಾತ್ರ ಮಾಡಿದರೂ ಧನ್ಯತಾಭಾವ. ಈಗ ಹಾಗಲ್ಲ. ಯುವಕರ ಮುಂದೆ ಮನರಂಜನೆಗೆಂದೇ ನೂರಾರು ಆಪ್ಶನ್ಗಳಿವೆ. ಕಂಪ್ಯೂಟರ್ ಎಂಬ ಮಹಾನ್ ಮಾಂತ್ರಿಕನ ಮಂತ್ರದಂಡದಡಿ ಬಂಧಿಗಳಾಗದವರಿಲ್ಲ. ಮಾಲ್, ಮಲ್ಟಿಫ್ಲೆಕ್, ಮ್ಯಾಕ್ಡೊನಾಲ್ಡ್, ಪಿಜ್ಜಾ ಹಟ್ ಅಂತ ಟೈಂಪಾಸ್ಗೆ ನೂರಾರು ತಾಣಗಳು. ಆದರೂ ವೀಕೆಂಡ್ಗಳಲ್ಲಿ ಹಳ್ಳಿ ಕಡೆಗೆ, ಹಸಿರಿನ ಕಡೆಗೆ ಮುಖಮಾಡುವ ಮಂದಿ. ಆಹ್! ಇದೆಂಥಾ ಕಾಂಟ್ರಿಡಿಕ್ಷನ್. ರಂಗಭೂಮಿಗೆ ಯುವಕರ ದಂಡು ಲಗ್ಗೆ ಇಟ್ಟಿರುವುದೂ ಇಂತಹದ್ದೇ ಸನ್ನಿವೇಶದಲ್ಲಿ. <br />
<br />
ಹತ್ತು ವರ್ಷದ ಹಿಂದಿಗಿಂತ ಇಂದಿನ ರಂಗಭೂಮಿಯ ಹರಿವು ಹೆಚ್ಚು ತೀವ್ರವಾಗಿದೆ. ಹವ್ಯಾಸಿ ರಂಗಭೂಮಿಯಂತೂ ಹೊಸತನದಿಂದ ಸಮೃದ್ಧವಾಗಿದೆ. ಯುವಕರು ಥಿಯೇಟರ್ನಲ್ಲಿ ಸಕ್ರಿಯರಾಗಿದ್ದಾರೆ. ಅವರದೇ ತಂಡಗಳು ಹುಟ್ಟಿಕೊಂಡಿವೆ. <br />
`ಪ್ರಸಂಗ'`ರಂಗಸೌರಭ'`ರೂಪಾಂತರ'ದಂತಹ ತಂಡಗಳಲ್ಲಿ ಹೆಚ್ಚಿನವರೆಲ್ಲ ಹೊಸಬರೇ ಆದರೆ, `ರಂಗ ನಿರಂತರ' ದಂತಹ ಹಳೆಯ ತಂಡಗಳಲ್ಲೂ 30ಕ್ಕಿಂತ ಕಡಿಮೆ ವಯೋಮಾನದವರೇ ಮುಕ್ಕಾಲು ಪಾಲಿನಷ್ಟಿದ್ದಾರೆ. ಅವರಿಗೆ ಮಾಲ್, ಶಾಪಿಂಗ್ನಲ್ಲಿ ಸಿಗದ ಮನಶ್ಶಾಂತಿ ಇಲ್ಲಿ ಸಿಗುತ್ತದೆ. ಪಾತ್ರಗಳಲ್ಲಿ ತನ್ಮಯರಾಗುತ್ತಾ, ಅದನ್ನು ತಮ್ಮೊಳಗೆ ಆವಾಹಿಸಿಕೊಂಡು ತಾವೇ ಪಾತ್ರವಾಗುತ್ತಾ, ಕೆಲವೊಮ್ಮೆ ಪಾತ್ರದ ಹೊರನಿಂತು ಅದರ ಆಳ ಅಗಲ ಅರಿತು ಅಭಿನಯಿಸುವ ಚತುರತೆ ಇವರಲ್ಲಿದೆ. <br />
<br />
ಸಾಮಾನ್ಯವಾಗಿ ರಂಗತಂಡವೊಂದು ತನ್ನ ಪ್ರಯೋಗವನ್ನು ಆರಂಭಿಸುವ ಮೊದಲು ಕೆಲವು ಹಂತಗಳಿರುತ್ತವೆ. ಆರಂಭದಲ್ಲಿ ಯುವಜನರಿಗಾಗಿಯೇ ತರಬೇತಿ ಶಿಬಿರ ನಡೆಸುತ್ತದೆ. ತಜ್ಞರು ರಂಗದ ವಿವಿಧ ಪಟ್ಟುಗಳನ್ನು ಕಲಿಸುತ್ತಾರೆ. ಅಳುಕು, ಹಿಂಜರಿಕೆಗಳನ್ನು ದೂರಮಾಡುವ ಆಟ, ಕಸರತ್ತುಗಳಿರುತ್ತವೆ. ಯುವತಿಯರ ಪ್ರತಿಭೆ ಹೊರತೆಗೆಯುವ ಕೆಲಸ ಇಲ್ಲಾಗುತ್ತದೆ. ಒಂದು ರೀತಿಯ ಪರ್ಸನಾಲಿಟಿ ಡೆವಲಂಪ್ಮೆಂಟ್ ಶಿಬಿರವೂ ಹೌದು. ತರಬೇತಿ ಪಕ್ಕಾ ಆದ ಬಳಿಕ `ಸ್ಕ್ರಿಪ್ಟ್ ರೀಡಿಂಗ್'. ಆ ಬಳಿಕ ಪಾತ್ರ ಹಂಚಿಕೆ, ಅಭಿನಯ..ಹೀಗೆ. ಇದು ಯುವ ಜನರನ್ನು ರಂಗಭೂಮಿಗೆ ಇನ್ನಷ್ಟು ಹತ್ತಿರವಾಗಿಸುವ ಪ್ರಕ್ರಿಯೆ. ಅಥವಾ ರಂಗಪ್ರವೇಶದ ಸಿದ್ಧತೆ. ಇದು ನಾಟಕದ ತನ್ಮಯತೆಗೂ ಸಹಕಾರಿ. ಹೀಗೆ ತರಬೇತಿ ಪಡೆಯುವ ಮಂದಿ ಪಾತ್ರಗಳನ್ನು ಮಾಡುತ್ತಾ, ಸುಪ್ತಮನಸ್ಸಿನ ಉದ್ವೇಗಗಳನ್ನು ಅರಿವಿಲ್ಲದಂತೆ ಇಲ್ಲಿ ಸೃಜನಾತ್ಮಕವಾಗಿ ಬಳಸಿಕೊಳ್ಳುತ್ತಾ ತಾವೂ ಬೆಳೆಯುತ್ತಾರೆ. ಒತ್ತಡ, ಕಿರಿಕಿರಿ, ಉದ್ವೇಗಗಳೆಲ್ಲ ಬೇರೆಯದೇ ರೂಪದಲ್ಲಿ ಹೊರಬರುತ್ತದೆ. <br />
<br />
ಇನ್ನು ಕೆಲಮಂದಿ ಜನಪ್ರಿಯವಾಗಿರುವ ಸೀರಿಯಲ್ಗಳಿಗೆ ಹೋಗುವ ಉದ್ದೇಶಕ್ಕೂ ರಂಗಭೂಮಿಯನ್ನು ಮೆಟ್ಟಿಲಾಗಿಸಿಕೊಳ್ಳುವುದುಂಟು. ನಾಟಕದಲ್ಲಿ ನಟನೆಯ ಪಾಠ ಕಲಿತು ಸೀರಿಯಲ್ ಲೋಕದಲ್ಲಿ ಮಿಂಚುವ ಕನಸು ಇವರದು. ಸಿನಿಮಾ ಹುಚ್ಚಿರುವವರೂ ಇಲ್ಲಿಗೆ ಬರುವುದುಂಟು. ಆದರೆ ಇಂಥವರು ರಂಗಭೂಮಿಯಲ್ಲಿ ಸ್ಥಿರವಾಗಿ ನಿಲ್ಲುತ್ತಾರೆಂದು ನಂಬುವ ಹಾಗಿಲ್ಲ. <br />
ಇನ್ನು ಫ್ರೆಂಡ್ಸ್ ಬಲವಂತಕ್ಕೆಂದು ಥಿಯೇಟರ್ಗೆ ಬಂದವರು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ರಂಗಭೂಮಿಯವರೇ ಆಗಿಹೋಗಿದ್ದಾರೆ. ಕರೆತಂದ ಗೆಳೆಯರು ರಂಗಬಿಟ್ಟು ಹೋದರೂ ಇವರು ರಂಗಭೂಮಿಗೆ ಅಂಟಿಕೊಂಡೇ ಇದ್ದಾರೆ. ಈ ಪ್ರಪಂಚಕ್ಕೆ ಕಾಲಿಟ್ಟ ಮೇಲಿಂದ ಇವರ ಅಳುಕು ಹಿಂಜರಿಕೆ ಜಾಗದಲ್ಲಿ ಆತ್ಮವಿಶ್ವಾಸದ ಛಾಪು ಮಾಡಿದೆ. ಮೊದಲೆಲ್ಲ ಸ್ಟೇಜ್ ಹತ್ತಿದರೆ ಕೈಕಾಲು ನಡುಗಿ ಬಾಯಿಪಸೆ ಆರಿದಂತಾಗಿ ತಡವರಿಸುತ್ತಿದ್ದವರು ಈಗ ಎಷ್ಟು ಪ್ರೇಕ್ಷಕರಿದ್ದರೂ ನಿಭರ್ಿಡೆಯಿಂದ ಮಾತಾಡಬಲ್ಲರು. ಸಿಟ್ಟು, ಉದ್ವೇಗ ಹೊತ್ತುಕೊಂಡೇ ಮನೆಗೆ ಹಿಂತಿರುಗುತ್ತಿದ್ದವರು ಈಗ ಖುಷಿಖುಷಿಯಿಂದ ನಗುತ್ತಾ ಹೋಗುತ್ತಾರೆ. ಈ ಬೆಳವಣಿಗೆ ಮನೆಯವರಿಗೂ ಅಚ್ಚರಿ ತಂದಿದೆ. <br />
<br />
****************<br />
ಬೈಟ್ : <br />
ಭರತ್ ದಿವಾಕರ್ - ಯುವ ರಂಗಕಮರ್ಿ, `ಒಪೇರಾಹೌಸ್' ನಾಟಕ ನಿದರ್ೇಶಕ<br />
ಈಗ ರಂಗಭೂಮಿ ಹೊಸಬರಿಂದಲೇ ತುಂಬಿ ಹೋಗಿದೆ. ನಮ್ಮ `ರಂಗಸೌರಭ' ತಂಡದಲ್ಲಿ ಶೇ.95ರಷ್ಟು ಮಂದಿ 25ರ ಕೆಳಗಿನವರು. ಇವರಿಗೆ ಅಭಿನಯ ಕಲಿಸುವುದು ಸುಲಭ. ಫೇಸ್ಬುಕ್ನಂತಹ ತಾಣಗಳಲ್ಲಿ ರಂಗಕ್ಕೆ ಸಂಬಂಧಪಟ್ಟ ವಿಷಯ ಹಾಕಿದರೆ ಸಾಕು, ನೆಟ್ವಕರ್ಿಂಗ್ ತನ್ನಿಂದ ತಾನೇ ಬೆಳೆಯತ್ತೆ. ನಾಟಕ ಪ್ರದರ್ಶನಕ್ಕೆ ಮೊದಲಿನ ಹಾಗೆ ಕಲಾಕ್ಷೇತ್ರಕ್ಕೇ ಜೋತುಬೀಳಬೇಕಿಲ್ಲ. ರಂಗಶಂಕರ, ಕೆ.ಎಚ್. ಕಲಾಸೌಧ ಸೇರಿದಂತೆ ಹತ್ತಾರು ಕಡೆ ಥಿಯೇಟರ್ ಆಕ್ಟಿವಿಟಿಗೆ ಅವಕಾಶ ಸಿಗುತ್ತದೆ. ಮೊದಲಿದ್ದ ರಿಸ್ಟ್ರಿಕ್ಟೆಡ್ ಆಡಿಯನ್ಸ್ ಈಗಿಲ್ಲ. ಎಲ್ಲ ವರ್ಗದ ಜನರೂ ನಾಟಕಕ್ಕೆ ಬರುತ್ತಾರೆ. ಇದರಿಂದ ಆಥರ್ಿಕವಾಗಿಯೂ ರಂಗಭೂಮಿ ಬೆಳೆಯುವುದು ಸಾಧ್ಯವಾಗಿದೆ. <br />
<br />
ಪನ್ನಗ ವಿಠಲ್ - ನಾಟಕ, ಕಿರುತೆರೆ ಕಲಾವಿದೆ<br />
ನನಗೆ ಸೀರಿಯಲ್ ಫೀಲ್ಡ್ನಲ್ಲಿ ಮೊದಲಿಂದಲೂ ಆಸಕ್ತಿ ಇತ್ತು. ಅಭಿನಯ ಕಲಿಯಲಿಕ್ಕೆಂದು ಥಿಯೇಟರ್ಗೆ ಬಂದೆ. ಇಲ್ಲಿ ಬಂದ ಮೇಲೆ ಬೇರೆಯದೇ ಲೋಕಕ್ಕೆ ಬಂದಂತಾಯ್ತು. ಟ್ರೈನಿಂಗ್ ನಿಂದ ಹಿಡಿದು ನಾಟಕ ಪ್ರದರ್ಶನದವರೆಗಿನ ಹಂತ ನನಗೊಂದು ಹೊಸ ವ್ಯಕ್ತಿತ್ವ ಕೊಟ್ಟಿತು. ರಂಗಭೂಮಿಗೆ ದೊಡ್ಡ ಸಲಾಂ .<br />
<br />
ಶ್ರೀಪಾದ - ಯುವ ರಂಗಕಲಾವಿದ, ವೃತ್ತಿಯಲ್ಲಿ ಮೆಡಿಕಲ್ ರೆಪ್ <br />
ನಾನು ಥಿಯೇಟರ್ಗೆ ಮೊದಲ ಎಂಟ್ರಿ ಕೊಟ್ಟಿದ್ದು ಗೆಳೆಯರ ಮೂಲಕ. ಈಗ ಎಷ್ಟೇ ಕೆಲಸದ ಒತ್ತಡವಿದ್ದರೂ ಅದನ್ನು ಬದಿಗಿಟ್ಟು ರಂಗಕ್ರಿಯೆಯಲ್ಲಿ ಮಗ್ನನಾಗುತ್ತೇನೆ. ಇಲ್ಲಿ ಬಂದ ಮೇಲೆ ಹೊರಹೋಗುವುದೇ ಕಷ್ಟ. ಮತ್ತೊಂದು ವಿಷ್ಯ ಅಂದ್ರೆ ಇದು ನಾವು ಕಷ್ಟ ಪಟ್ಟು ಮಾಡೋದಲ್ಲ. ಇಷ್ಟಪಟ್ಟು ಮಾಡೋದು. ಇಲ್ಲಿ ದುಡ್ಡು ಬರಲ್ಲ. ನಾಟಕದಿಂದ ಹೊಟ್ಟೆಹೊರೆಯೋದು ಕನಸಿನ ಮಾತು. ಆದರೆ ಇಲ್ಲಿ ಸಿಗೋ ಖುಷಿ, ನೆಮ್ಮದಿ ನಂಗೆ ಬೇರೆಲ್ಲೂ ಸಿಕ್ಕಿಲ್ಲ. <br />
<br />
(`ವಿಜಯವಾಣಿ' ನವೆಂಬರ್ 28ರ `ಮಸ್ತ್' ಪುರವಣಿಯಲ್ಲಿ ಪ್ರಕಟ)<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEheqt3mW8AhotLA7HPLltffKbXqZ0eIyp-Otid7w5TxzGjlBpJaQpWPcZcUkFmKOyVqFwnvGWMWggXgPPbH-Yabp9PTEJnRVvHL-uOqzt6SGkGsxmmoMmcoTmW4ehQGigthHZQ96ceN8G4/s1600/anbhijna+shaakuntala+drama+3.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="212" src="https://blogger.googleusercontent.com/img/b/R29vZ2xl/AVvXsEheqt3mW8AhotLA7HPLltffKbXqZ0eIyp-Otid7w5TxzGjlBpJaQpWPcZcUkFmKOyVqFwnvGWMWggXgPPbH-Yabp9PTEJnRVvHL-uOqzt6SGkGsxmmoMmcoTmW4ehQGigthHZQ96ceN8G4/s320/anbhijna+shaakuntala+drama+3.jpg" width="320" /></a></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEheqt3mW8AhotLA7HPLltffKbXqZ0eIyp-Otid7w5TxzGjlBpJaQpWPcZcUkFmKOyVqFwnvGWMWggXgPPbH-Yabp9PTEJnRVvHL-uOqzt6SGkGsxmmoMmcoTmW4ehQGigthHZQ96ceN8G4/s1600/anbhijna+shaakuntala+drama+3.jpg" imageanchor="1" style="margin-left: 1em; margin-right: 1em;"><img border="0" height="212" src="https://blogger.googleusercontent.com/img/b/R29vZ2xl/AVvXsEheqt3mW8AhotLA7HPLltffKbXqZ0eIyp-Otid7w5TxzGjlBpJaQpWPcZcUkFmKOyVqFwnvGWMWggXgPPbH-Yabp9PTEJnRVvHL-uOqzt6SGkGsxmmoMmcoTmW4ehQGigthHZQ96ceN8G4/s320/anbhijna+shaakuntala+drama+3.jpg" width="320" /></a></div>
<br /></div>
ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com0tag:blogger.com,1999:blog-1312989296248046531.post-53870434511126501062011-08-10T04:29:00.000-07:002011-08-10T07:33:11.428-07:00ಕರ್ಣ<a href="https://blogger.googleusercontent.com/img/b/R29vZ2xl/AVvXsEiTlB7dyReYW6qbRXBhg31eZGwZJx3aRLzslBCeHamjbUTZR6LZ0hA-un6q3l7LD7Z8DAPqC1VnQa7V2aZDUkEsVOvdOQb47U4-jwZOzu00JJDQFitpas2VtjOGq_AhDfCLSIqWDwU0dh8/s1600/nekraaje+121.jpg" onblur="try {parent.deselectBloggerImageGracefully();} catch(e) {}"><img style="display: block; margin: 0px auto 10px; text-align: center; cursor: pointer; width: 320px; height: 240px;" src="https://blogger.googleusercontent.com/img/b/R29vZ2xl/AVvXsEiTlB7dyReYW6qbRXBhg31eZGwZJx3aRLzslBCeHamjbUTZR6LZ0hA-un6q3l7LD7Z8DAPqC1VnQa7V2aZDUkEsVOvdOQb47U4-jwZOzu00JJDQFitpas2VtjOGq_AhDfCLSIqWDwU0dh8/s320/nekraaje+121.jpg" alt="" id="BLOGGER_PHOTO_ID_5639192295522436354" border="0" /></a>
<br /><a href="https://blogger.googleusercontent.com/img/b/R29vZ2xl/AVvXsEjBAdkKD9JvS9bBCIgNp8bFTD-Za7yTNbr2gFEf2jXzT1vRqDnukSAdlOt4uRvpMW9Rvd-7AQOG_Rq2HqLbxbsjYfouyfnFig5HcUryREM2jE7l-CPo_2IbGvtS6kpPmYp89hsKZ5a1K8I/s1600/nekraaje+071.jpg" onblur="try {parent.deselectBloggerImageGracefully();} catch(e) {}"><img style="float: right; margin: 0pt 0pt 10px 10px; cursor: pointer; width: 320px; height: 240px;" src="https://blogger.googleusercontent.com/img/b/R29vZ2xl/AVvXsEjBAdkKD9JvS9bBCIgNp8bFTD-Za7yTNbr2gFEf2jXzT1vRqDnukSAdlOt4uRvpMW9Rvd-7AQOG_Rq2HqLbxbsjYfouyfnFig5HcUryREM2jE7l-CPo_2IbGvtS6kpPmYp89hsKZ5a1K8I/s320/nekraaje+071.jpg" alt="" id="BLOGGER_PHOTO_ID_5639190133587269730" border="0" /></a>
<br />ಕರ್ಣ...ಈಗ ನೋಡಿದರೆ ಅವನು ಗೆಳೆಯನಂತಿದ್ದ ಅನಿಸುತ್ತದೆ. ನನಗಿಂತ ನಾಕೈದು ವರ್ಷ ದೊಡ್ಡವನಿರಬಹುದು. ಅಜ್ಜನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಸಂಕಮ್ಮನ ಅಕ್ಕನ ಮಗ. ಬರಿಗಾಲು, ಲಾಡಿಹಾಕಿದ ಗಟ್ಟಿ ಚಡ್ಡಿ, ನೀರುಕಲೆಯಿದ್ದರೂ ಸ್ವಚ್ಛವಾಗಿದ್ದ ಬಟ್ಟೆ, ಉರುಟುರುಟು ಮುಖ...ಆ ಮುಖ ಈಗ ಸ್ಪಷ್ಟವಾಗುವುದಿಲ್ಲ.
<br />
<br />ಅವನಿಗೆ `ಕರ್ಣ' ಅನ್ನುವ ಆ ಚೆಂದದ ಹೆಸರನ್ನು ಯಾರಿಟ್ಟರೋ. ಸ್ವಭಾವದಲ್ಲೂ ಸ್ವಲ್ಪ ಮಹಾಭಾರತದ ಕರ್ಣನನ್ನೇ ಹೋಲುತ್ತಿದ್ದ. ಅಷ್ಟು ಸಣ್ಣ ಹುಡುಗ ಕೆಲಸದಲ್ಲೂ ಚೂಟಿ. ಆ ಮಾರಾಯ ಸುಮ್ಮನಿದ್ದದ್ದು ನಾನು ನೋಡಿಲ್ಲ. ಏನೂ ಕೆಲಸವಿಲ್ಲದಿದ್ದರೆ ಉಗುರು ಕಚ್ಚುವ ಅಭ್ಯಾಸ. ಕಚ್ಚಿ ಕಚ್ಚಿ ಅವನ ಉಗುರು ಉದ್ದವೇ ಬರುತ್ತಿರಲಿಲ್ಲ. ಅಜ್ಜನ ಮನೆಯ ಎದುರಿಗಿದ್ದ ಪೇರಳೆ ಮರ ಅವನ ಪ್ರೀತಿಯ ಸ್ಥಳ. ದಿನಕ್ಕೊಮ್ಮೆಯಾದರೂ ಆ ಮರ ಹತ್ತದಿದ್ದರೆ ಅವನಿಗೆ ನಿದ್ದೆ ಬರುತ್ತಿರಲಿಲ್ಲ. ಎಷ್ಟು ತುದಿಯಲ್ಲಿ ಪೇರಳೆ ಹಣ್ಣು ಬಿಟ್ಟಿದ್ದರೂ ಕ್ಯಾರೇ ಇಲ್ಲ. ಸಪೂರದ ಗೆಲ್ಲಿನ ಮೇಲೆ ನಿಂತು ಪೇರಳೆಗೆ ಕೈಚಾಚುವಾಗ, ಬಿದ್ದೇಬಿಡುತ್ತಾನೆ ಅನಿಸುತ್ತಿತ್ತು. ಆದರೆ ಅವ ಅಷ್ಟೇ ಚಾಲಾಕಿನಿಂದ ಪೇರಳೆ ಕೊಯ್ದು ಕಿಸೆಗೆ ಹಾಕುತ್ತಿದ್ದ. ಕರ್ಣನನ್ಯಾರಾದರೂ ಹುಡುಕುತ್ತಿದ್ದರೆ, `ಪೇರಳೆ ಮರದಲ್ಲಿರಬಹುದು' ಎಂಬ ಉತ್ತರ ಮೊದಲು ಬರುತ್ತಿತ್ತು.
<br />
<br />ಒಮ್ಮೆ ಹೀಗಾಯ್ತು. ಕರ್ಣ ಆಗಷ್ಟೇ ಹಂಡೆಗೆಲ್ಲ ನೀರು ತುಂಬಿಸಿ, ಎಂದಿನಂತೆ ಪೇರಳೆ ಮರದ ಗೆಲ್ಲೊಂದರಲ್ಲಿ ಕೂತು ಪೇರಳೆ ಅಗಿಯುತ್ತಿದ್ದ. ಮೂಲೆಮನೆ ಇಸುಬು ತೋಟದ ಕೆಲಸ ಮುಗಿಸಿ ಪೇರಳೆ ಮರದಡಿಯಿಂದಾಗಿ ಮನೆಗೆ ಹೋಗುತ್ತಿದ್ದ. ಏನಕ್ಕೋ ಒಮ್ಮೆ ಮೇಲೆ ನೋಡಿ ಕರ್ಣನತ್ತ ನೋಡಿ ನಕ್ಕು, ಪಕ್ಕ ನೋಡಿದವನು, `ಹಾವು ಹಾವು ..' ಅಂತ ಜೋರಾಗಿ ಬೊಬ್ಬೆಹೊಡೆದ. ಕರ್ಣ ಅತ್ತ ನೋಡುತ್ತಾನೆ. ದಪ್ಪದ ಕಪ್ಪು ಹಾವೊಂದು ಪಕ್ಕದ ಗೆಲ್ಲಿಗೇ ಸುತ್ತಿಕೊಂಡಿದೆ. ಆ ಕ್ಷಣ ಹೆದರಿ ಏನು ಮಾಡುವುದೆಂದು ಗೊತ್ತಾಗದೇ ಕೈಕಾಲು ನಡುಗತೊಡಗಿತು. ಕಣ್ಣುಕತ್ತಲೆ ಬಂದಂತಾಗಿ ಕೆಳಗೆ ಬಿದ್ದೇಬಿಟ್ಟ. ಪುಣ್ಯಕ್ಕೆ ಕಾಲು ಗಂಟು ತರಚಿದ್ದು ಬಿಟ್ಟರೆ ದೊಡ್ಡಪೆಟ್ಟೇನೂ ಆಗಲಿಲ್ಲ.
<br />
<br />ಇನ್ನಾದರೂ ಆ ಮರ ಹತ್ತಬೇಡ ಮಾರಾಯ ಅಂತ ಅಜ್ಜ ಬುದ್ದಿ ಹೇಳಿದ್ದೇ ಬಂತು. ಕಾಲು ಸರಿಯಾಗುವ ಮೊದಲೇ ಮತ್ತೆ ಮರ ಹತ್ತಿದ್ದ. `ಅವನು ಹುಟ್ಟಾ ಮಂಗ' ಅಂತ ಅಜ್ಜ ಗೊಣಗುತ್ತಿದ್ದರು.
<br />
<br />ಕರ್ಣನ ಅಮ್ಮನ ಹೆಸರು ಕಮಲ ಅಂತ. ನಾನವಳನ್ನು ನೋಡಿದ ನೆನಪಿಲ್ಲ. ಅವಳು ಕರ್ಣನನ್ನು ನೋಡಲು ಬರುತ್ತಿದ್ದದ್ದು ಕಡಿಮೆ. ಅವಳಿದ್ದದ್ದು ಕನ್ಯಾನದಲ್ಲಿ. ಅಜ್ಜನ ಮನೆ ಮೇಲಿದ್ದ ಪದವನ್ನು ದಾಟಿದರೆ ಸಿಗುವುದು ಕಳೆಂಜಿಮಲೆ ಕಾಡು. ಒಂದು ಕಾಲಕ್ಕೆ ಹೆಬ್ಬುಲಿಯಿದ್ದ ಕಾಡದು. ಈಗ ಬೋಳುಗುಡ್ಡ. ಫಾರೆಸ್ಟಿವರು ನೆಟ್ಟ ಒಂದಿಷ್ಟು ಗಾಳಿಗಿಡ, ಅಕೇಶಿಯಾ ಗಿಡಗಳನ್ನು ಬಿಟ್ಟರೆ,ಒಂದಿಷ್ಟು ಸಣ್ಣಪುಟ್ಟ ಮರಗಳಿವೆಯಷ್ಟೇ. ಕಳಂಜಿಮಲೆ ಕಾಡನ್ನು ಹತ್ತಿ ಇಳಿದರೆ ಆ ಬದಿಗಿರುವುದು ಕನ್ಯಾನ. ಸಣ್ಣ ಊರು. ಕರ್ಣ ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಿದ್ದ. ಒಮ್ಮೊಮ್ಮೆ ಪೆಪ್ಪರಮೆಂಟು ತಂದುಕೊಡುತ್ತಿದ್ದ. ಇಲ್ಲವಾದರೆ ನೆಲ್ಲಿಕಾಯಿ. ಪೆಪ್ಪರಮೆಂಟನ್ನು ಚಪ್ಪರಿಸಿ ತಿನ್ನುತ್ತಿದ್ದ ನನಗೆ ನೆಲ್ಲಿಕಾಯಿ ಅಷ್ಟಕ್ಕಷ್ಟೇ. ಕರ್ಣ ಕೊಟ್ಟ ನೆಲ್ಲಿಕಾಯನ್ನು ಅಮ್ಮ, ಚಿಕ್ಕಮ್ಮ ಇಷ್ಟಪಟ್ಟು ತಿನ್ನುತ್ತಿದ್ದರು.
<br />
<br />ಇಲ್ಲಿ ಕರ್ಣ ಇದ್ದದ್ದು ಸಂಕಮ್ಮನ ಮನೆಯಲ್ಲಿ. ತಗ್ಗಿನಲ್ಲಿದ್ದ ಅಜ್ಜನ ಮನೆಯಿಂದ ಮೇಲೆ ಹತ್ತಿ ಬ್ಯಾರಿಗಳ ಗದ್ದೆ ದಾಟಿದರೆ ಸಿಗುವ ಮೊದಲ ಮನೆ ಮಮ್ಮದೆ ಬ್ಯಾರಿಯದ್ದು. ಎರಡನೇ ಮನೆ ಸಂಕಮ್ಮಂದು. ಮಣ್ಣಿನ ಮನೆ. ಸೆಗಣಿ ಬಳಿದು ಚೆನ್ನಾಗಿ ಗುಡಿಸಿದ್ದ ಅಂಗಳದಲ್ಲಿ ಅಲ್ಲಲ್ಲಿ ಕೋಳಿ ಹಿಕ್ಕೆ. ಚಪ್ಪಲಿ ಇಲ್ಲದೆ ಹೋದರೆ ಅಂಟಿನಂತೆ ಕಾಲಿಗಂಟಿಕೊಳ್ಳುತ್ತಿತ್ತು. ಪಕ್ಕಕ್ಕೆ ತೆಂಗಿನ ಸಸಿ. ಆಗಾಗ ಹೂಬಿಡುತ್ತಿದ್ದ ಅರಸಿನ ಬಣ್ಣದ ಅಬ್ಬಲ್ಲಿಗೆ ಗಿಡ, ಮದರಂಗಿ ಗಿಡ. ಒಂದೆರಡು ಬಾರಿ ಕರ್ಣ ಅದರ ಎಲೆಕೊಯಿದು ಕೊಟ್ಟಿದ್ದ.
<br />
<br />ನಮಗೆಲ್ಲ ಆಗ ಮದರಂಗಿ ಹಾಕಿಕೊಳ್ಳುವ ಹುಚ್ಚು. ಹಳ್ಳಿಯಾದ ಕಾರಣಕ್ಕೋ ಏನೋ, ಆಗೆಲ್ಲ ಮೆಹಂದಿ ಕೋನ್ಗಳ ಬಳಕೆ ನಮಗೆ ತಿಳಿದಿರಲಿಲ್ಲ. ಮದುರಂಗಿ ಗಿಡದ ಎಲೆ ಕೊಯ್ದು, ಅದಕ್ಕೆ ಟೀ ಡಿಕಾಕ್ಷನ್, ಕೆಂಪಿರುವೆ ಮತ್ತೂ ಏನೇನೆಲ್ಲ ಹಾಕಿ ಕಲ್ಲಿನಲ್ಲಿ ಅರೆಯುತ್ತಿದ್ದರು. ನಾವೆಲ್ಲ ಅರೆಯುವಷ್ಟು ದೊಡ್ಡವರಲ್ಲದ ಕಾರಣ ನಮಗೆ ಶಾಲೆಯಲ್ಲಿ ಬೇರೆ ಮಕ್ಕಳ ಕೈ ನೋಡಿ ಆಸೆ ಬಿಡುವುದಷ್ಟೇ ಆಗಿತ್ತು. ಆದರೂ ಕರ್ಣ ಕೊಟ್ಟ ಮದುರಂಗಿ ಎಲೆಯನ್ನು ಕೊಟ್ಟಿಗೆಯ ಹಿಂದಿದ್ದ ಕಲ್ಲಿನಲ್ಲಿ ಜಜ್ಜಿ ಕೈಗೆ ಹಾಕಿಕೊಳ್ಳುತ್ತಿದ್ದೆ. ಹೌದೋ ಅಲ್ಲವೋ ಎಂಬಂತೆ ನಸು ಹಳದಿ ರಂಗು ಬರುತ್ತಿತ್ತು. ಅಜ್ಜನ ಮನೆಯೊಳಗೆ ಅದಕ್ಕೆ ಪ್ರವೇಶ ಇರಲಿಲ್ಲ. ಮದರಂಗಿಯನ್ನು ಅಜ್ಜ, ಅಜ್ಜಿ ಎಲ್ಲ ಅಸ್ಪ್ರಶ್ಯವಾಗಿ ಕಾಣುತ್ತಿದ್ದರು.
<br />
<br />ರಂಜಾನ್ ಹಬ್ಬದ ದಿನ ಮದರಂಗಿ ಕೊಯಿದು ಕೊಡಲು ಜುಬ್ಬಿ, ಯಾಸ್ಮಿನ್ ಕರ್ಣನಿಗೆ ದುಂಬಾಲು ಬೀಳುತ್ತಿದ್ದರು. ಜೋರು ಮಳೆಬಂದು ನಿಂತಾಗ ತುಸು ಎತ್ತರಕ್ಕೆ ವಿಶಾಲವಾಗಿ ಹಬ್ಬಿದ ಮದುರಂಗಿ ಗಿಡದಡಿ ನಾವು ಒಂದಿಷ್ಟು ಮಕ್ಕಳು ಓಡಿ ಹೋಗಿ ನಿಂತುಬಿಡುತ್ತಿದ್ದೆವು. ಆಗಾಗ ಬೀಸುವ ಗಾಳಿಗೆ ಎಲೆಗಳಿಂದ ನೀರು ಮೈಮೇಲೆ ಬಿದ್ದಾಗ ಕಚಗುಳಿಯಿಟ್ಟಂತೆ ನಗುತ್ತಿದ್ದೆವು. ಈ ಗಿಡದ ಪಕ್ಕದಲ್ಲೇ ಕೊಟ್ಟಿಗೆ. ಅಲ್ಲಿ ಬಟ್ಟಿ ಮುಚ್ಚಿದಲ್ಲಿಂದಲೇ ಕ್ಕೊಕ್ಕೋ ಎನ್ನುತ್ತಿದ್ದ ಕೋಳಿ.
<br />
<br />ಇನ್ನು ಮಣ್ಣಿನ ಮನೆಯೊಳಗೆ ಹೋದರೆ ಎದುರಲ್ಲೇ ಅಡಿಕೆ ಮರದ ತಟ್ಟಿಯ ಮೇಲೆ ಹರಡಿದ್ದ ಕೊರಗಜ್ಜನ ಕೋಮಣ (ಲಂಗೋಟಿ). ಕೊರಗಜ್ಜ ಕರ್ಣನ ಅಜ್ಜ. ಅಜ್ಜನ ಮನೆಯಲ್ಲಿ ಭೂತದ ಕೋಲ ನಡೆಯುವಾಗ ಅವನಿಗೆ ಮೈಮೇಲೆ ದರ್ಶನ ಬರುತ್ತಿತ್ತು. ಕೋಮಣದ ಪಕ್ಕದಲ್ಲೇ ಕರ್ಣನ ಹರಿದ ಬಟ್ಟೆಗಳು. ನೆಲದಲ್ಲಿ ಬೀಡಿಎಲೆ ತಟ್ಟೆ. ಸಂಕಮ್ಮ ಬಿಡುವಿದ್ದಾಗಲೆಲ್ಲ ಸ್ಟೀಲಿನ ಉಗುರನ್ನು ಬಿಸಿ ಮಾಡಿ ಉಗುರಿಗೆ ಅಂಟಿಸಿ, ರಪ ರಪನೆ ಬೀಡಿ ಕಟ್ಟುತ್ತಿದ್ದಳು.
<br />
<br />ಮಣ್ಣಿನ ಮನೆಯಾದ ಕಾರಣ ಕರ್ಣನ ಮನೆಯೊಳಗೆ ಕಾಲಿಟ್ಟರೆ ತಂಪು ತಂಪು. ಒಳಗಿಂದ ಕಮಟು ಪರಿಮಳ. ನಾನು ಅವರ ಮನೆಗೆ ಹೋದಾಗ ಸಂಕಮ್ಮ ಅಲ್ಲಿದ್ದರೆ ಸಾಂತಾಣಿ ಕೊಡುತ್ತಿದ್ದಳು. ಆ ಗಟ್ಟಿ ಬೇಳೆಯನ್ನು ಅಗಿಯಲು ಪ್ರಯತ್ನಿಸಿ ಆಗದೇ ಕೊನೆಗೆ ಚಾಕೊಲೇಟ್ನಂತೆ ಚೀಪುತ್ತಿದ್ದೆ. ಉಪ್ಪು ಸೇರಿಸಿದ್ದ ಕಾರಣ ಒಳ್ಳೆ ರುಚಿ ಇರುತ್ತಿತ್ತು. ಆಮೇಲೆ ಕರ್ಣನ ಜತೆ ಚೆನ್ನಮಣೆ ಆಡುತ್ತಿದ್ದೆ.
<br />
<br />ಕರ್ಣ ಶಾಲೆಗೆ ಹೋದದ್ದು ನನಗೆ ನೆನಪಿಲ್ಲ. ಆದರೆ ನನಗೆ ಸರಿಯಾಗಿ ಬರೆಯಲು ಕಲಿಸಿದ ಅಮ್ಮನ ನಂತರದ ಗುರು ಅವನೇ. ನಾನು `ಇ' ಉಲ್ಟಾ ಬರೆಯುತ್ತಿದ್ದೆ. ಅಮ್ಮ ಎಷ್ಟು ಸಲ ಹೇಳಿಕೊಟ್ಟರೂ ಸರಿಯಾಗುತ್ತಿರಲಿಲ್ಲ. ಕೈಗಂಟಿನ ಮೇಲೆ ಹೊಡೆದರೂ ನನ್ನ `ಇ' ಉಲ್ಟವೇ. ಅದ್ಹೇಗೋ ಕರ್ಣ ಅದನ್ನು ಸರಿ ಮಾಡಿಬಿಟ್ಟ. ನಂಗೆ ಕಾಪಿ ಬರೆಯಲು ಹೇಳಿಕೊಟ್ಟದ್ದೂ ಸಹ. ಅಜ್ಜನ ಮನೆಯ ಹೊರಜಗುಲಿಯಲ್ಲಿ ಕುಳಿತು ಕಾಪಿ ಬರೆಸುತ್ತಿದ್ದ. ಕೆಲವೊಮ್ಮೆ ಅವನೇ ಬರೆದುಕೊಡುತ್ತಿದ್ದ. ಆಮೇಲೆ ನಾನು ಕಾಪಿ ಬರೆದುಕೊಡು ಅಂತ ಆಗಾಗ ಅವನಲ್ಲಿ ಗೋಗರೆಯುತ್ತಿದ್ದೆ. ಕದ್ದುಮುಚ್ಚಿ ಬರೆದುಕೊಡುತ್ತಿದ್ದ. ಒಂದು ಸಲ ಅಮ್ಮನಿಗೆ ಗೊತ್ತಾಗಿ ಅವರು ಬೈದ ಮೇಲಿಂದ ಏನು ಮಾಡಿದರೂ ಬರೆದುಕೊಡಲಿಲ್ಲ.
<br />
<br />...`ನೋಡು, ಆ ಪದವಿನ ಈ ತುದಿಯಲ್ಲಿ ಗುಳಿಗ ಭೂತ ಉಂಟು. ನಡು ರಾತ್ರಿ ಗುಳಿಗನ ಸಂಚಾರ. ಆ ಹೊತ್ತಲ್ಲಿ ಅಲ್ಲಿಯಾಗಿ ಬಂದರೆ ಗುಳಿಗನ ಸೂಟೆ ಕಾಣ್ತದಂತೆ.' ಒಂದು ಸಂಜೆ ಹೊರಜಗುಲಿಯಲ್ಲಿ ಕೂತು ಕರ್ಣ ಗುಳಿಗನ ಕತೆ ಹೇಳುತ್ತಿದ್ದ.
<br />`ಆ ಭೂತ ಯಾರಿಗೂ ಹೆದರುವುದಿಲ್ಲ. ಮೊನ್ನೆ ರಾತ್ರಿ ಅಜ್ಜ ಕುಡ್ತಮೊಗೇರಿಂದ ಬರುವಾಗ ಲೇಟಾಗಿತ್ತು. ಕೈಯಲ್ಲಿ ಟಾಚರ್್ ಕೂಡಾ ಇರ್ಲಿಲ್ಲ. ಪದವಿನ ಹತ್ತಿರ ಬರುವಾಗ ಗುಡ್ಡದ ಕಡೆಯಿಂದ ಕೆಂಪು ಲೈಟಿನ ಹಾಗೆ ಎಂತದೋ ಕಂಡಿತಂತೆ. ಯಾವುದೋ ಜೀಪು ಆಗಿರಬಹುದು ಅಂತ ಅಜ್ಜ ಸುಮ್ಮನೇ ಹೋದರಂತೆ. ಯಾಕೋ ಡೌಟು ಬಂದು ಸ್ವಲ್ಪ ಮುಂದೆ ಹೋಗಿ ನೋಡಿದರೆ ಯಾರೋ ಎರಡೂ ಕೈಯಲ್ಲಿ ಕೆಂಪು ಲೈಟು ತಿರುಗಿಸಿದ್ದು ಕಂಡಿತಂತೆ. ಆಗ ಅಜ್ಜನಿಗೆ ಫಕ್ಕ ಇದು ಗುಳಿಗ ಸೂಟೆ ಬೀಸುವುದು ಅಂತ ಗೊತ್ತಾಯ್ತಂತೆ.'
<br />
<br />`ಮತ್ತೆಂತಾಯ್ತು? ' ಕುತೂಹಲ ಬೆರೆತ ನನಗೆ ಆಗಲೇ ಗಡಗಡ ಶುರುವಾಗಿತ್ತು.
<br />`ಮತ್ತೆಂತಾಗುವುದು ನನ್ನಜ್ಜ ಎದ್ದುಬಿದ್ದು ಓಡಿ ಬಂದರಂತೆ. ಮತ್ತೆರಡು ದಿನ ಅಜ್ಜನಿಗೆ ಜೋರು ಜ್ವರ. ಅಜ್ಜಿ ಹರಕೆ ಕಟ್ಟಿಕೊಂಡ ಮೇಲೇ ಜ್ವರ ನಿಂತದ್ದು.' ಅಂದು ನಿಲ್ಲಿಸಿದ.
<br />`ಏ ಕರ್ಣ ಈ ಭೂತ ಜೋರಾ, ಪಾಪವಾ?'
<br />`ಭೂತ ಪಾಪ ಇರುವುದುಂಟಾ? ಜೋರು ಅಂದರೆ ಜೋರು. ನೀನೆಲ್ಲಾದರೂ ಸೂಟೆ ನೋಡಿದರೆ, ಚಡ್ಡಿಯಲ್ಲೇ ಮೂತ್ರ, ಹೆ ಹೆ!'
<br />`ಭೂತ ನಮ್ಗೆನಾದ್ರೂ ಮಾಡ್ತದಾ ಕರ್ಣ?'
<br />...ಅಷ್ಟರಲ್ಲಿ ಅಜ್ಜ ಕರ್ಣನನ್ನು ಕರೆದದ್ದು ಕೇಳಿಸಿತು. ಒಂದೇ ಓಟದಲ್ಲಿ ಅಂಗಳದ ತುದಿಗೆ ಹೋಗಿ ವೀಳ್ಯದೆಲೆ ಕೊಯ್ಯತೊಡಗಿದ.
<br />
<br />ಆದಿನ ರಾತ್ರಿ ಟಾಯ್ಲೆಟ್ಟಿಂದ ಅಡಿಗೆ ಮನೆಯವರೆಗೂ ಅಮ್ಮನ ಜತೆಗೇ ಓಡಾಡುತ್ತಿದ್ದೆ. ನಿದ್ದೆಯಲ್ಲೂ ಕಿರಿಚುತ್ತಿದ್ದೆನಂತೆ. ಆಮೇಲೆ ನಾನೆಷ್ಟು ಸಲ ಗುಳಿಗನ ಕಥೆ ಕೇಳಿದರೂ ಕರ್ಣ ಏನೇನೋ ಹೇಳಿ ವಿಷಯ ಹಾರಿಸುತ್ತಿದ್ದ. `ಮಗುವಿಗೆ ಏನೆಲ್ಲ ಹೇಳಿ ಹೆದರಿಸ್ತೀಯಾ' ಅಂತ ಅಜ್ಜ ಅವನನ್ನು ಕರೆದು ಬಯ್ದಿದ್ದರಂತೆ. ನನಗೆ ಆಮೇಲೆ ಸಂಕಮ್ಮ ಹೇಳಿದಾಗಲೇ ಈ ವಿಷಯ ಗೊತ್ತಾದದ್ದು.
<br />
<br />ನಾವು ಕೆವರ್ಾಶೆಗೆ ಮೊದಲ ಬಾರಿ ಹೋದಾಗ ಅಲ್ಲಿಗೂ ಕರ್ಣ ಬಂದಿದ್ದ. ಒಂದೆರಡು ದಿನ ಇದ್ದು ಹೋಗಿದ್ದ. ನಾನಾಗ ನಾಲ್ಕನೇ ಕ್ಲಾಸ್. ಅಲ್ಲಿ ನಾವಿಬ್ಬರೂ ಹೊಳೆಗೆ ಈಜಾಡಲು ಹೋದರೆ ಅಮ್ಮ ಬಂದು ಬೈದ ಮೇಲೇ ಮನೆಗೆ ವಾಪಾಸಾಗುತ್ತಿದ್ದದ್ದು. ಕರ್ಣ ಈಜುತ್ತಿದ್ದ. ನಾನೂ ಅವನ ಹಾಗೇ ಈಜಲು ಪ್ರಯತ್ನಿಸಿ ಉಸಿರುಗಟ್ಟಿ ನೀರು ಕುಡಿದಿದ್ದೆ.
<br />
<br />...ಈಗ ಕರ್ಣ ಎಲ್ಲಿದ್ದಾನೆ ಹೇಗಿದ್ದಾನೆ ಗೊತ್ತಿಲ್ಲ. ತುಂಬ ವರ್ಷದ ಹಿಂದೆಯೇ ಸಂಕಮ್ಮ ಮತ್ತು ಕರ್ಣ ಕನ್ಯಾನ ಹತ್ತಿರ ಎಲ್ಲೋ ಸಂಬಂಧಿಕರ ಮನೆಗೆ ಹೋಗಿದ್ದರು. ಮತ್ತೆ ವಾಪಾಸು ಬರಲಿಲ್ಲ. ಆಮೇಲೆ ಅವರ ಸುದ್ದಿಯೂ ಇರಲಿಲ್ಲ.
<br />
<br />ಮೊನ್ನೆ ಮಳೆ ನೋಡಬೇಕೆಂದು ಅಜ್ಜನ ಮನೆಗೆ ಹೋಗಿದ್ದೆ. ಕಾರ್ಕಳದಿಂದಲೇ ಮಳೆ, ಮಳೆ..ಬಸ್ಸಿನಲ್ಲಿ ಸಿಕ್ಕಾಬಟ್ಟೆ ರಶ್ಶು. ವಿಟ್ಲದಲ್ಲಿ ಶಾಲೆ ಮಕ್ಕಳ ಗೌಜಿ. ಅವರ ಒದ್ದೆ ಯುನಿಫಾಮರ್್, ಚಂಡಿ ಕೊಡೆ ಮೈಮೇಲೆಲ್ಲ ಬಿದ್ದು ಕಿರಿಕಿರಿಯಾಗ್ತಿತ್ತು. ವಿಟ್ಲದಿಂದ ಸ್ವಲ್ಪ ಮುಂದೆ ಹಳ್ಳಿ ಹೆಣ್ಣುಮಗಳು ಪುಟಾಣಿ ಹುಡುಗಿಯೊಂದಿಗೆ ಬಸ್ಸು ಹತ್ತಿದಳು. ಆ ರಶ್ಶಿನಲ್ಲಿ ಬ್ರೇಕ್ ಹಾಕಿದಾಗ ಪುಟ್ಟ ಹುಡುಗಿ ಕೆಳಗೆ ಬೀಳದ್ದು ಪುಣ್ಯ.
<br />
<br />ನನಗೆ ಸೀಟು ಸಿಕ್ಕಿದ ಕಾರಣ ಹುಡುಗಿಯನ್ನು ಪಕ್ಕಕ್ಕೆ ಕರೆದು ಹತ್ತಿರ ಕೂರಿಸಿಕೊಂಡೆ. ಯಾಕೋ ಪರಿಚಿತ ಮುಖ ಅನಿಸತೊಡಗಿತು. ನಾನು ನಕ್ಕಾಗ ಅದೂ ನಕ್ಕಿತು. ಏನು ಹೆಸರು ಅಂತ ಕೇಳಿದೆ. `ಪ್ರಿಯಾ' ಅಂದಿತು. ನನ್ನ ಹೆಸರೇ ಇಟ್ಟುಕೊಂಡಿದೆಯಲ್ಲಾ ಹುಡುಗಿ ಅಂದುಕೊಂಡೆ. ಪಕ್ಕ ನಿಂತಿದ್ದ ಅದರಮ್ಮನ ಹತ್ತಿರ `ಯಾವೂರು?' ಅಂತ ಕೇಳಿದೆ. `ಕನ್ಯಾನ' ಅಂದಳು. ಅದ್ಯಾಕೋ, ಇದ್ದಕ್ಕಿದ್ದ ಹಾಗೆ, `ಅಲ್ಲಿ ಕರ್ಣ ಅಂತ ಯಾರಾದರೂ ಗೊತ್ತಾ' ಅಂತ ಕೇಳಿದೆ. ಅವಳು ನಕ್ಕು `ಇವಳಪ್ಪನ ಹೆಸರೂ ಅದೇ' ಅಂದಳು !
<br />ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com11tag:blogger.com,1999:blog-1312989296248046531.post-47796477229521560402011-08-02T03:49:00.000-07:002011-08-02T03:52:21.088-07:00ಮತ್ತೆ ಬರೆಯುತ್ತೇನೆಒಂದು ಅರೆ ಮಂಪರಿನ ನಿದ್ದೆ. ಈಗ ಏಳಬೇಕೆನಿಸಿದೆ. ಮಲಗಿಕೊಂಡೇ ಕಣ್ಬಿಟ್ಟು ನೋಡುತ್ತಿದ್ದೇನೆ. ಅಯೋಮಯ ಜಗತ್ತು.<br />ಮೈಕೊಡವಿಕೊಂಡು ಏಳುವುದಷ್ಟೇ ನನ್ನ ಮುಂದಿರುವ ಗುರಿ.<br /><br />.........ಮತ್ತೆ ಹೂ ಪೋಣಿಸಲು ಶುರುವಿಟ್ಟಿದ್ದೇನೆ.ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com2tag:blogger.com,1999:blog-1312989296248046531.post-54660626088972644822009-06-25T08:13:00.000-07:002009-06-25T08:17:42.359-07:00ಅಪ್ಪನ ಕೈ ಹಿಡಿದು..<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjXwFaVo2Ore5ojPbvMR6XRsLs62gV1qPU1eGY3NbAlH2OYjlv3Agow61KawzJeasTnxaDaeYatrKBxrYSG1mgEPz8qniR2bZankzAM4qAf7fBoVI8psmJFWTtDWLWwDgjk9W_2KW-_dbs/s1600-h/sss1.jpg"><img style="margin: 0pt 0pt 10px 10px; float: right; cursor: pointer; width: 320px; height: 240px;" src="https://blogger.googleusercontent.com/img/b/R29vZ2xl/AVvXsEjXwFaVo2Ore5ojPbvMR6XRsLs62gV1qPU1eGY3NbAlH2OYjlv3Agow61KawzJeasTnxaDaeYatrKBxrYSG1mgEPz8qniR2bZankzAM4qAf7fBoVI8psmJFWTtDWLWwDgjk9W_2KW-_dbs/s320/sss1.jpg" alt="" id="BLOGGER_PHOTO_ID_5351284321180908162" border="0" /></a><br />‘ಈ ಕಾಡು ಯಾರದ್ದು?’<br /><br />ಸರ್ಕಾರದ್ದು.<br /><br />ಸರ್ಕಾರ ಅಂದ್ರೆ ಯಾರಪ್ಪ? ಅವ್ರು ತುಂಬಾ ಶ್ರೀಮಂತರಾ?<br /><br />ಸರ್ಕಾರ ಅಂದ್ರೆ ಜನ ಅಲ್ಲ ಪುಟ್ಟಾ, ನಾವೆಲ್ಲ ಸೇರಿ ಸರ್ಕಾರ ಮಾಡುವುದು.<br /><br />ಹೌದಾ? ಅದು ಹೇಗಿರ್ತದೆ? ತುಂಬಾ ದೊಡ್ಡದಾ?<br /><br />ಊಹೂಂ, ಅದು ವಸ್ತು ಅಲ್ಲ, ಅದನ್ನು ನಿಂಗೆ ಹೇಗೆ ಹೇಳೂದಪ್ಪಾ, ನಾವೆಲ್ಲ ಸೇರಿ ಮಾಡಿದ ಒಂದು ವ್ಯವಸ್ಥೆ!<br />ಹಂಗಂದ್ರೆ?<br /><br />ನೀನು ದೊಡ್ಡವಳಾದ ಮೇಲೆ ಅರ್ಥ ಆಗ್ತದೆ.<br /><br />ನಾನು ಯಾವಾಗ ದೊಡ್ಡವಳಾಗುವುದು?<br /><br />ಇನ್ನೊಂದು ಏಳೆಂಟು ವರ್ಷ ಆದ್ಮೇಲೆ.<br /><br />ಆಗ ನೀನೆಷ್ಟು ದೊಡ್ಡ ಆಗಿರ್ತೀಯಾ ಅಪ್ಪಾ?<br /><br />ನಾನಿನ್ನು ದೊಡ್ಡ ಆಗುವುದಿಲ್ಲ. ಮುದುಕ ಆಗುವುದು..ಹ ಹ್ಹ..ಹ್ಹಾ..<br /><br />ಅಜ್ಜನ ಮನೆ ದಾಟಿದ ಕೂಡ್ಲೇ ಶುರುವಾಗುತ್ತಿದ್ದ ನನ್ನ ಪ್ರಶ್ನೆಗಳು ಮನೆ ಬಂದರೂ ಮುಗಿಯುತ್ತಿರಲಿಲ್ಲ.<br /><br />....ನಾನು ಆಗ ಅಜ್ಜನ ಮನೆಯಲ್ಲಿ ಶಾಲೆಗೆ ಹೋಗ್ತಿದ್ದೆ. ಪ್ರತೀ ಶನಿವಾರ ಅಪ್ಪ ಬಂದು ನಮ್ಮ ಮನೆಗೆ ಕರಕೊಂಡು ಹೋಗ್ತಿದ್ರು. ಮಧ್ಯಾಹ್ನ ಶಾಲೆ ಬಿಟ್ಟು ಓಡುತ್ತಾ ಬರುವಾಗ ಅಜ್ಜನ ಮನೆಯಲ್ಲಿ ಅಪ್ಪ ಕಾಯುತ್ತಾ ಕೂತಿರುತ್ತಿದ್ದರು. ನಾನು ಕೈ ಕಾಲೂ ತೊಳೆಯದೇ ಅತ್ತೆ ಕೈಯಲ್ಲಿ ಬೈಸಿಕೊಳ್ಳುತ್ತಾ ಊಟ ಮಾಡಿ ಅಪ್ಪನ ಕೈ ಹಿಡಿದು ಮನೆಗೆ ಹೊರಡುತ್ತಿದ್ದೆ.<br /><br />ಅಜ್ಜನ ಮನೆಯ ಹಿಂದಿನ ಕೊಟ್ಟಿಗೆಯನ್ನು ದಾಟಿ ಐತಪ್ಪನ ಮನೆ ಪಕ್ಕದ ಓಣಿ ಹತ್ತಿ, ನಡೆಯುತ್ತಿದ್ದೆವು. ಆಗೆಲ್ಲ, ತಿರು ತಿರುಗಿ ಮೂರು ಉಪ್ಪರಿಗೆಯ ದೊಡ್ಡ ಬೂತ ಬಂಗಲೆ ಹಾಗಿದ್ದ ಅಜ್ಜನ ಮನೆಯನ್ನು ನೋಡುತ್ತಾ ಹೋಗ್ತಾ ಇದ್ದೆ.<br /><br />ಆ ಓಣಿ ದಾಟಿ ಸಾಗಿದ್ರೆ ಮುಂದೆ ದೊಡ್ಡ ಪದವು (ಕಾಡಿನ ಮಧ್ಯದ ಬಯಲು ಭೂಮಿ), ಅದನ್ನು ದಾಟಿದ ಕೂಡ್ಲೆ ಕಳಂಜಿಮಲೆ ಸಿಗುತ್ತಿತ್ತು. ಅಲ್ಲೆಲ್ಲ ಆಗ್ಲೇ ಕಾಡು ಕಡಿದು ಅದ್ರ ಬದಲಿಗೆ ಗಾಳಿ ಗಿಡಗಳನ್ನ ನೆಡುತ್ತಿದ್ದರು. ಅದು ಸರ್ಕಾರಿ ಭೂಮಿ. ನಂಗೆ ಆಗ ಪ್ರತಿಯೊಂದರ ಬಗೆಗೂ ಕುತೂಹಲ... ಪದೇ ಪದೇ ಪ್ರಶ್ನೆ ಕೇಳುತ್ತಿದ್ದೆ.<br /><br />ಅಪ್ಪ ನನ್ನ ಬಾಲಿಶ ಪ್ರಶ್ನೆಗಳನ್ನ ಕೇಳಿ ಬೈಯುತ್ತಿರಲಿಲ್ಲ. ಕಾಡು ದಾರಿಯಲ್ಲಿ ನಡೆದೂ ನಡೆದೂ ಸುಸ್ತಾದಾಗ ಎತ್ತಿಕೊಂಡು ಹೋಗ್ತಿದ್ರು. ಅಲ್ಲಲ್ಲಿ ಹರಿಯುವ ನೀರ ಝರಿಯ ಹತ್ತಿರ ಕರೆದುಕೊಂಡು ಹೋಗಿ ನೀರು ಕುಡಿಸ್ತಿದ್ರು. ಮೂರು ಗಂಟೆಗೆ ಅಜ್ಜನ ಮನೆಯಿಂದ ಹೊರಟ್ರೆ ನಾಲ್ಕು ಗಂಟೆಗೆ ಕನ್ಯಾನ ಬಸ್ ಸ್ಟಾಂಡ್ನಲ್ಲಿರ್ತಿದ್ದೆವು.<br /><br />ನಾಲ್ಕೂ ಹತ್ತಕ್ಕೆ ಬಾಯಾರು (ಕಾಸರಗೋಡು ಸಮೀಪದ ಪಟ್ಟಣ) ಮಾರ್ಗವಾಗಿ ಹೋಗುವ ಗವರ್ಮೆಂಟ್ ಬಸ್ ಹತ್ತುತ್ತಿದ್ದೆವು. ಬಸ್ಗೆ ಹತ್ತಿದ ಕೂಡ್ಲೇ ಅದೇನಾಗುತ್ತೋ, ಕಲಿತ ಮಗ್ಗಿ, ಪದ್ಯವನ್ನು ಜೋರಾಗಿ ಹೇಳ್ತಾ ಹೋಗ್ತಿದ್ದೆ. ಆಗ ಬಸ್ನಲ್ಲಿರುವವರೆಲ್ಲ ಹಿಂತಿರುಗಿ ನೋಡಿದಾಗ ಅಪ್ಪನಿಗೆ ಮುಜುಗರ. ನನ್ನ ಉತ್ಸಾಹ ಮತ್ತಷ್ಟು ಹೆಚ್ಚಾಗ್ತಾ ಇತ್ತು. ಕೊನೆಗೆ ಜಾಣೆ ಅಂತ ಬಸ್ನಲ್ಲಿದ್ದ ಒಂದಿಬ್ಬರು ಪ್ರಯಾಣಿಕರು ಬೆನ್ನು ತಟ್ಟಿದ್ರೆ ಭಾರೀ ಖುಷಿ.<br /><br />ನಾವು ಕಾಯರ್ಕಟ್ಟೆಯಲ್ಲಿ ಇಳಿದಾಗ ಕತ್ತಲು ಜಾಸ್ತಿಯಾಗುತ್ತಿತ್ತು. ಮಾರಪ್ಪ, ಗ್ಯಾಸ್ಲೈಟ್ ಬೆಳಕಿನಲ್ಲಿ ಬಟ್ಟೆ ಹೊಲಿಯುತ್ತಾ ಅಪ್ಪನಿಗೆ ಅಡ್ಡ ಸಲಾಂ ಹಾಕುತ್ತಿದ್ದ. ಗೂಡಂಗಡಿಗಳಲ್ಲಿ ನೇಂದ್ರ ಬಾಳೆಹಣ್ಣು, ಬೋಟಿ ಪ್ಯಾಕೆಟ್ ನೇತಾಡ್ತಾ ಇರ್ತಿತ್ತು. ಬಳೀ ಮುಂಡುಟ್ಟು, ತಲೆಗೂ ಅದೇ ಬಣ್ಣದ ಮುಂಡಾಸು ಕಟ್ಟಿ ಆಗಾಗ ಮುಂಡನ್ನ ಎತ್ತಿ ಹಿಡಿಯುತ್ತಾ ನಡೆಯುವ ಮುಸ್ಲಿಮ ಗಂಡಸರು ನೇರ ಬಾಳೇ ಹಣ್ಣಿಗೇ ಕೈ ಹಾಕಿ ನಾಜೂಕಿಂದ ಸಿಪ್ಪೆ ಜಾರಿಸಿ ತಿನ್ನುತ್ತಿದ್ದರೆ ನಂಗೂ ಆಸೆ. ಅಪ್ಪನತ್ರ ಹೇಳಿದ್ರೆ, ಮನೆಯಲ್ಲಿದೆ, ಅಲ್ಲೇ ತಿನ್ನುವೆಯಂತೆ ಅಂತಿದ್ರು. ಆದ್ರೆ ಮನೆಯಲ್ಲಿ ಎಷ್ಟು ಬಾಳೆ ಹಣ್ಣು ತಿಂದ್ರೂ ನಂಗೆ ಅಂಗಡೀ ಬದಿ ನೇತಾಡ್ತಾ ಇರೋ ಆ ಬಾಳೇ ಹಣ್ಣಿನಷ್ಟು ರುಚಿ ಅನ್ನಿಸ್ತಿರಲಿಲ್ಲ. ಕೆಲ ಕ್ಷಣ ಮೌನವಾಗಿ ಅಪ್ಪನನ್ನ ಹಿಂಬಾಲಿಸುತ್ತಿದ್ದೆ. ಕಾಯರ್ ಕಟ್ಟೆ ಪೇಟೆ ದಾಟಿದ್ರೆ, ಕಾಯರ್ಕಟ್ಟೆ ಪದವು. ನಮ್ಮ ಮನೆಗೆ ಅದನ್ನಿಳಿದು ಹೋಗಬೇಕು. ಕತ್ತಲಲ್ಲಿ ಅಪ್ಪನ ಕೈ ಹಿಡಿದು ಜಾರೆ ಕಲ್ಲಿನಲ್ಲಿ ಜಾರುತ್ತಾ ನಡೆಯುತ್ತಿದ್ದೆ.<br /><br />ಐದಾರು ಫರ್ಲಾಗ್ ಇಳಿಯುತ್ತಾ ಜಾರುತ್ತಾ ಹೋದಾಗ ನಮ್ಮ ಗೇರುಗುಡ್ಡೆ ಸಿಗುತ್ತಿತ್ತು. ಆ ಗುಡ್ಡೆ ಕೆಳಗೇ ನಮ್ಮ ಮನೆ.<br /><br />ಗುಡ್ಡೆ ದಾರಿಯಲ್ಲಿ ಬರುತ್ತಿರುವಾಗ ದೂರದ ಟವರ್ನಲ್ಲಿ ಮಿಣಿ ಮಿಣಿ ಕೆಂಪು ಲೈಟ್ ಕಾಣ್ತಾ ಇತ್ತು. ಅದು ಕಾಸರಗೋಡಿನ ರೇಡಿಯೋ ಸ್ಟೇಶನ್ ಅಂತ ಅಪ್ಪ ಹಿಂದೆಯೇ ಹೇಳಿದ್ರು. ಆ ಟವರ್ನಿಂದ ದನಿಯನ್ನ ಸ್ವರವನ್ನ ಗಾಳಿಯಲ್ಲಿ ತೇಲಿ ಬಿಟ್ಟರೆ ಅದು ನಮ್ಮ ರೇಡಿಯೋದೊಳಗೆ ಸೇರಿಕೊಂಡು ನಮಗೆ ಕೇಳ್ತಿತ್ತು. ಅದನ್ನು ಹತ್ತಿರದಿಂದ ಕಂಡೇ ಬರಬೇಕು ಅನ್ನುವ ಹುಚ್ಚು ಕುತೂಹಲ. ಅದನ್ನ ತಡೆದುಕೊಂಡು ಅಪ್ಪನ ಕೈ ಹಿಡಿದು ನಡೆಯುತ್ತಿದ್ದೆ.<br /><br />ಇನ್ನೇನು ಸ್ವಲ್ಪ ಮುಂದೆ ಕಲ್ಲಿನ ಮೆಟ್ಟಿಲು ಅದನ್ನು ಇಳಿದು ಹೋದ್ರೆ ಮನೆ. ನಾನು ಅಪ್ಪ ಮನೆಯೊಳಗೆ ಹೊಕ್ಕರೆ ಅಲ್ಲಿ ಮೌನ. ನಾನು ಜೋರಾಗಿ ಅಮ್ಮಾ ಅಂತ ಕರೆದ್ರೆ, ಶೂ...ಮಾತಾಡ್ಬೇಡ ಅಂತ ಸನ್ನೆ ಮಾಡ್ತಾ ಅಮ್ಮ ಬರ್ತಿದ್ಲು. ತಮ್ಮ ಮಲಗಿದಾನೆ ಅಂತ ಕಿವಿಯಲ್ಲಿ ಗುಟ್ಟಾಗಿ ಹೇಳಿ ಒಳಗೆ ಕರೆದುಕೊಂಡು ಹೋಗ್ತಿದ್ಲು.<br /><br />ನನಗೀಗ ಇಪ್ಪತ್ತನಾಲ್ಕು ವರ್ಷ. ಈ ಚಿತ್ರ ನಂಗೆ ಐದಾರು ವರ್ಷ ಆಗಿದ್ದಾಗಿನದು. ಅಂದು ಅಪ್ಪ ಹೇಳಿದ ಹಾಗೆ ನಾನೀಗ ದೊಡ್ಡವಳಾಗಿದ್ದೇನೆ. ಅಪ್ಪ ಮಧ್ಯವಯಸ್ಸಿಗೆ ಬಂದಿದ್ದಾರೆ. ಅಪ್ಪ ನನ್ನನ್ನೀಗ ಪುಟ್ಟಾ ಅಂತ ಅಷ್ಟು ಪ್ರೀತಿಯಿಂದ ಕರೆಯಲ್ಲ. ಹಿಂದಿನಂತೆ ಸಿಕ್ಕಾಬಟ್ಟೆ ಪ್ರಶ್ನೆ ಕೇಳಿ ಅಪ್ಪನ ತಲೆ ತಿನ್ನೋದಿಲ್ಲ. ಹಿಂದಿನ ಅಪ್ಪಂಗೂ ಇಂದಿನ ಅಪ್ಪಂಗೂ ತುಂಬಾ ಡಿಫರೆನ್ಸ್ ಇದೆ ಅಂತ ಆಗಾಗ ಅನ್ಸತ್ತೆ. ಅಫ್ಕೋರ್ಸ್ ನಾನೂ ಅಂದಿನಂತಿಲ್ಲ.<br /><br />ಆದ್ರೆ ಆಗಾಗ, ಹಾಗೇ ಅಪ್ಪನ ಕೈ ಹಿಡಿದು ಕಳಂಜಿಮಲೆ ಕಾಡು ಹಾದಿಯಲ್ಲಿ ನಡೆಯಬೇಕನಿಸತ್ತೆ. ಆಗ ನಾನು ದೊಡ್ಡೋಳಾಗೋ ಕನಸು...<br /><br />...ಈಗ ಮತ್ತೆ...ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com14tag:blogger.com,1999:blog-1312989296248046531.post-69865313565829831632009-03-09T08:01:00.000-07:002009-03-17T09:23:54.988-07:00ಮುದ್ದು ಬರೆದ ಮಳೆ ಸಾಲುಗಳ ನೆನಪು<a href="https://blogger.googleusercontent.com/img/b/R29vZ2xl/AVvXsEhVt88KUu9ibSuGi0TEBdMIdq2yCGoZW94C7cpQcJm_qJShc0FXumK6JmIeOVTUHVDdnawKYWOQ_DR6TQbQzQNOmRb0FYsxUUXw5w78Y_23TkbYQFbo5-4941BeblK3zjqkI0VfyoFa11o/s1600-h/rain.bmp"><img id="BLOGGER_PHOTO_ID_5314192487308960658" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 213px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEhVt88KUu9ibSuGi0TEBdMIdq2yCGoZW94C7cpQcJm_qJShc0FXumK6JmIeOVTUHVDdnawKYWOQ_DR6TQbQzQNOmRb0FYsxUUXw5w78Y_23TkbYQFbo5-4941BeblK3zjqkI0VfyoFa11o/s320/rain.bmp" border="0" /></a><br /><div>ಯಾಕೋ ಆಗಸ ಬಿಕ್ಕುತಿದೆ</div><br /><br /><div>ಹುಣ್ಣಿಮೆ ಕಡಲೂ ಉಕ್ಕುತಿದೆ</div><br /><br /><div>ರೆಕ್ಕೆ ನೆನೆದ ಚಿತ್ತದ ಹಕ್ಕಿಯು</div><br /><br /><div>ಕನಸು ಕಾಳುಗಳ ಹೆಕ್ಕುತಿದೆ</div><br /><br /><div></div><br /><br /><div>-----****--------</div><br /><br /><div></div><br /><br /><div>ಗಾಳಿಯೂ ಆಡದ</div><br /><br /><div>ಬಿರುಮಳೆ ಧಾರೆಗೆ</div><br /><br /><div>ಕಲ್ಲೂ ಕರಗಿದೆ</div><br /><br /><div>ಮಾತೂ ಆಡದ ಪ್ರೀತಿಗೆ</div><br /><br /><div>ಮುನಿಸು ಎಲ್ಲೋ ಕರಗಿದೆ</div><br /><br /><div></div><br /><br /><div>----*****------</div><br /><br /><div></div><br /><p>ತೊಟ ತೊಟ ತೊಟ್ಟಿಕ್ಕುತ ಡೈರಿಯ </p><br /><p>ಪುಟ ಪುಟ ಒದ್ದೆಯಾಗಿಸಿ</p><br /><p>ಬರೆದದ್ದ ಅಳಿಸಿ</p><br /><p>ಬೀಗಿದವು ಮಳೆಹನಿಗಳು</p><br /><p>ಹನಿಗಳ ಸ್ಪರ್ಶಕೆ ನೆಂದ</p><br /><p>ಹಳೆ ನೆನಪ ಬೀಜಗಳು </p><br /><p>ಚಿಗುರಿದವು!<br /></p><br /><p>----*****------</p><br /><p>ಹೇಳು ಮಳೆಯೇ</p><br /><p>ಸುರಿದು</p><br /><p>ಷೋಡಶಿಯೊಬ್ಬಳ </p><br /><p>ನೆನೆಸದಿದ್ದರೆ</p><br /><p>ನೀ ಸುರಿದೇನು ಫಲ?</p><br /><p>-----*****------</p><br /><p></p><br /><p>ಹಸಿರುಟ್ಟ ಪುಟ್ಟಬಿತ್ತಕ್ಕೆ </p><br /><p>ಮಳೆಹನಿ ಸೇಕ</p><br /><p>ಅಲ್ಲಯವರೆಗೂ ಶೋಕ</p><br /><p>ನಂತರ ಮರಗಳೆಲ್ಲ ಅಶೋಕ</p><br /><div></div><br /><br /><div></div><br /><br /><div></div>ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com6tag:blogger.com,1999:blog-1312989296248046531.post-8964012388432583842009-02-12T01:36:00.000-08:002009-02-14T06:56:48.593-08:00ಸಾಹಿತ್ಯ ಜಾತ್ರಾ ವಿಶೇಷ !ಚಿತ್ರದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ, ದೊಡ್ಡ ನಿಟ್ಟುಸಿರಿನೊಂದಿಗೆ ವಾಪಾಸು ಬಂದಿದ್ದೇನೆ. ಹೋಗುವಾಗ ಇದ್ದ ಉತ್ಸಾಹ ಬರುವಾಗ ಠುಸ್! ಒಂದು ಬಾರಿ ಸಮ್ಮೇಳನಕ್ಕೆ ಹೋದವಳು, ಸಮ್ಮೇಳನ ಮುಂದೂಡಿಕೆಯಾಗಿ ವಾಪಾಸು ಬರುವಾಗಲೇ ಅಂದುಕೊಂಡಿದ್ದೆ, ಯಾಕೋ ಎಡವಟ್ಟಾಗುತ್ತಿದೆ. ಅದು ಕೊನೆಯ ತನಕವೂ ಬೇತಾಳನ ಹಾಗೆ ಹಿಂಬಾಲಿಸುತ್ತಲೇ ಇತ್ತು.<br /><br /><br /> ಮತ್ತೆ ಸಮ್ಮೇಳನ ಆರಂಭವಾದಾಗ, ಸೈಡ್ ಲೈಟ್ಸ್ ಅಂತ ಚಿತ್ರದುರ್ಗದ ವಿಶೇಷತೆಗಳನ್ನು ಸ್ಟೋರಿ ಮಾಡಬೇಕು ಅನ್ನುವ ಅಪ್ಪಣೆಯಾದ ಕಾರಣ, ಒಂದು ದಿನದ ಹಿಂದೆಯೇ ನಮ್ಮ ಸವಾರಿ ಚಿತ್ರದುರ್ಗದತ್ತ ದೌಡಾಯಿಸಿತ್ತು. ಅರ್ಧದಲ್ಲೇ ಗಾಡಿ ಕೆಟ್ಟು, ಲೈಟು ರಿಪೇರಿಯಾಗಿ ಚಿತ್ರದುರ್ಗ ತಲುಪಿದಾಗ ರಾತ್ರಿ ಎರಡು. ಹೋಗಿದ್ದೇನೋ ಹೋಗಾಯಿತು, ಮಲಗೋದೆಲ್ಲಿ? ಕೊನೆಗೂ ಮುರುಘಾ ಮಠದ ಕಡೆ ನಡೆದಾಗ, ಬಂದವರೆಲ್ಲ ಹುಡುಗರು ಅಂತ ಭಾವಿಸಿ ಒಂದು ಹಾಲ್ನಲ್ಲೇ ಒಂದಿಷ್ಟು ಹಾಸಿಗೆ ಹಾಕಿ ಮಲಗುವ ವ್ಯವಸ್ಥೆ ಮಾಡಿ ಮಠದೊಳಗೆಲ್ಲೋ ಹೋಗಿಬಿಟ್ಟರು.<br /><br /><br /> ಆ ರಾತ್ರಿಯಲ್ಲಿ ಬೇರೆ ಯಾರನ್ನು ಕೇಳೋದು? ಕೊನೆಗೆ ನಮ್ಮ ಚಿತ್ರದುರ್ಗದ ರಿಪೋರ್ಟರ್ ಯಾರದೋ ಮನೆಯವರನ್ನು ಕಾಡಿ ಬೇಡಿ ಉಳಿದರ್ಧ ರಾತ್ರಿ ಕಳೆಯಲು ವ್ಯವಸ್ಥೆ ಮಾಡಿದರು. ಇನ್ನೇನು ನಿದ್ದೆ ಹತ್ತಿತು ಅನ್ನುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ತೆರೆಯುವ ಮೊದಲೇ ಮೊಬೈಲ್ ಹೊಡೆದುಕೊಳ್ಳತೊಡಗಿತು. ಆಫೀಸ್ನಿಂದ ಫೋನ್. ಕೆರೆಮನೆ ಶಂಭು ಹೆಗಡೆ ತೀರ್ಕೊಂಡ್ರಂತೆ, ಅವರಿಗೆ ನೃತ್ಯ ಹೇಳಿಕೊಟ್ಟ ಮಾಯಾರಾವ್ ಮನೆ ಎಡ್ರೆಸ್ ಕೊಡಿ ಅಂತ ಆರ್ಡ್ರ್. ಕೊಡಲಿಕ್ಕೆ ನಂಗೆ ಗೊತ್ತಿದ್ರೆ ತಾನೇ? ಕೇಳಿ ಹೇಳ್ತೇನೆ ಅಂದೆ. ಕೂಡಲೇ ಕೆರೆಮನೆ ಶಂಭು ಹೆಗಡೆ ಫೈಲ್ ವಿಜುವಲ್ ಎಲ್ಲಿದೆ? ಅಂತ ಪ್ರಶ್ನೆ. ಅದಕ್ಕೂ ಸಮಜಾಯಿಶಿ ನೀಡಿಯಾಯಿತು. ಅಷ್ಟರಲ್ಲಿ ಮೊಬೈಲ್ ನೆಟ್ವರ್ಕ್ ಕಟ್ ಆಯ್ತು. ಟೆರೇಸ್ ಮೇಲಾದ್ರೂ ಸಿಗತ್ತಾ ಅಂತ ಹೋದ್ರೆ, ಅಲ್ಲಿ ಕಂಡ ದೃಶ್ಯ ವರ್ಣನಾತೀತ. ನಾನು ಅಲ್ಲಿ ಇಲ್ಲಿ ಓದಿಕೊಂಡಿದ್ದ ದೃಶ್ಯ ಕಣ್ಣು ಮುಂದೆಯೇ ಕಾಣಸಿಕ್ಕಿತ್ತು. ವಿಶಾಲವಾದ ಬಯಲಿನಲ್ಲಿ ಬಿಂದಿಗೆ ಹಿಡಿದ ಮಂದಿ ಅಲ್ಲಲ್ಲಿ ಕೂತು, ಅದ್ಯಾವುದೋ ಸುಖದ ಅಮಲಿನಲ್ಲಿ ಅರೆಗಣ್ಣಾಗಿದ್ದರು. ನಮಗೆ ತೀರಾ ಅಪರಿಚಿತವಾಗಿರುವ ಈ ಸನ್ನಿವೇಶವನ್ನು ಕಂಡು ಒಳಗೊಳಗೇ ನಗುತ್ತಾ ಮತ್ತೆ ಕೆಳಗೆ ಬಂದೆ.<br /><br /><br /><br /> ಆ ದಿನವಿಡೀ ಕೋಟೆ, ಚಂದವಳ್ಳಿ ತೋಟ ಶೂಟ್ ಮಾಡೋದ್ರಲ್ಲೇ ಕಳೆದು ಹೋಯಿತು. ಕೆಲ ರಾದ್ಧಾಂತಗಳು, ನಾಳಿನ ಕವರೇಜ್ ಪ್ಲಾನ್, ಅದು ಇದು ಅಂತ ಮಾತು ಮುಗಿಯೋ ಹೊತ್ತಿಗೆ ಗಂಟೆ ೧೨. ಹೊಟ್ಟೆಯೇನೋ ನಾಚಿಕೆ ಬಿಟ್ಟು ಚುರುಗುಟ್ಟುತ್ತಿತ್ತು. ಆದರೆ, ಅಷ್ಟೊತ್ತಿಗೆ, ಊಟಾನಾದ್ರೂ ಎಲ್ಲಿ ಸಿಗಬೇಕು? ದಾರಿಯಲ್ಲಿ ಯಾವುದೋ ಬಾರ್ ಆಂಡ್ ರೆಸ್ಟ್ರೆಂಟ್ ತೆರೆದಿತ್ತು. ನಮ್ಮ ಗ್ರೂಪ್ ಅಲ್ಲಿಗೆ ನುಗ್ಗಿದಾಗ ನಾನೂ ಹಿಂಬಾಲಿಸಿದೆ. ಊಟ ಮುಗಿಸಿ ನನಗೆ ಅಂತ ಬುಕ್ ಆಗಿರೋ ರೂಮ್ಗೆ ಬಂದ್ರೆ, ಆ ರೂಮನ್ನು ಆಗಲೇ ಆಕ್ರಮಿಸಿಕೊಂಡಾಗಿತ್ತು. ಜಪ್ಪಯ್ಯ ಅಂದ್ರೂ ಆ ಪುಣ್ಯಾತ್ಮ ರೂಂ ಬಿಟ್ಟು ಕೊಡ್ಲಿಲ್ಲ. ಬೇರೆ ಸ್ತ್ರೀ ಸಹೋದ್ಯೋಗಿಯೊಬ್ಬರಾದರೂ ಇದ್ದರೆ ಅವರೊಂದಿಗೆ ರೂಮು ಹಂಚಿಕೊಳ್ಳಬಹುದಿತ್ತು. ಆದರೆ, ದೇವರ ದಯದಿಂದ ಸ್ತ್ರೀ ಜೀವ ಅಂತ ಇದ್ದದ್ದು ನಾನು ಮಾತ್ರ. ಆ ಹೊತ್ತು ಮಧ್ಯ ರಾತ್ರಿ ೧.೩೦ ಗಂಟೆ. ಕೊನೆಗೆ ಹೊಟೇಲ್ನವರಿಗೇ ಕರುಣೆ ಉಕ್ಕಿ ಆ ರಾತ್ರಿಯ ಮಟ್ಟಿಗೆ ಒಂದು ಖಾಲಿ ರೂಂ ಸಿಕ್ಕಿತು. ಹೋಗಿ ಬಿದ್ದುಕೊಂಡೆ.<br /><br /><br /> ಮತ್ತೆ ಬೆಳಗಿನ ದರ್ಶನ ಮಾಡಿಸಿದ್ದು ಅದೇ ಜಂಗಮ ದೂರವಾಣಿ. ‘ಪ್ರಿಯಾ, ಲೈನ್ ಹೋಲ್ಡ್ ಮಾಡಿದ್ದೀನಿ. ಈಗ ಫೋನೋ ಇದೆ. ರೆಡಿಯಾಗಿರು’ ಅಂದಿತು ಅತ್ತಲಿನ ದನಿ. ನಾನು ಬಾಯಿ ತೆರೆಯುವುದರೊಳಗೆ ಫೋನ್ ಹೋಲ್ಡ್ ಆಗಿತ್ತು. ಏಳು ಗಂಟೆಯ ನ್ಯೂಸ್ ಬುಲೆಟಿನ್ ಆರಂಭವಾಗಿತ್ತು. ಕೆಲವೇ ಕ್ಷಣಗಳಲ್ಲಿ ಲೈವ್ಗೆ ಫೋನ್ ಕನೆಕ್ಟ್ ಆಯಿತು. ನಾನು ಗಂಟಲು ಸರಿ ಮಾಡಿಕೊಳ್ಳಬೇಕೆಂದುಕೊಳ್ಳುವಾಗಲೇ ಅತ್ತಲಿಂದ ವಾರ್ತಾವಾಚಕಿ ಪ್ರಶ್ನೆ ಕೇಳಿಯಾಗಿತ್ತು, ಉಗುಳು ನುಂಗಿ, ಅದೇನೋ ಒದರಿ ಸುಮ್ಮನಾದೆ.<br /><br /><br /> ಬಡ ಬಡನೆ ಹೊರಟು ನಿಂತಾಗ ಸಮ್ಮೇಳನದವರೇ ಆಯೋಜಿಸಿದ್ದ ಬಸ್ ಕಾಯುತ್ತಿತ್ತು. ಹತ್ತಿ ಕೂತೆ. ಬಸ್ ಹೊರಟಾಗ ಮತ್ತೆ ಫೋನೋ ಕನೆಕ್ಟ್. ‘ಸಮ್ಮೇಳನಕ್ಕೆ ಈಗಾಗಲೇ ಜನರ ಆಗಮನವಾಗಿದೆಯಾ? ತಿಂಡಿ ವ್ಯವಸ್ಥೆ ಹೇಗಿದೆ? ಸಾಹಿತಿಗಳ್ಯಾರಾದ್ರೂ ಮಾತಿಗೆ ಸಿಕ್ರಾ?’ ಅಂತ ಆಂಕರ್ ಕೇಳಿದಾಗ, ‘ದೂರದೂರಗಳ ಜನ ಈಗಾಗಲೇ ಆಗಮಿಸಿದ್ದಾರೆ. ಎಲ್ಲರಿಗೂ ತಿಂಡಿವ್ಯವಸ್ಥೆ ಇದೆ. ಕೆಲ ಸಾಹಿತಿಗಳು ಆಗಲೇ ಬಂದಿದ್ದಾರೆ’ ಅಂತಂದು ಸುಮ್ಮನಾದೆ. ಆದರೆ ಸಮ್ಮೇಳನ ನಡೆಯುವ ಕಡೆ ಹೋಗಿ ನೋಡಿದ್ರೆ, ಅಲ್ಲಿ ತಿಂಡಿ ಖಾಲಿಯಾಗಿತ್ತು, ಜನ ಸಿಟ್ಟಿಗೆದ್ದದ್ದರು. ಮತ್ತೊಂದೆಡೆ ಕಿಟ್ಗಾಗಿ ಹೋರಾಟ ನಡೆಯುತ್ತಿತ್ತು. ತಪ್ಪಿಯೂ ಒಬ್ಬ ಸಾಹಿತಿಯೂ ಸಮ್ಮೇಳನದತ್ತ ಮುಖಮಾಡಿರಲಿಲ್ಲ. ಮೈ ಪರಚಿಕೊಳ್ಳುವಂತಾಯಿತು. ಅಷ್ಟರಲ್ಲಿ ಮತ್ತೆ ಆಫೀಸ್ನಿಂದ ಫೋನ್. ಏನ್ರೀ ಅಲ್ಲೇನೋ ಗಟಾಲೆ ನಡೀತಿದೆಯಂತೆ, ನೀವ್ ಏನ್ರೀ ಮಾಡ್ತಿದ್ದೀರಾ? ಅಂತ ಆವಾಜ್. ಅವರನ್ನು ಕನ್ವಿನ್ಸ್ ಮಾಡುವಷ್ಟರಲ್ಲಿ ಸಾಕೋ ಸಾಕು. ಸಾಹಿತ್ಯ ಸಮ್ಮೇಳನ ಆರಂಭವಾಗುತ್ತಿರುವಂತೆ ಅಧ್ಯಕ್ಷರಿಗಿಂತ ಹೆಚ್ಚಿನ ಟೆನ್ಶನ್ ನಮಗೆ. ನಮಗೆ ಸಿಗದ ವಿಶ್ಯವಲ್ ಬೇರೆ ಚಾನೆಲ್ಗೆ ಸಿಕ್ಕಿಬಿಟ್ರೆ , ಅಂತ ಕ್ಷಣ ಕ್ಷಣಕ್ಕೂ ಕಾಡುವ ಆತಂಕ.<br /><br /><br /> ಇನ್ನು ಲೈವ್ ಚಾಟ್(ನೇರ ಪ್ರಸಾರದಲ್ಲಿ ಮಾಹಿತಿ, ಸಂದರ್ಶನ...ಹೀಗೆ ನೇರ ಮುಖಾಮುಖಿ) ಕೊಡುವ ಸಂಭ್ರಮವೇ ಬೇರೆ. ಯಾರೋ ಗಣ್ಯ ವ್ಯಕ್ತಿಗಳನ್ನು ನಿಲ್ಲಿಸಿಕೊಂಡು ಅವರ ಜತೆ ಲೈವ್ನಲ್ಲಿ ಸಂದರ್ಶನ ನಡೆಸುತ್ತಿರುವಾಗಲೇ ನೆಟ್ವರ್ಕ್ ಪ್ರಾಬ್ಲಂನಿಂದ ಲೈನ್ ಕಟ್ ಆಗಿರತ್ತೆ. ಆ ವ್ಯಕ್ತಿ ಇನ್ನೂ ನೇರ ವಿಷಯಕ್ಕೇ ಬಂದಿರುವುದಿಲ್ಲ. ಆದ್ರೆ ಲೈನ್ ಕಟ್ ಆಗಿರುವುದು ಆತನ ಗಮನಕ್ಕೆ ಬಂದಿರುವುದಿಲ್ಲ. ಆ ಪುಣ್ಯಾತ್ಮರು ಹೇಳುತ್ತಲೇ ಇರುತ್ತಾರೆ. ನಾವೂ ಏನೂ ನಡೆದಿಲ್ಲ ಎಂಬಂತೆ ಅವರ ಭಾಷಣ ಕೇಳಿದಂತೆ ನಟಿಸುತ್ತಾ, ಅವರೇ ಮಾತು ಕೊನೆಗೊಳಿಸುವ ತನಕ ಕಾದು, ಅವರಿಗೊಂದು ಸಲಾಮು ಹೊಡೆದು,<br /> ಓವರ್ ಟು ಸ್ಟುಡಿಯೋ ಅನ್ನುವ ಹೊತ್ತಿಗೆ ಬೆವರಿಳಿದಿರುತ್ತದೆ.<br /><br /><br /> ಉಳಿದ ಹೊತ್ತಲ್ಲಿ ಗೋಷ್ಟಿಗಳನ್ನು ನೋಡಿಕೊಳ್ಳಬೇಕು, ನ್ಯೂಸ್, ಸ್ಟೋರಿ ಎಲ್ಲ ಕೊಡುತ್ತಾ ಅರೆಜೀವವಾಗುತ್ತದೆ, ಸ್ಥಿತಿ. ಇದೆಲ್ಲಕ್ಕಿಂತ ಉತ್ಸಾಹ ಕುಂದಿಸುವುದು ಸುಡು ಸುಡು ಬಿಸಿಲು. ಗಂಟಲಿಗೆ ತೊಟ್ಟು ನೀರು ಎರೆದುಕೊಳ್ಳೋಣ ಅಂದ್ರೆ, ಜೀವ ಹೋದ್ರೂ ಅಲ್ಲಿ ನೀರು ಸಿಗಲ್ಲ. ಮೇಲೆ ಸ್ಟಾಲ್ಗಳಿರುವ ಕಡೆಗೆ ಹೋಗಿ ದುಡ್ಡು ಕೊಟ್ಟು ನೀರು ಕೊಳ್ಳಬೇಕು. ಬೇರೇನಕ್ಕೋ ಅವಸರಕ್ಕಿಟ್ಟಿತೆಂದರೆ ದೇವರೇ ಗತಿ, ಯಾಕೆಂದರೆ, ಅಲ್ಲಿ ಟಾಯ್ಲೆಟ್ಟೂ ಇಲ್ಲ. ರೂಮಿಗಾದ್ರೂ ಹೋಗಿ ತೀರಿಸಿಕೊಳ್ಳೋಣ ಅಂದ್ರೆ, ಅದಕ್ಕೂ ಗತಿಯಿಲ್ಲ, ರಾತ್ರಿಯಾದರೆ ಲಗ್ಗೇಜು ಹಿಡಿದು ರೂಮಿಂದ ರೂಮಿಗೆ ಅಲೆತ. <br /><br /> <br /> ಅಹ್..ಇದು ಹೇಳಿ ಮುಗಿಯಲಿಕ್ಕಿಲ್ಲ ಬಿಡಿ, ನಾನು ರಿಪೋರ್ಟಟಿಂಗ್ಗೆ ಹೊರ ಜಿಲ್ಲೆಗಳಿಗೆ ಹೋಗೋದು ಇದೇ ಮೊದಲೇನಲ್ಲ, ಆದರೆ, ಈ ಅನುಭವ ಹೊಸತು. ಅನುಭವ ನಮ್ಮನ್ನು ಗಟ್ಟಿಗೊಳಿಸುತ್ತದಂತೆ, ಆದ್ರೆ, ಅಲ್ಲಿಗೆ ಹೋಗಿ ಬಂದ ನಾನಿನ್ನೂ ಚೇತರಿಸಿಕೊಂಡೇ ಇಲ್ಲ.ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com12tag:blogger.com,1999:blog-1312989296248046531.post-50900895743393272802008-12-26T06:41:00.000-08:002009-01-04T07:30:34.152-08:00ನನ್ನ ತಮ್ಮ ಈಗ ಅಳುವುದಿಲ್ಲ<a href="https://blogger.googleusercontent.com/img/b/R29vZ2xl/AVvXsEh7N7RhyphenhyphenYPGDLYRuMNaAFM5OchzhKBHdxcykpss7MMrOSkWh8YpoX8UBA3n_gJKq2KD8eT6S59bey4F-Ba3vYpNIB7_mkRWmeI_r7KQw6B56gr8UFlfnAxPJMvNaxWNLM71lW_1I1WWGiA/s1600-h/boy.bmp"><img id="BLOGGER_PHOTO_ID_5284127912845557538" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 240px" alt="" src="https://blogger.googleusercontent.com/img/b/R29vZ2xl/AVvXsEh7N7RhyphenhyphenYPGDLYRuMNaAFM5OchzhKBHdxcykpss7MMrOSkWh8YpoX8UBA3n_gJKq2KD8eT6S59bey4F-Ba3vYpNIB7_mkRWmeI_r7KQw6B56gr8UFlfnAxPJMvNaxWNLM71lW_1I1WWGiA/s320/boy.bmp" border="0" /></a> ನಮ್ಮ ತೋಟದ ಕೆಳಗೆ ಸ್ವರ್ಣಾ ನದಿ ಹರಿಯುತ್ತದೆ. ಇತ್ತೀಚೆಗೆ ತಮ್ಮ ಸಮಯ ಸಿಕ್ಕಾಗಲೆಲ್ಲ ನದಿಯಲ್ಲಿ ಈಜಾಡುತ್ತಿರುತ್ತಾನೆ. ಅವನಿಗೀಗ ಹದಿನೇಳು ವರ್ಷ. ಅವನ ಗೆಳೆಯರಾರೋ ಹೊಳೆಯಲಿ ಈಜಿದ್ರೆ ಉದ್ದ ಆಗ್ತಿ ಅಂತ ಹೇಳಿದ ಕಾರಣ, ಈಜಿನ ಹುಚ್ಚು ಹತ್ತಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಅದರಿಂದ ಅಂವ ದಿನದಿಂದ ದಿನಕ್ಕೆ ಉದ್ದವಾಗುತ್ತಾ ಹೋಗಿದ್ದಾನಂತೆ. ( ಹಾಗಂತ ಅವನೇ ಹೇಳಿದ್ದು)<br /><br /><br /><div>ನನ್ನ ತಮ್ಮ ತೀರಾ ಸಾಧಾರಣ ಹುಡುಗ. ಚಿಕ್ಕವನಿದ್ದಾಗ ತುಂಬ ಚಂದ ಇದಾನೆ ಅಂತ ಎಲ್ಲರ ಮುದ್ದಿನ ಮೂಟೆಯಾಗಿದ್ದ . ಸ್ವಲ್ಪ ದೊಡ್ಡವನಾದ ಮೇಲೆ ಇದೆಲ್ಲ ನಿಧಾನಕ್ಕೆ ಕರಗತೊಡಗಿತು. ಕಲಿಯುವುದರಲ್ಲಿ ಜಾಣ ಅಲ್ಲ. ಅವನಿಗಿಂತ ಮೊದಲು ಕಲಿತ ನಾನು ಸ್ವಲ್ಪ ಕ್ರಿಯೇಟಿವ್ ಆಗಿದ್ದ ಕಾರಣ, ಈ ಪುಟ್ಟು ಹುಡುಗ ಶಾಲೆಯಲ್ಲೂ ಟೀಚರ್ಸ್ ಮೂದಲಿಕೆಗೆ ತುತ್ತಾಗಿದ್ದ.<br /></div><div>ಇಷ್ಟರಲ್ಲಾಗಲೇ ತಮ್ಮನ ಸ್ವರ ಒಡೆಯಲಾರಂಭಿಸಿತು. ಹರೆಯ ಹತ್ತಿರ ಬಂತು. ಸಿಕ್ಕಾಬಟ್ಟೆ ತಮಿಳು ಸಿನಿಮಾ ನೋಡುವ ಹುಚ್ಚು. ಅದರೆ ಜತೆಗೆ ತಾನು ಅವರ ಹಾಗಿಲ್ಲ ಅನ್ನುವ ಕೊರಗು. ಸಿನಿಮಾ ಹುಚ್ಚು ತಲೆಗೇರಿದಂತೆ ಡಿಪ್ರೆಶ್ಶನ್ ಕೂಡ ಏರತೊಡಗಿತು. ಸಂಪೂರ್ಣ ಅಸ್ವಸ್ಥ ಮನಃಸ್ಥಿತಿ. ಅಷ್ಟರಲ್ಲಾಗಲೇ ಎಸ್.ಎಸ್.ಎಲ್.ಸಿ. ಪಾಸಾಗಿತ್ತು. ಮುಂದೇನು ಅನ್ನುವ ಭೂತಾಕಾರದ ಪ್ರಶ್ನೆ. ಅಪ್ಪನಿಗೆ ಯಾರೋ ಮೆಕಾನಿಕಲ್ ಡಿಪ್ಲೋಮೊ ಮಾಡಿದ್ರೆ ಒಳ್ಳೆ ಸ್ಕೋಪ್ ಇದೆ ಅಂದ್ರಂತೆ. ಇವನಿಗೂ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ. ಐವತ್ತು ಸಾವಿರ ಫೀಸ್ ಕಟ್ಟಿ ಕಾಲೇಜು ಸೇರಿಕೊಂಡ. </div><div><br /><br /></div><div></div><div><br /><br /></div><div>ಇವ ಅಷ್ಟರವರೆಗೆ ಓದಿದ್ದು ಕನ್ನಡ ಮೀಡಿಯಂನಲ್ಲಿ. ಅವನ ಕ್ಲಾಸಿನಲ್ಲಿರುವವರೆಲ್ಲ ಇಂಗ್ಲೀಶ್ ಮೀಡಿಯಂನಿಂದ ಬಂದವರು. ಜತೆಗೆ ಇವ ಹೋಗಿದ್ದು ಎಸ್.ಎಸ್.ಎಲ್.ಸಿ. ನಂತರ. ಆದರೆ ಕ್ಲಾಸಿನಲ್ಲಿರುವವರೆಲ್ಲ ಪಿಯೂಸಿ ಓದಿ ಬಂದವರು. ಅದರಲ್ಲೂ ತೀರಾ ಸಾಧಾರಣ ಬುದ್ಧಿಮತ್ತೆ ಹುಡುಗ. ಓದು ಹೇಗೆ ತಾನೇ ತಲೆಗೆ ಹತ್ತಬೇಕು? ಅರ್ಥಮಾಡಿಕೊಳ್ಳುವ ಮನಸ್ಸೂ ಇವನಿಗಿರಲಿಲ್ಲ. </div><div><br /><br /><br />ಮತ್ತೇನಾಗಲಿಲ್ಲ. ಡಿಪ್ಲೊಮಾ ಫಸ್ಟ್ ಸೆಮ್ನಲ್ಲಿ ೭ ಸಬ್ಜೆಕ್ಟ್ ಫೇಲ್ ಆದ. ಮನೇಲೇ ಕೂತ. ಕಂಪ್ಯೂಟರ್ ಕ್ಲಾಸಿಗೆ ಹೋಗ್ಲಿಕ್ಕೂಮನಸ್ಸಿಲ್ಲ, ಯಾಕೇಂದ್ರೆ ಇವನಿಗೆ ಇಂಗ್ಲಿಷ್ ಬರಲ್ಲ, ಅಲ್ಲಿ ಯಾರಾದ್ರೂ ಇಂಗ್ಲೀಶ್ ಮಾತಾಡಿ ಇನ್ಸಲ್ಟ್ ಮಾಡಿದ್ರೆ ಅಂತ....ಒಟ್ಟಾರೆ ಮೈ ಪರಚಿಕೊಳ್ಳೋ ಸ್ಥಿತಿ ಅಂತಾರಲ್ಲ ಹಾಗೆ. ಅಷ್ಟರಲ್ಲಾಗಲೇ ನನಗೆ ರಾಜಧಾನಿಯಲ್ಲಿ ಟಿ.ವಿ.ಚಾನೆಲ್ ನಲ್ಲಿ ಕೆಲಸ ಸಿಕ್ಕಿತ್ತು. ನಾನು ಬೆಂಗಳೂರಿನಲ್ಲಿದ್ದೆ.</div><div><br /></div><div>ಸ್ವಲ್ಪವಾದ್ರೂ ಮನಸ್ಸು ಬಿಚ್ಚಿ ನನ್ನ ಹತ್ರ ಮಾತ್ರ ಮಾತನಾಡುತ್ತಿದ್ದ ತಮ್ಮ. ಆದ್ರೆ ನಂಗೆ ಮಾತಾಡ್ಲಿಕ್ಕೆ ಟೈಮೆಲ್ಲಿ? ನ್ಯೂಸ್, ಪ್ರೋಗ್ರಾಂ ಅಂತ ಕೆಲಸ ಹೊತ್ತು ಹೈರಾಣಾಗಿದ್ದೆ . ಈ ಪುಣ್ಯಾತ್ಮ ಕಾಲ್ ಮಾಡುವಾಗಲೆಲ್ಲ, ‘ಬಿಸಿ ಇದ್ದೆ, ಆಮೇಲೆ ಮಾಡು’ ಎಂಬ ಒಂದು ಲೈನ್ ಆನ್ಸರ್. </div><div><br /></div><div></div><div><br /></div><div>ಆದ್ರೆ ಆ ದಿನ ಫೋನ್ ಮಾಡಿದ ತಮ್ಮ ಸ್ವರ ಎಂದಿನಂತಿರಲಿಲ್ಲ. ಕುಸಿದು ಹೋದಂತಾಗಿತ್ತು. ಆಮೇಲೆ ಮಾಡು ಅಂತ ಹೇಳಲು ಹೋದವಳು ತಡೆದು, ಏನಾಯ್ತೋ ಅಂದೆ. ನಾನು ಸಾಯ್ತೀನಿ ಕಣೇ. ನಂಗೆ ಬದುಕಕ್ಕಾಗಲ್ಲ ಅನ್ನುವಷ್ಟರಲ್ಲಿ ಅಳು ಬಂದು ಬಿಡ್ತು. ನಾನು ಮತ್ತೇನೂ ಮಾತನಾಡಲಿಲ್ಲ. ನಾಳೆಯೇ ರಾತ್ರಿ ಹೊರಟು ನೀನಿಲ್ಲಿಗೆ ಬಾ. ಆಮೇಲೆ ನೋಡಿಕೊಳ್ಳೋಣ ಅಂದೆ. </div><div><br /></div><div></div><div><br /></div><div>ತಮ್ಮ ಆತ್ಮಹತ್ಯಾ ಪ್ರಯತ್ನವನ್ನು ಮುಂದೆ ಹಾಕಿ ಬಲು ಕಷ್ಟದಿಂದ ಬರಲೊಪ್ಪಿದ. ಬರಲಿಕ್ಕೇನೋ ಹೇಳಿಯಾಯಿತು. ಆದ್ರೆ ಬಂದ ಮೇಲೆ ಏನು ಮಾಡುವುದು. ಅದುವರೆಗೆ ಪುರುಸೊತ್ತಿಲ್ಲದ ಕೆಲಸದ ನಡುವೆ ಮರೆತೇ ಹೋದಂತಿದ್ದ ಗೆಳೆಯರನ್ನೆಲ್ಲ ಸಂಪರ್ಕಿಸಿದೆ. ನನ್ನ ಗೆಳತಿ ಹಿಂದೆ ಒಬ್ಬ ಸೈಕಾಲಜಿಸ್ಟ್ ಬಗ್ಗೆ ಹೇಳಿದ್ದಳು. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. </div><div> </div><div>ಬಲು ಕಷ್ಟದಲ್ಲಿ ಮಾತಿಗೆ ಸಿಕ್ಕ ಅವರು ತಮ್ಮನ ಮದುವೆಯ ತರಾತುರಿಯಲ್ಲಿದ್ದರು. ಒಬ್ಬನೇ ತಮ್ಮನ ಮದುವೆ ತಯಾರಿ ಬಿಟ್ಟು ನನ್ನ ತಮ್ಮನನ್ನು ರಿಪೇರಿ ಮಾಡ್ಲಿಕ್ಕೆ ಒಪ್ಪಿಕೊಂಡರು. </div><div></div><div><br /></div><div></div><div>ಮರುದಿನ ಮುಂಜಾನೆ ಮನೆಗೆ ಬಂದಾಗ ತಮ್ಮನ ಕಣ್ಣ ಕೆಳಗೆ ಕಪ್ಪು ಕಲೆ. ಮುಖ ತಗ್ಗಿತ್ತು. ರೂಮೊಳಗೆ ಬಂದು ಕೂತ. ಮನಸ್ಸಿಲ್ಲದ ಮನಸ್ಸಿಂದ ತಿಂಡಿ ತಿಂದ, ಸ್ನಾನ ಮಾಡಿ ಬೆನ್ನು ಒರೆಸದೇ ಬಂದ. </div><br /><br />ಮರುದಿನ ಅವನನ್ನು ಆ ಸೈಕಾಲಜಿಸ್ಟ್ ಬಳಿ ಕರೆದೊಯ್ದೆ. ಆಗಷ್ಟೇ ಮಿಂದು, ಒದ್ದೆ ಕೂದಲನ್ನು ಬೆನ್ನ ಮೇಲೆ ಹರಡಿದ ಮೂವತೈದರ ಚೆಲುವಾದ ಹೆಣ್ಮಗಳೊಬ್ಬಳು ನಮ್ಮನ್ನು ಮನೆಯೊಳಗೆ ಕರೆದೊಯ್ದರು. ಮನೆ ಮಹಡಿಯ ಮೇಲೆ ಕೂರಿಸಿ ತಿಂಡಿ ಬಗ್ಗೆ ವಿಚಾರಿಸಿ ಎಷ್ಟೇ ಹೇಳಿದರೂ ಕೇಳದೇ ತಿಂಡಿ ಕೊಟ್ಟು ಮಾತಿಗೆ ಕೂತರು. ನಮಗೆ ಆಶ್ಚರ್ಯ. ಸೈಕಾಲಜಿಸ್ಟ್ ಟಫ್ ಪರ್ಸನಾಲಿಟಿ ನಿರೀಕ್ಷಿಸಿದ್ದ ನಮಗೆ ಗೊಂದಲ, ತಬ್ಬಿಬ್ಬು.<br /><br />ನನ್ನನ್ನು ಕೆಳಗೆ ಕೂರಲು ಹೇಳಿ, ತಮ್ಮನ ಜತೆಗೆ ಮಾತಿಗೆ ಹಚ್ಚಿದರು. ನಾನು ತಳ ಅಂತಸ್ತಿನ ರೂಮಿನಲ್ಲಿ ಕೂತು ಅರ್ಧ ಓದಿದ್ದ ದಾದಾಗಿರಿಯ ದಿನಗಳತ್ತ ಕಣ್ಣು ಹಾಯಿಸಿದೆ. ಏನೂ ತಲೆಗೆ ಹೋಗುತ್ತಿರಲಿಲ್ಲ. ಮೇಲಿನ ಮಾತುಗಳೂ ಕೇಳುತ್ತಿಲ್ಲ. ಸುಮ್ಮನೆ ಅಲ್ಲಿ ಇಲ್ಲಿ ಅಡ್ಡಾಡುತ್ತಾ ಮತ್ತೆ ಪುಸ್ತಕ ಹಿಡಿದೆ. ಹತ್ತು ಪುಟ ಓದಿ ಮುಗಿದಿರಬಹುದು.<br /><br />ಮೇಲಿಂದ ಜೋರಾಗಿ ನಗುವ ಸದ್ದು. ತಡೆದು ಕಿವಿಕೊಟ್ಟೆ, ತಮ್ಮನದೇ ದನಿ. ಅವನನ್ನು ಆತ್ಮಹತ್ಯೆಯಿಂದ ಹೊರಗೆಳೆದು, ಸಮಾಧಾನಿಸಬೇಕು ಎಂದಷ್ಟೇ ಬಯಸ್ಸಿದ್ದ ನನಗೆ ಅವನ ಜೋರಾದ ನಗು ಕೇಳಿ ಆಶ್ಚರ್ಯ. ಒಳಗೊಳಗೇ ಸಮಾಧಾನ, ಮಂಕು ಬಡಿದಂತಾಗಿದ್ದ ಮನಸ್ಸು ತಹಬಂಧಿಗೆ ಬಂದಿತ್ತು. ಅಷ್ಟರಲ್ಲಾಗಲೇ ತಮ್ಮನ ಸ್ವರ ಏರಿತ್ತು, ಜೋರು ಜೋರಾಗಿ ಏನನ್ನೋ ವಿವರಿಸುತ್ತಿದ್ದ. ಅದೇನೆಂದು ಸ್ಪಷ್ಟವಾಗುತ್ತಿರಲಿಲ್ಲ.<br /><br />ಸಧ್ಯ! ಅಂದುಕೊಂಡು ಓದನ್ನು ಮುಂದುವರಿಸಿದೆ. ಯಾಕೋ ಬೋರೆನಿಸತೊಡಗಿತು.<br />ಮೇಲಿಂದ ಅಸ್ಪಷ್ಟ ಮಾತು ಮುಂದುವರಿದಿತ್ತು. ಹೊರಬಂದು ರಸ್ತೆಯಲ್ಲೇ ಎರಡು ಸುತ್ತು ಹಾಕಿಬಂದೆ. ಇವರ ಮಾತು ನಿಂತಿರಲಿಲ್ಲ. ಅವರು ಮಾತಿಗೆ ತೊಡಗಿ ಆಗಲೇ ಮೂರು ಗಂಟೆಯಷ್ಟು ಹೊತ್ತಾಗಿತ್ತು.<br /><br />ಅಲ್ಲೇ ಮಂಚಕ್ಕೊರಗಿದ್ದೆ. ತಮ್ಮ ಬಂದು ಎಚ್ಚರಿಸಿದಾಗಲೇ ಗೊತ್ತಾಗಿದ್ದು, ನಂಗೆ ನಿದ್ದೆ ಬಂದಿದೆ ಅಂತ. ನಗು ನಗುತ್ತಾ ಬಂದ ತಮ್ಮ, ಮೇಲೆ ಬಾ, ಅಕ್ಕ ಕರೀತಾರೆ ಅಂತಂದ. ಅವರಾಗಲೇ ಅವನಿಗೆ ಅಕ್ಕ ಆಗಿದ್ದರು, ಜತೆಗೆ ಬೆಸ್ಟ್ ಫ್ರೆಂಡೂ. ಆ ಕ್ಷಣಕ್ಕೆ ನಂಗೆ ಏನು ಹೇಳಬೇಕೋ ತಿಳಿಯಲಿಲ್ಲ. ತಮ್ಮನನ್ನು ಕರೆದುಕೊಂಡು ಹೊರಬಂದೆ. ಗೇಟಿನವರೆಗೆ ಬಂದು ಬಿಟ್ಟು ಹೋದರು. <br /><br />ಅದೇ ದಿನ ರಾತ್ರಿ ಅವರಿಗೆ ಫೋನ್ ಮಾಡಿದಾಗ, ತಮ್ಮನ ಸಮಸ್ಯೆಯನ್ನು ವಿವರಿಸಿದರು. ತಮ್ಮನಿಗಾಗಿದ್ದು ಪ್ರೀತಿಯ ಕೊರತೆ. ಟೀಚರ್ಸ್ ಅವನನ್ನು ಎಷ್ಟು ಹಿಂಸಿಸಿದ್ದರೆಂದರೆ ಅವನಿಗೆ ಜೀವನವೇ ಬೇಡವಾಗುವಷ್ಟು. ಜತೆಗೆ ಮನೆಯಲ್ಲೂ ಇದೇ ಕಾರಣಕ್ಕೆ ಕಿರಿಕಿರಿ ಸುರುವಾದಾಗ ಅವನಿಗೆ ಓದಿನ ಮೇಲೇ ದ್ವೇಷ ಬಂದಿತ್ತು. ಜಗತ್ತೆಲ್ಲ ಅವನ ಶತ್ರುಗಳೇ ತುಂಬಿದಂತಾಗಿದ್ದರು. ಪ್ರತಿಭಟಿಸಲು ಬೇಕಾದ ಧೈರ್ಯವಿರಲಿಲ್ಲ. ಒಳಗೇ ನೋವು ತುಂಬಿ ಹೊರಬರಲಾಗದೇ ಅದರೊಂದಿಗೆ ಗಿಲ್ಟ್ ಸಹ ಸೇರಿ ಬದುಕೇ ಅಸಹನೀಯವಾಗತೊಡಗಿತ್ತು. ಆಗ ಅವನಿಗೆ ಕನಸು ಕಾಣುವ, ಭ್ರಮೆಯಲ್ಲೇ ಬದುಕುವ ಸ್ಥಿತಿ ಇಷ್ಟವಾಗತೊಡಗಿತು. ಈ ಸ್ಥಿತಿಗೆ ಎಷ್ಟರ ಮಟ್ಟಿಗೆ ಅಂಟಿಕೊಂಡ ಅಂದ್ರೆ, ಅದರಿಂದ ಹೊರಬರುವುದೂ ಸಮಸ್ಯೆಯಾಯಿತು. ಈ ಅಕ್ಕನ ಬಳಿ ತನ್ನ ನೋವನ್ನೆಲ್ಲ ಹೇಳಿ ಹಗುರಾದ ಮೇಲೆ ಅವನಿಗೂ ನಿರಾಳವೆನಿಸಿತು. ಜತೆಗೆ ಅವರ ಪ್ರೀತಿಯ ಮಾತು ಮತ್ತಷ್ಟು ಚೈತನ್ಯ ಮೂಡಿಸಿತು.<br /><br />ಈಗ ಬದಲಾಗಿದಾನೆ, ತಾರೇ ಜಮೀನ್ ಪರ್ ನಲ್ಲಿ ಇಶಾನ್ಗೆ ಸಿಕ್ಕ ಅಮೀರ್ಖಾನ್ ಥರಾ ನನ್ನ ತಮ್ಮನಿಗೆ ಒಬ್ಬ ಹೊಸ ಅಕ್ಕ ಸಿಕ್ಕಿದ್ದಾರೆ. ಈ ಅಕ್ಕನಿಗಿಂತಲೂ ಹೆಚ್ಚು ಆ ಅಕ್ಕನನ್ನು ಕಂಡ್ರೇ ಅವನಿಗಿಷ್ಟ ಅಂದಾಗ ಸ್ವಲ್ಪ ಅಸೂಯೆಯಾಗುತ್ತದೆ. ಆದ್ರೂ ಮೊದಲು ಮೂಲೆಯಲ್ಲಿ ಕೂತು ಅಳುತ್ತಾ ರೇಗುತ್ತಾ ಇದ್ದ ತಮ್ಮನಿಗೆ ಈಗ ಹೊಳೆಯಲ್ಲಿ ಈಜೋದ್ರಿಂದ ಉದ್ದ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಬಂದಿದೆ. ಕಂಪ್ಯೂಟರ್ ಕ್ಲಾಸಿಗೆ ಸೇರ್ಕೊಂಡಿದಾನೆ. ಉಳಿದ ಟೈಂನಲ್ಲಿ ಅಪ್ಪನಿಗೆ ತೋಟದಲ್ಲಿ ಹೆಲ್ಪ್ ಮಾಡುತ್ತಾನೆ. ಆಗಾಗ ಹೊಸ ಅಕ್ಕನನ್ನು ಕಾಣಲು ಬೆಂಗಳೂರಿಗೆ ಬರುತ್ತಿರುತ್ತಾನೆ. ಈಗ ಅಂವ ಫೋನ್ ಮಾಡಿದ್ರೆ, ಅದೆಂಥಾ ತಲೆ ಹೋಗೋ ಕೆಲ್ಸ ಇದ್ರೂ ಬಿಟ್ಟು ಫೋನೆತ್ತುತ್ತೇನೆ. ಆದರೆ ಜೀವನೋತ್ಸಾಹ ತುಂಬ ಬೇಕಾದ ಶಿಕ್ಷಕರು ಜೀವ ತೆಗೆಯುವ ಸ್ಥಿತಿಗೆ ನೂಕಿದ್ದನ್ನು ಇನ್ನೂ ಜೀರ್ಣಿಸಲಾಗಿಲ್ಲ.<br /><br />( ಇದನ್ನು ಬರಹ ರೂಪಕ್ಕಿಳಿಸಲು ತುಂಬ ಹೆಣಗಿದ್ದೇನೆ. ಒಂದೂವರೆ ತಿಂಗಳ ಹಿಂದೆ ಆರಂಭಿಸಿದ ಬರಹ ಇದು. ಬರವಣಿಗೆ ಅರ್ಧಕ್ಕೆ ಬರುವಾಗ ಇದು ಸರಿಯಾಗಿಲ್ಲ ಅಂತ ಅನಿಸಲು ಸುರು. ಆದ್ರೆ ಮುಗ್ಧ ಮಕ್ಕಳ ಮನಸ್ಸಿಗೆ ನೋವು ಮಾಡುವ ಶಿಕ್ಷಕರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ, ಕಪಿಲಕ್ಕನಂತವರು ಕಡಿಮೆಯಾಗುತ್ತಿದ್ದಾರೆ ಅನ್ನುವುದು ಮಾತ್ರ ಸತ್ಯ ಅಂದುಕೊಂಡಿದ್ದೇನೆ, ಹೀಗಾಗದಿರಲಿ ಎಂಬ ತುಡಿತ ಇದ್ದೇ ಇದೆ.)ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com16tag:blogger.com,1999:blog-1312989296248046531.post-32547569532006087622008-11-25T06:58:00.000-08:002008-11-28T08:42:38.661-08:00ನನ್ನ ಪ್ರೀತಿಯ ಕಂಗನಾ...<a href="https://blogger.googleusercontent.com/img/b/R29vZ2xl/AVvXsEhh9OrsLDVIDamNTJkXUZXA0LasCxn0DvFHAaVhIbT6r5jEupolhZXEHtBezYxwCJ0RN902cVJxFe_4Lwl1MakFWgvDZbt5ht4lLWrOB1XAQYDGen3UeqAcMGCNV5762lSuwUyaj9YqfQs/s1600-h/kangana-ranaut___43811.jpg"><img id="BLOGGER_PHOTO_ID_5272624299053820594" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 240px" alt="" src="https://blogger.googleusercontent.com/img/b/R29vZ2xl/AVvXsEhh9OrsLDVIDamNTJkXUZXA0LasCxn0DvFHAaVhIbT6r5jEupolhZXEHtBezYxwCJ0RN902cVJxFe_4Lwl1MakFWgvDZbt5ht4lLWrOB1XAQYDGen3UeqAcMGCNV5762lSuwUyaj9YqfQs/s320/kangana-ranaut___43811.jpg" border="0" /></a><br /><br />ಕತ್ತಲೆಯ ಪರದೆ ಸರಿದಾಗ ಕಣ್ ಕೋರೈಸುವ ಬೆಳಕು. ಅಲ್ಲೊಬ್ಬ ಸುಂದರಿ ಪ್ರತ್ಯಕ್ಷ. ನೀಳ ಕಾಯವನ್ನು ಬಳುಕಿಸುತ್ತಾ, ತುಂಬು ಗುಂಗುರು ಕೂದಲೊಳಗೇ ಮಾದಕ ಮುಖ ತೋರಿಸುತ್ತಾ ಮುಂದೆ ಬಂದು ಮಿಂಚು ನೋಟ ಬೀರಿ ಬೀರುತ್ತಾಳೆ. ಅಹ್, ಅದೆಂಥಾ ಚೂಪು, ನೇರ ದೃಷ್ಟಿ. ಕಂಗನಾ ರಾನಾವತ್ ಎಂಬ ಹುಚ್ಚು ಹುಡುಗಿ ಆ ಕ್ಷಣ ನಮ್ಮೊಳಗೆ ತುಂಬಿ ಹೋಗುತ್ತಾಳೆ. ‘ಫ್ಯಾಶನ್ ’ ಸಿನಿಮಾದಲ್ಲಿ ಫ್ಯಾಶನ್ ಪ್ರಪಂಚದ ಅಷ್ಟೂ ಅಧ್ವಾನಗಳನ್ನು ಮೈತುಂಬಿಕೊಂಡಂತೆ ಬರುವ ಪಾತ್ರ ಕಂಗನಾದು. ಚಿತ್ರದಲ್ಲಿ ಆಕೆ ಸೊನಾಲಿ. ಫ್ಯಾಶನ್ ಜಗತ್ತಿನ ದುರಂತಗಳಿಗೆ, ನೋವುಗಳಿಗೆ ಮುಖವಾಣಿಯಾಗುತ್ತಾ ಹೋಗುವ ಪಾತ್ರ ಆಕೆಯದು.<br /><br />ಈ ಚಿತ್ರದ ನಾಯಕಿ ಮೇಘನಾ ಫ್ಯಾಶನ್ ಲೋಕಕ್ಕೆ ಹೆಜ್ಜೆ ಇಡುವ ಹೊತ್ತಿಗೆ, ಸೋನಾಲಿ(ಕಂಗನಾ) ಪ್ರತಿಷ್ಠಿತ ಬ್ರಾಂಡ್ನ ರೂಪದರ್ಶಿ. ಆ ಹೊತ್ತಿಗೆ ಈಕೆ ಬಲು ಎತ್ತರಕ್ಕೇರಿದ ಫ್ಯಾಶನ್ ಲೋಕದ ಅಧಿನಾಯಕಿಯಂತೆ ಅಹಂಕಾರದಿಂದ ಕನಲಿ ಮೈಮರೆಯುತ್ತಾಳೆ ಸೊನಾಲಿ. ಸದಾ ಡ್ರಕ್ಸ್ನಿಂದ ಅಮಲೇರಿದ ಕಣ್ಣುಗಳಲ್ಲಿ ಜಗತ್ತನ್ನು ನೋಡುತ್ತಾಳೆ.<br /><br />ಇದಕ್ಕೂ ಮೊದಲಿನ ಒಂದು ದೃಶ್ಯ ಫ್ಯಾಶನ್ ಜಗತ್ತಿನ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತದೆ. ಅದು ಮುಂಬಯಿನ ಪ್ರತಿಷ್ಟಿತ ಪಾರ್ಟಿ. ಅಲ್ಲಿ ಒಂದು ಕಡೆ ಪಾನ ಪಾರ್ಟಿ ರಂಗೇರುತ್ತಿದ್ದರೆ, ಇನ್ನೊಂದೆಡೆ ಮಾನಿನಿಯರ ಕೇಕೆಯೂ ಮುಗಿಲುಮುಟ್ಟುತ್ತದೆ. ದೊಡ್ಡ ಕಡಾಯಿಯಲ್ಲಿ ಕೊಳೆತ ದ್ರಾಕ್ಷಿ ತುಳಿ ತುಳಿಯುತ್ತಾ ಮಕ್ಕಳಾಟದಂತೆ ಅದರಲ್ಲಿ ಖುಷಿ ಪಡುತ್ತಿರುತ್ತಾರೆ ಈ ಮಂದಿ... ಮೂಲೆಯಲ್ಲಿ ಶೋಕಿಗೆಂದು ಕೈಯಲ್ಲಿ ವೈನ್ ತುಂಬಿದ ಗ್ಲಾಸ್ ಹಿಡಿದ ಹಿರಿಯ ಮಹಿಳೆಯೊಬ್ಬಳು ಅರ್ಥಗರ್ಭಿತವಾಗಿ ಅತ್ತ ನೋಡುತ್ತಾಳೆ. ಅದು<br />ಫ್ಯಾಶನ್ ಪ್ರಪಂಚವನ್ನು ಸಾಕ್ಷೀಕರಿಸುವ ಮಾರ್ಮಿಕ ದೃಶ್ಯ. ಆ ಜಗತ್ತಿನ ಮಂದಿಗೆ ತಾಜಾ ದ್ರಾಕ್ಷಿ ಬೇಡ. ಆದರೆ ದ್ರಾಕ್ಷಿಯನ್ನು ಕೊಳೆಸಿ ತುಳಿದು ವೈನ್ನ ರೂಪದಲ್ಲಿ ಜರಡಿಗೆ ಹಾಕಿದರೆ ಅದನ್ನು ಚಪ್ಪರಿಸಲು ಅದೆಷ್ಟು ಮಂದಿ...<br /><br />ಇದನ್ನು ಸತ್ಯರೂಪದಲ್ಲಿ ಸಂಕೇತಿಸುವುದೇ ಸೊನಾಲಿ. ಜಗತ್ತೇ ತನ್ನ ಕೈಯಬುಗರಿ ಎಂದುಕೊಂಡಿದ್ದ ಸೊನಾಲಿಗೆ ಈ ಭ್ರಮೆ ಅರಿವಿಗೆ ಬರುವುದು ಕೆಲಸದಿಂದ ಹೊರತಳ್ಳಲ್ಪಟ್ಟಾಗಲೇ. ಅದುವರೆಗೆ ಕೋರೈಸುವ ಫ್ಯಾಶನ್ ಜಗತ್ತಿನ ಕತ್ತಲಮೂಲೆಯಲ್ಲಿ ಅವಿತಿದ್ದ ವಾಸ್ತವ ಇದ್ದಕ್ಕಿದ್ದ ಹಾಗೆ ಕಣ್ಮುಂದೆ ಬಂದಾಗ ಆಕೆ ತತ್ತರಿಸಿ ಹೋಗುತ್ತಾಳೆ. ಅವಳ ಸ್ಥಾನಕ್ಕೆ ಆ ಕಂಪೆನಿಯ ಮುಖವಾಣಿಯಾಗಿ ಬರುವವಳು ನಾಯಕಿ ಮೇಘನಾ ಮಾಥುರ್. ಮುಂದೆ ಈ ಸೊನಾಲಿ ದುರಂತ ನಾಯಕಿ ಅಥವಾ ಫ್ಯಾಶನ್ ಲೋಕದ ಕಮರಿದ ಹೂವು.<br /><br />ಫ್ಯಾಶನ್ ಲೋಕದ ಹಲವು ದುರಂತಗಳಿಗೆ ಆಕೆ ಸಾಕ್ಷಿಯಾಗುತ್ತಾಳೆ. ಕೆಲ ವರ್ಷಗಳ ಹಿಂದೆ ಫ್ಯಾಶನ್ ಶೋವೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬಟ್ಟೆ ಕಳಚಿಬಿದ್ದ ರೂಪದರ್ಶಿಯನ್ನು ಈಕೆ ಚಿತ್ರದಲ್ಲಿ ಪ್ರತಿನಿಧಿಸುತ್ತಾಳೆ. ಸುತ್ತಿ ಬರುವ ಅವಮಾನಗಳಲ್ಲಿ ದೊಡ್ಡ ಅಲೆ ಇದು. ಈ ಅಲೆ ಆಕೆಯನ್ನು ಕೊಚ್ಚಿಕೊಂಡೇ ಹೋಗುತ್ತದೆ. ಪ್ರವಾಹದ ವಿರುದ್ಧ ಈಜಲಾಗದ ಆಕೆ ಸರ್ವಸ್ವವನ್ನೂ ಕಳೆದುಕೊಂಡು ಹುಚ್ಚಿಯಾಗಿ ಬೀದಿಗೆ ಬೀಳುತ್ತಾಳೆ.<br />ಆಗ ಇತ್ತೀಚೆಗೆ ಮಾದಕ ವ್ಯಸನಿ ರೂಪದರ್ಶಿಯೊಬ್ಬಳು ಹುಚ್ಚಿಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಸುದ್ದಿಯಲ್ಲಿ ಕಥೆ ಕೇಂದ್ರೀಕೃತವಾಗುತ್ತದೆ. ಘಟನೆ, ಘಟನೆಗಳ ಮೂಲಕ ವಾಸ್ತವಕ್ಕೆ ಹತ್ತಿರವಾಗಿ, ಮನಸ್ಸಿನಾಳದಲ್ಲಿ ಊರಿ ಬಿಡುತ್ತದೆ ಈ ದೃಶ್ಯ.<br /><br />ಬಹುಶಃ ಈಕೆಯ ಹಣೆಯಲ್ಲಿ ದುರಂತವೇ ಬರೆದಿರಬೇಕು. ಇದರ ನಡುವೆ ಈಕೆ ಕಳೆದುಕೊಂಡದ್ದನ್ನು ತಾನು ಮೈದುಂಬಿಕೊಳ್ಳುತ್ತಾ, ಕೊನೆಗೆ ಈಕೆಯಂತೇ ಹತಾಶೆಯ ಪ್ರಪಾತಕ್ಕೆ ಬೀಳುತ್ತಾಳೆ ಈ ಚಿತ್ರದ ನಾಯಕಿ ಮೇಘನಾ. ಆದರೆ ಒಂದು ಹಂತದಲ್ಲಿ ನಾಯಕಿ ಎಚ್ಚೆತ್ತ ಕಾರಣ ಪರಿಣಾಮ ಸ್ವಲ್ಪ ಹಗುರಾಗುತ್ತದೆ. ಬಳಿಕ ನಾಯಕಿ ತನ್ನ ಪಾಪಪ್ರಜ್ಞೆಯ ಪ್ರತಿರೂಪದಂತಿರುವ ಬಲು ಎಚ್ಚರಿಕೆಯಿಂದ ಕಾಯುತ್ತಾಳೆ.ಆದರೆ, ಹೇಳಿ ಕೇಳಿ ದುರ್ಭರ ಅಂತ್ಯ ಮೊದಲೇ ನಿರ್ಧರಿತವಾದ ಕಾರಣ ಅದಕ್ಕೆ ಪ್ರತಿಯಾಡದೇ ಶರಣಾಗಿ ಬಿಡುತ್ತಾಳೆ ಸೊನಾಲಿ.<br /><br />ಮಧು ಭಂಡಾಕರ್ ಎಂಬ ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅಕ್ಷರಶಃ ಸೊನಾಲಿಯೇ ಆಗಿಬಿಡುತ್ತಾಳೆ ಕಂಗನಾ. ಆ ಕೆಚ್ಚು, ವ್ಯಂಗ್ಯ, ಮಾದಕತೆ, ಕೊನೆಗೆ ದೈನ್ಯ...ಇದರ ಜತೆಗೆ ಪಾತ್ರವನ್ನು ಆವಾಹಿಸಿಕೊಂಡು ರೂಪದರ್ಶಿಗಳ ಮೂರ್ತರೂಪವೇ ಆಗಿಬಿಡುತ್ತಾಳೆ ಕಂಗನಾ. ಗುಂಗುರು ಕೂದಲಿನಡಿ ಮಿನುಗುವ ಆಕೆಯ ಬೆಕ್ಕಿನ ಕಣ್ಣು ಫ್ಯಾಶನ್ ಜಗತ್ತಿನ ನಗ್ನಸತ್ಯವನ್ನು ಸಾರಿ ಸಾರಿ ಹೇಳುವಂತಿದೆ.ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com9tag:blogger.com,1999:blog-1312989296248046531.post-86231321255020457882008-11-04T07:12:00.000-08:002008-11-06T08:36:36.729-08:00ಒಂದು ಪುಟ್ಟು ಪ್ರೀತಿನನಗಾಗ ತಾನೇ ಹನ್ನೆರಡು ತುಂಬಿ ಹದಿಮೂರು ಹಿಡಿದಿತ್ತು. ಮನಸ್ಸು ಮಾಯಾಜಿಂಕೆಯ ಬೆನ್ನು ಹತ್ತಿತ್ತು. ಮನೆಯಲ್ಲಿ ಅಷ್ಟು ಮುಕ್ತವಲ್ಲದ ವಾತಾವರಣ. ನನ್ನ ಕನವರಿಕೆಗಳನ್ನ ಯಾರ ಬಳಿ ತೋಡಿಕೊಳ್ಳುವುದು? ನನ್ನೊಳಗೇ ಅದುಮಿಹಿಡಿದಿದ್ದೆ. ನಾನು ಶಾಲೆಗೆ ಹೋಗುತ್ತಿದ್ದ ವಿಷ್ಣುಮೂರ್ತಿ ಬಸ್ಸಿನ ಕ್ಲೀನರ್, ಅವನ ಹೆಸರು ಸಾದಿಕ್ ಅಂತ. ಅರೆಗಡ್ಡ ಬಿಟ್ಟ ಬಿಳಿಯ ಚಂದದ ಹುಡುಗ. ಕ್ಲೀನರ್ ಕೆಲಸ ಮಾಡುತ್ತಲೇ ಬಸ್ ಡ್ರೈವಿಂಗ್ನ್ನೂ ಕಲಿಯುತ್ತಿದ್ದ.<br /><br />ಬೆಳಗ್ಗೆ ಎಂಟೂ ಕಾಲಕ್ಕೆ ವಿಷ್ಣುಮೂರ್ತಿ ಬಸ್ ನಮ್ಮ ಸ್ಟಾಪ್ ಬಿಡುತ್ತಿತ್ತು. ಎಂಟು ಗಂಟೆಗೆ ಮನೆಬಿಟ್ಟು ಅರ್ಧಮೈಲು ನಡೆದು ಭರ್ತಿ ಎಂಟೂ ಕಾಲಕ್ಕೆ ಬಸ್ ಇನ್ನೇನು ಹೊರಡುತ್ತದೆ ಅನ್ನುವಾಗ, ಓಡಿಹೋಗಿ ಬಸ್ ಹತ್ತುತ್ತಿದ್ದೆ. ಸಾದಿಕ್ ಬಾಗಿಲ ಬದಿ ನಿಂತಿರುತ್ತಿದ್ದ. ನಾನು ಹತ್ತಿದ ಕೂಡಲೇ ಕಿವಿ ಹರಿದುಹೋಗುವಂತೆ ವಿಷಲ್ ಹೊಡೆಯುತ್ತಿದ್ದ. ಡ್ರೈವರ್ ಅವನ ಖಾಸಾ ಅಣ್ಣನೇ. ನಾನು ಹತ್ತಿ ಕೂತ ಮೇಲೆ ನನ್ನ ಸ್ಥಿತಿ ನೋಡಿ ನಗುತ್ತಾ ಬಸ್ ಓಡಿಸುತ್ತಿದ್ದ. ಬಾಗಿಲ ಬಳಿ ಅವನನ್ನು ದಾಟಿ ಬರುವಾಗ ಅದೇಕೋ ಒಂಥರಾ ಅನಿಸುತ್ತಿತ್ತು. ಮತ್ತೆ ಕಿಟಕಿ ಹತ್ತಿರ ಕೂತು ಆಗಾಗ ಅವನ ಮುಖ ನೋಡುತ್ತಿದ್ದೆ. ಆ ಪುಣ್ಯಾತ್ಮ ಬಾಗಿಲ ಬಳಿ ನಿಂತು ಬಸ್ಸಿನ ಗಾಳಿಗೆ ಮುಖವೊಡ್ಡಿ ಚೊಂಪೆ ಕೂದಲನ್ನು ಹಾರಿಸುತ್ತಾ ಸ್ಟೈಲ್ ಹೊಡೆಯುತ್ತಿದ್ದ. ಆತ ನನ್ನತ್ತ ನೋಡುತ್ತಿಲ್ಲ, ಅನ್ನುವುದು ತಿಳಿದು ಒಳಗೊಳಗೇ ಬೇಜಾರಾಗಿ, ‘ನಾನೆಷ್ಟು ಪಾಪ’ ಅಂತ ನನ್ನ ಬಗೆಗೇ ಮರುಕಪಡುತ್ತಿದ್ದೆ.<br /><br />ನಾನೊಬ್ಬಳು ಅಂತಲ್ಲ, ನಮ್ಮ ಬಸ್ಸಿನಲ್ಲಿ ಹೋಗುವ ಎಲ್ಲಾ ಹುಡುಗಿಯರೂ ಅವನನ್ನು ಇಷ್ಟಪಡುತ್ತಿದ್ದರು. ಒಳಗೇ ಮುಚ್ಚಿಡಲಿಕ್ಕಾಗದೇ ಆಗಾಗ ಅದು ಹೊರ ಬರುತ್ತಿತ್ತು.<br /><br />ಆಮೇಲೆ ಒಂದು ದಿನ ಅವನು ಈ ಬಸ್ಸಿನ ಕ್ಲೀನರ್ ಕೆಲಸ ಬಿಟ್ಟ. ಅದು ನನಗೆ ಗೊತ್ತಾದದ್ದು ತಡವಾಗಿ. ಅಲ್ಲಿಯವರೆಗೆ ನಾನು ಬಸ್ ಅಷ್ಟು ದೂರದಲ್ಲಿರುವಾಗಲೇ ಬಾಗಿಲ ಹತ್ತಿರ ಅವನನ್ನು ಹುಡುಕುತ್ತಿದ್ದೆ. ಆಮೇಲೆ ಗೊತ್ತಾಯಿತು ಅವನು ವಿಶಾಲ್ ಬಸ್ಸಿನಲ್ಲಿ ಡ್ರೈವರ್ ಆಗಿ ಸೇರಿಕೊಂಡ ವಿಷಯ.<br /><br />ನಾನು ಕೆಲವೊಮ್ಮೆ ಸಂಜೆ ಸ್ಕೂಲ್ ಮುಗಿಸಿ ಬರುವಾಗ ಅವನ ಬಸ್ಸು ಬರುತ್ತಿತ್ತು. ಆಗಲೂ ಕದ್ದು ಕದ್ದು ಅವನನ್ನ ನೋಡುತ್ತಿದ್ದೆ. ಅವರು ಎಂದಿನಂತೆ ಚೊಂಪೆ ಕೂದಲು ಹಾರಿಸುತ್ತಾ ಫೋಸು ಕೊಡುತ್ತಿದ್ದ.<br />ಈಗ ಡ್ರೈವರ್ ಆದ ಕಾರಣ ಅವನ ಮುಖದಲ್ಲಿ ಒಂಥರಾ ಗತ್ತೂ ಕಾಣುತ್ತಿತ್ತು.<br /><br />ಮುಂದೆ ಕಾಲೇಜು ಸೇರಿದ ಮೇಲೆ ನಾನು ಹಾಸ್ಟೆಲ್ ಸೇರಿದ ಕಾರಣ ನಿಧಾನಕ್ಕೆ ಅವನ ನೆನಪು ಮರೆಯಾಯಿತು.<br /><br />ಬಹುಶಃ ಅದಾದ ಮೇಲೆ ಅವನು ನನಗೆ ಸಿಕ್ಕಿದ್ದು ತಿಂಗಳ ಹಿಂದೆ ಊರಿಗೆ ಹೋದಾಗ. ನೀನಾಸಂ ಶಿಬಿರದಿಂದ ಅರ್ಧಕ್ಕೇ ಹೊರನಡೆದವಳು ಸೀದಾ ಹೋದದ್ದು ಮನೆಗೆ. ಆಗ ಕಾರ್ಕಳದಲ್ಲಿ ವಿಶಾಲ್ ಬಸ್ ನಿಂತಿತ್ತು. ನಾನು ಅತ್ತ ನೋಡುತ್ತಾ ನಿಂತಾಗ ಬಾಯಿತುಂಬಾ ಪಾನ್ ತುಂಬಿಕೊಂಬಿಕೊಂಡು ಘಂ ಅನ್ನುವ ವಾಸನೆಯೊಂದಿಗೆ ಬಂದು ಜೋರಾಗಿ ಬಾಗಿಲೆಳೆದು ಬಸ್ ಸ್ಟಾರ್ಟ್ ಮಾಡಿದ.<br /><br />ಆ ಬಸ್ ಕೆರ್ವಾಶೆಗೆ ಹೊರಟಿದ್ದರೂ ನಾನು ಆ ಬಸ್ಸಿಗೆ ಹತ್ತಲಿಲ್ಲ. ಬೇರೊಂದು ಬಸ್ಸಿಗೆ ಕಾಯುತ್ತಾ ಕುಳಿತೆ. ಬಸ್ ಹೋದ ಮೇಲೆ, ಛೇ!ಅದೇ ಬಸ್ ಹಿಡಿಯಬೇಕಿತ್ತು ಅಂತನಿಸಿತು. ಸ್ವಲ್ಪ ಹೊತ್ತಾದ ಮೇಲೆ ಮತ್ತೊಂದು ಬಸ್ ಬಂತು. ಹತ್ತಿದೆ. ಸ್ವಲ್ಪ ದೂರ ಹೋಗಿರಬೇಕಷ್ಟೇ ನಮ್ಮ ಬಸ್ ಅವನಿದ್ದ ಬಸ್ನ್ನು ಓವರ್ಟೇಕ್ ಮಾಡಿ ಹೋಯಿತು. ನಾನತ್ತ ತಿರುಗಿದೆ. ಆತ ಗಾಳಿಗೆ ಮುಖವೊಡ್ಡಿ ಚೊಂಪೆಗೂದಲು ಹಾರಿಸುತ್ತಾ ನನ್ನತ್ತ ಕಣ್ ಮಿಟುಕಿಸಿದ!ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com32tag:blogger.com,1999:blog-1312989296248046531.post-70199700723057190502008-10-14T09:02:00.000-07:002008-10-19T03:39:34.297-07:00ಮಂಜಿನ ಹಾದಿಯ ಬೆತ್ತಲ ಜೀವಬೆಳಗ್ಗಿನ ಆರು ಗಂಟೆಯ ಸಮಯ. ಮಲೆನಾಡು ಇನ್ನೂ ಕತ್ತಲಲ್ಲಿತ್ತು. ಹಾಸಿಗೆ ಬಿಟ್ಟೇಳಲಾಗದ ಹಸಿ ಚಳಿ. ಅಕ್ಕ ಪಕ್ಕದ ಬೆಡ್ಡಿನ ಮೇಲಿದ್ದವರು ಕನಸಿನ ಹೊದಿಕೆಯನ್ನಿನ್ನೂ ಸರಿಸಿರಲಿಲ್ಲ. ಆದರೆ ಆಗಲೇ ಹಂಡೆಯಲ್ಲಿ ಬಿಸಿ ನೀರು ಕಾಯುತ್ತಿತ್ತು. ನೀರು ಮುಖಕ್ಕೆ ಬಿದ್ದಾಗ ಅದೊಂಥರಾ ಸುಖ. ಆದರೂ ಬಿಡದ ಚಳಿಯ ಮೋಹ. ಸ್ವೆಟರನ್ನೂ ಹಾಕದೇ ಎದ್ದು ಹೊರನಡೆದೆ. ಆಗಲೇ ನಾಟಕ ಕಲಾವಿದರು ಎದ್ದು ಬೆಳಗ್ಗಿನ ರಿಹರ್ಸಲ್ನಲ್ಲಿ ಬೆವರಿಳಿಸುತ್ತಿದ್ದರು. ಉಳಿದಂತೆ ನೀನಾಸಂ ತಣ್ಣಗಿತ್ತು.<br /><br /> ಆಗಲೇ ನಸು ಬೆಳಕು. ಅಡಿಗೆ ಮನೆಯಿಂದ ಹೊರಟ ಘಮಟು ಹೊಗೆ ಮಂಜಿನೊಂದಿಗೆ ಸೇರಿ ವಿಶಿಷ್ಟ ಘಮ ಗಾಳಿಯಲ್ಲಿ ಬೆರೆತಿತ್ತು. ದಟ್ಟ ಹಬ್ಬಿದ ಮಂಜಿನಲ್ಲಿ ನಡೆದು ಹೋಗುವಾಗ ಮನಸ್ಸಿಗೆ ಸುಮ್ಮ ಸುಮ್ಮನೇ ಸಂಭ್ರಮ. ನೀನಾಸಂ ದಾಟಿ ಹೊರಬಂದು ಬೀದಿಗಿಳಿದೆ. ಟಷ್ಟರಲ್ಲಿ ನೈಟಿ ಹಾಕಿಕೊಂಡು ತಲೆಗಿಡೀ ಮಫ್ಲರ್ ಸುತ್ತಿಕೊಂಡು ವೈದೇಹಿ ಪ್ರತ್ಯಕ್ಷ. ವಿಪರೀತ ಮಂಜಿದೆಯಲ್ವಾ ಅಂತ ಅಮ್ಮನಂತಾ ನಗೆ ನಕ್ಕು ಮುಂದೆ ನಡೆದರು, ನಾನು ಹೂಂ ಅನ್ನಲಿಲ್ಲ. ಸುಮ್ಮನೇ ನಕ್ಕೆ. ಆಮೇಲೆ ನಾನ್ಯಾಕೆ ಹಾಗೆ ಮಾಡಿದೆ ಅಂತ ನನಗೇ ಬೈಕೊಂಡೆ.<br /><br /> ಹಿಮ ಅಂದ್ರೆ ಅದೆಂಥಾ ಹಿಮ, ನಮ್ಮೆದುರು ಏನು ಬರುತ್ತಿದೆ ಅಂತಾನೇ ಗೊತ್ತಾಗುತ್ತಿರಲಿಲ್ಲ. ಮಾರ್ಗದ ಮಧ್ಯೆ ಗೂಳಿಯಂತೆ ಹೋಗುತ್ತಿದ್ದ ನನಗೆ ಪಕ್ಕದಲ್ಲೇ ಸೈಕಲ್ಲೊಂದು ಮೈಗೆ ತಾಗುವಂತೆ ಹಾದುಹೋದಾಗ ಗಾಭರಿ. ಕ್ಷಣದಲ್ಲಿ ಒಂಥರಾ ಹುಚ್ಚು ಹುರುಪು, ಮಂಜಿಂದ ನೆನೆದ ಬಲೆಯೊಂದು ಮುಖಕ್ಕೆ ಅಂಟಿಕೊಂಡಿತು. ಅದನ್ನು ತೆಗೆಯುತ್ತಾ ಮುಂದೆ ನಡೆದೆ. ಅಲ್ಲೊಬ್ಬ ಹೆಣ್ಣು ಮಗಳು ಹುಲ್ಲಿನ ಹೊರೆಯನ್ನು ಸೈಕಲ್ ಹಿಂದೆ ಕಟ್ಟಿ ಸೈಕಲ್ ತುಳಿಯುತ್ತಾ ಬರುತ್ತಿದ್ದಳು. ನಿಜಕ್ಕೂ ಹೆಗ್ಗೋಡು ಸುಧಾರಿಸಿದೆ ಅಂದುಕೊಂಡೆ. ಯಾಕೆಂದರೆ ನಮ್ಮ ಊರಲ್ಲಿ ನಮ್ಮ ಪ್ರಾಯದ ಹುಡುಗಿಯರೂ ಸೈಕಲ್ ತುಳಿಯಲು ಹಿಂಜರಿಯುತ್ತಾರೆ. ಆದರೆ ಇಲ್ಲಿ ನಮ್ಮ ಅಮ್ಮನಷ್ಟು ಪ್ರಾಯದ ಹೆಂಗಸು ಸೈಕಲ್ನ್ನು ಲೀಲಾಜಾಲವಾಗಿ ತುಳಿಯುತ್ತಾ ಹೋಗುವುದನ್ನು ನೋಡಿ ಒಳಗೊಳಗೇ ಖುಷಿ.<br /><br /> ಡೇಲಿಯಾ, ಗುಲಾಬಿ, ಬಣ್ಣಬಣ್ಣದ ದಾಸವಾಳಗಳ ಅಂಗಳಗಳು ಕಾಣಸಿಕ್ಕವು. ಮನೆಗಳಲ್ಲಿ ಬೆಳಗಿನ ತಿಂಡಿ ತಯಾರಾಗುತ್ತಿತ್ತು. ಆಗಷ್ಟೇ ಎದ್ದ ಎಳೇ ಮಗುವೊಂದು ಮುಸು ಮುಸು ಅಳುತ್ತಾ ಅಮ್ಮನಿಂದ ಬಯಿಸಿಕೊಳ್ಳುತ್ತಿತ್ತು. ‘ ಈ ಬಾರಿ ನೀನಾಸಂಗೆ ಜನ ಕಡಿಮೆ ಅಂತೆ’ , ಹಾಲು ಕ್ಯಾನ್ ಕಟ್ಟಿಕೊಂಡು ಸೈಕಲ್ ಹೊಡೆಯುತ್ತಿದ್ದ ಮೂರ್ ನಾಲು ಜನ ತಮ್ಮ ಪಾಡಿಗೆ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದರು. ಅವರನ್ನು ನನ್ನನ್ನು ನೋಡಿಯೇ ಹೀಗೆ ಹೇಳಿದ್ದಿರಬಹುದಾ ಅಂದುಕೊಂಡೆ.<br /><br /> ನನ್ನೆದುರು ಎರಡು ದಾರಿ. ಒಂದು ಭೀಮನ ಕೋಣೆಗೆ ಹೋಗುತ್ತಿತ್ತು. ಇನ್ನೊಂದು ಕಾಡು ಹಾದಿ. ಆದದ್ದಾಗಲಿ, ಅಂತ ಕಾಡು ಹಾದಿಯಲ್ಲೇ ಹೆಜ್ಜೆ ಹಾಕಿದೆ. ಬೆಳಕು ಗಾಢವಾಗುತ್ತಿರುವಂತೇ ಮಂಜು ನಿಧಾನಕ್ಕೆ ಕರಗುತ್ತಿತ್ತು. ಮೂಗಿನಲ್ಲಿ ನಸು ನವೆ, ದೂರದಲ್ಲಿ ಮನೆಯೊಂದರಿಂದ ಹೊಗೆ ಹೋಗುತ್ತಿತ್ತು. ಆಮೇಲೆ ಅಂತಹಾ ಮನೆ ಕಾಣಲೂ ಇಲ್ಲ. ತಣ್ಣನೆಯ ಹವೆಯಲ್ಲಿ ತಲೆಗೊಂದು ಶಾಲೂ ಹಾಕದೇ ಬಂದಿದ್ದೆ. ಕಾಡಿನೊಳಗೆ ಇಳಿದಿದ್ದೇ ಚಳಿ ಚಳಿ ಸುರು. ಹಕ್ಕಿಗಳ ಅದೇನೋ ತಮಗೆ ತಾವೇ ಗುಟ್ಟು ಹೇಳಿಕೊಳ್ಳುವಂತೆ ಪಿಸಿ ಪಿಸಿ ಮಾತನಾಡುತ್ತಿದ್ದವು. ಬೆಳಗಿಂದ ಸಂಜೆಯವರೆಗೆ ಮಾತಾಡಿದ್ರೂ ನಿಮ್ದು ಮಾತಾಡಿ ಮುಗಿಯುವುದಿಲ್ಲವಲ್ಲ ಮಾರಾಯ್ರೆ ಅಂತ ಹೇಳಬೇಕು ಅನಿಸಿತು. ಯೋಗ್ಯತೆ ಇಲ್ಲದವರು ಜಾಸ್ತಿ ಮಾತಾಡಬಾರದು ಅಂದುಕೊಂಡು ಸುಮ್ಮನಾದೆ. ಮಂಗಗಳು ಗುಂಪು ಅಲ್ಲೇ ಓಡಾಡುತ್ತಿತ್ತು. ದೊಡ್ಡ ಮಂಗನ ಹೊಟ್ಟೆಯನ್ನು ಗಟ್ಟಿ ಹಿಡಿದ ಪುಟ್ಟು ಮಂಗನ ಮರಿ ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು. ಅದನ್ನು ನೋಡಿ ಮುದ್ದುಕ್ಕಿತು. ಅದೇನೆನೆಸಿತೋ ಆ ಅಮ್ಮ ಮಂಗ ನನ್ನತ್ತಲೇ ನೋಡುತ್ತಾ ಗುರ್..ಅನ್ನುತ್ತಾ ಕೊಂಬೆಯಿಂದ ಕೆಳಗಿಳಿಯತೊಡಗಿತು. ಒಳಗೊಳಗೇ ಹೆದರಿಕೆಯಾಗಿ ಅಲ್ಲಿಂದ ಮೆಲ್ಲನೆ ಜಾರಿಕೊಂಡು ಹಿಂತಿರುಗಿ ನಡೆದೆ.<br /><br /> ಸ್ವಲ್ಪ ಮುಂದೆ ಬಂದಿರಬೇಕು. ಹಾದಿಯ ಮತ್ತೊಂದು ಬದಿಯ ಕಾಡಿನತ್ತ ತಿರುಗಿ ನೋಡಿದೆ. ಮರಗಳ ಮರೆಯಲ್ಲಿ ಯಾವುದೋ ಆಕೃತಿ ತುಸು ಅಲುಗಾಡಿದಂತೆ ಕಂಡಿತು. ಕುತೂಹಲದಿಂದ ಅತ್ತ ನಡೆದೆ. ಮರೆಯಾಗಿದ್ದ ಮರವ ಹತ್ತಿರ ಹೋಗಿ ಇಣುಕಿದಾಗ, ಆ ಕ್ಷಣ ಬಾಯಿಯ ಪಸೆಯಾರಿತ್ತು!<br /><br /> ವ್ಯಕ್ತಿಯೊಬ್ಬ ಬೆತ್ತಲಾಗಿ ಅಲುಗಾಡದಂತೆ ನಿಂತಿದ್ದ. ಎತ್ತಲೋ ದೃಷ್ಟಿ ನಟ್ಟಿತ್ತು. ಕಳೆದುಹೋದವನಂತೆ ಕಾಣುತ್ತಿದ್ದ. ಕಡು ಕಪ್ಪು ಬಣ್ಣದ ಎತ್ತರದ ಧಡೂತಿ ದೇಹ, ರೋಮವೇ ಮೈಯಾದಂತಾ ದೇಹ. ಒಂದು ಬದಿಯಷ್ಟೇ ಕಾಣುತ್ತಿದ್ದ ಕಾರಣ ಆತನ ಮುಖಭಾವ ಸ್ಪಷ್ಟವಾಗುತ್ತಿರಲಿಲ್ಲ. ಮೈ ಮೇಲೆ ಒಂದು ತುಣುಕೂ ಬಟ್ಟೆಯಿಲ್ಲದೆ ನಿಂತದ್ದ. ಆ ಚಳಿಯೂ ಅವನಿಗೆ ಸಹಜವೇ ಆದಂತಿತ್ತು. ಅವನೂ ತೀರಾ ಸಹಜವಾಗಿ ಮಾಮೂಲಿನಂತಿದ್ದ.<br /><br /> ಆತ ಪ್ರಕೃತಿಯ ಭಾಗವೇ ಆಗಿ ಹೋಗಿದ್ದ. ನಿಸರ್ಗದ ನಗ್ನತೆಯೊಳಗೆ ಸೇರಿ ಹೋಗಿದ್ದ. ಹೌದು, ಇಲ್ಲಿ ಎಲ್ಲವೂ ಬೆತ್ತಲು. ಸರ್ವವೂ ಸರಳ, ಸಹಜ. ನಾನೊಬ್ಬಳು ಇಲ್ಲಿಯವಳಲ್ಲ ಅನಿಸತೊಡಗಿತು. ಮೌನವಾಗಿ ತಿರುಗಿ ನಡೆದು ರೂಮು ಸೇರಿಕೊಂಡೆ. ಯಾಕೋ ಎಲ್ಲಾ ಅಪರಿಚಿತ ಅನಿಸತೊಡಗಿತು. ಮನೆ ಪದೇ ಪದೇ ನೆನಪಾಯಿತು. ಮರುದಿನ ಬೆಳಗ್ಗೆಯೇ ಊರಿಗೆ ಹೊರಟು ನಿಂತೆ.ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com8tag:blogger.com,1999:blog-1312989296248046531.post-1432775101040650752008-09-28T08:57:00.000-07:002008-09-28T09:24:37.683-07:00ಸ್ಪೋಟನಾಯಿ ಬಾಲಕ್ಕೆ ಪಟಾಕಿ ಕಟ್ಟಿ<br />ಅದು ಸಿಡಿಯುವುದನ್ನೇ<br />ಕಾಯುವ ಪೋಲಿ ಹುಡುಗ<br />ತುಟಿ ಕಚ್ಚಿ ಕಿವಿ ನಿಮಿರಿಸಿ<br />ನಾಯಿ ಕುಂಞ ಎಂದರಚುತ್ತಾ<br />ಓಡುವುದನ್ನೇ ನೆನೆಸುವಾಗ<br />ಅದೆಂಥಾ ಮೋಜು..<br /><br />ಪಟಾಕಿ ಯಾವಾಗ ಸಿಡಿದು ಬಿಡುತ್ತದೋ<br />ಹುಡುಗನಿಗೆ ಕ್ಷಣ ಅನಂತ<br />ಪಕ್ಕದ ಐಸ್ಕ್ಯಾಂಡಿ ಹಾರ್ನ್ ಸಹ<br />ಕಿವಿಗೆ ದೂರ<br /><br />ಎದೆ ನಡುಗಿಸುವ ಸದ್ದಿಗೆ<br />ಕಿವಿ ತಯಾರು<br />ತುಂಟ ಕಣ್ಣಲ್ಲಿ ಇನ್ನಿಲ್ಲದ ಕಾತರ<br /><br />ಆ ಕ್ಷಣ ಕಣ್ಣು ಎವೆ ಮುಚ್ಚಲಿಲ್ಲ<br />ಎದೆ ಬಡಿತ ಏರಿತ್ತು<br />ದೇಹವ್ಯಾಪಿ ಉದ್ವಿಗ್ನತೆ<br />ಅವನು ಅವನನ್ನೇ ಮೀರುವುದರಲ್ಲಿದ್ದ<br /><br />ನಾಯಿ ನಾಲಗೆ ಚಾಚಿ<br />ಹುಡುಗನನ್ನು ಸಮೀಪಿಸಿತು.<br />ಅವನ ಕಾಲು ನೆಕ್ಕಿ ಬಾಲ ಅಲ್ಲಾಡಿಸಿತು<br />ಅಲ್ಲಿ ಸ್ಪೋಟವೊಂದು ಕಾದುಕುಳಿತಿತ್ತು.ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com7tag:blogger.com,1999:blog-1312989296248046531.post-13250090283198501612008-08-29T01:43:00.000-07:002008-09-13T07:52:54.784-07:00ನಮ್ಮಪ್ಪ ತೋಟ ಮಾರ್ತಾರಂತೆಮೊನ್ನೆ ತಾನೇ ಮನೆಗೆ ಹೋಗಿದ್ದೆ. ಬಸ್ಸಿಂದ ಸಂಕದ ಬಳಿ ಇಳಿದಿದ್ದೇ ಜೋರು ಮಳೆ . ಲಗ್ಗೇಜು, ಬಟ್ಟೆ, ನಾನು ಎಲ್ಲ ಒದ್ದೆ ಮುದ್ದೆ. ಹಾಗೇ ಮನೆಯತ್ತ ಕಾಲು ಹಾಕಿದೆ. ಅದು ಗುಡ್ಡದ ದಾರಿ. ಮಳೆ ಬಂತೆಂದರೆ, ಭೂಮಿಯೊಳಗೆ ಒರತೆಯೆದ್ದು, ನೆಲ ಒದ್ದೆಯಾಗಿರುತ್ತದೆ. ಅಷ್ಟೇ ಅಲ್ಲ, ಅದರ ಮೇಲೆ ಕಾಲಿಟ್ಟರೆ, ಕಾಲು ಹೂತುಹೋಗುತ್ತದೆ. ಮತ್ತೆ ಕಷ್ಟದಿಂದ ಕಾಲನ್ನು ಹೊರತೆಗೆದರೆ, ಚಪ್ಪಲಿ ಮಾಯ..ಅದ್ಯಾವುದೋ ಮಾಯದಲ್ಲಿ ಅದು ನೆಲದೊಳಕ್ಕೇ ಇಳಿದಿರುತ್ತದೆ. ದಿನವಿಡೀ ಮಣ್ಣೊಳಗೆ ಕೈ ಹಾಕಿದರೂ ಚಪ್ಪಲಿ ಸಿಗುವುದಿಲ್ಲ. ಶಾಲೆಗೆ ಹೋಗುತ್ತಿದ್ದಾಗ, ನಮ್ಮ ಅದೆಷ್ಟೋ ಚಪ್ಪಲಿಗಳು ಇಲ್ಲಿ ಕಳೆದುಹೋಗಿದ್ದವು. ಅದಕ್ಕೇ ಮಳೆಗಾಲ ಮುಗಿಯುವವರೆಗೆ ಅಪ್ಪ ಚಪ್ಪಲಿ ತೆಗೆದುಕೊಡುತ್ತಿರಲಿಲ್ಲ.<br /><br />ಹೀಗೆ ಗಟ್ಟಿನೆಲದ ಮೇಲೇ ಕಾಲಿಡುತ್ತಾ, ಕಲ್ಲಿಂದ ಕಲ್ಲಿಗೆ ಹಾರುತ್ತಾ ಮುಂದೆ ಹೋದರೆ ಅಲ್ಲಿ ತೋಡೊಂದು (ಹಳ್ಳ) ಕೆಂಪು ನೀರಿಂದ ತುಂಬಿ ಹರಿಯುತ್ತಿತ್ತು. ಅಲ್ಲಿಯವರೆಗೆ ಹೇಗೋ ಸರ್ಕಸ್ ಮಾಡಿ ಚಪ್ಪಲಿ ಒದ್ದೆಯಾಗದಂತೆ ನಡೆದದ್ದೇ ಬಂತು. ಸರಿ, ಆದದ್ದಾಗಲಿ, ಅಂತ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ತೋಡುದಾಟಿದೆ.<br /><br /><br />ಮುಂದೆ ಕಾಡುದಾರಿ.ಹಿಂದೆ, ಅಲ್ಲಿ ದಟ್ಟ ಕಾಡಿತ್ತು. ಈಗ ಅದು ರಬ್ಬರ್ಕಾಡಾಗಿ ಬದಲಾಗಿದೆ. ದೂರದ ಕೇರಳದಿಂದ ಬಂದ ಕೊಚ್ಚಿ ಕ್ರಿಶ್ಚಿಯನ್ನರು ಇಲ್ಲಿ ಖಾಲಿ ಜಾಗವನ್ನು ಕೊಂಡು ಅಲ್ಲಿ ರಬ್ಬರ್ ಹಾಕುವ ದಂಧೆ ಮಾಡುತ್ತಿದ್ದಾರೆ. ಇದು ಸತತ ಹತ್ತು ಹದಿನೈದು ವರ್ಷಗಳಿಂದ ನಮ್ಮೂರಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ದುಪ್ಪಟ್ಟು ಹಣಕೊಟ್ಟು ಆಸ್ತಿ ಖರೀದಿಸುವ ಕಾರಣ ಊರವರಾರೂ ಈ ಬಗ್ಗೆ ಚಕಾರವೆತ್ತಯವುದಿಲ್ಲ. ನಮ್ಮೂರಲ್ಲಿ ನಿಧಾನವಾಗಿ ಭತ್ತದ ಗದ್ದೆಗಳು ಮಾಯವಾಗುತ್ತಿವೆ. ಅಲ್ಲೆಲ್ಲ ಅಡಿಕೆ ಗಿಡಗಳು ತಲೆಯೆತ್ತಿವೆ. ಕಾಡಿದ್ದ ಜಾಗವನ್ನೆಲ್ಲ ರಬ್ಬರ್ ಆಕ್ರಮಿಸಿದೆ.<br /><br /><br /><br />ಹಾಗೇ ಮುಂದೆನಡೆದೆ..ಅಲ್ಲಿ ಮತ್ತೊಂದು ತೋಡು. ಅವನು ಮೊದಲ ಬಾರಿ ನನ್ನ ಮನೆಗೆ ಬಂದಾಗ ಈ ಹಳ್ಳ ನೋಡಿ, ‘ಏಳು ಸಮುದ್ರ ದಾಟಿ ರಾಜಕುಮಾರಿಯನ್ನು ನೋಡಲು ಬಂದ ಹಾಗಾಯಿತು’ ಅಂದಿದ್ದ.<br /><br />ಗೇಟಿನ ಹತ್ತಿರ ಬಂದಾಗ ಡಿಂಗ (ನಾಯಿ) ಆ ಮಳೆಯಲ್ಲೂ ಓಡಿ ಬಂದ. ಅಷ್ಟೆತ್ತರ ಹಾರಿ ಕುಣಿದು ನನ್ನ ವೇಲ್ ಎಳೆದುಕೊಂಡೇ ಹೋದ. ಈ ಡಿಂಗ ಪುಟಾಣಿ ಮರಿಯಾಗಿ ಮನೆಗೆ ಬಂದಿದ್ದ. ಆಗ ಅವನಿಗೆ ಬೊಗಳುವ ಹುರುಪು, ಅದೇ ಉತ್ಸಾಹದಲ್ಲಿ ಪಕ್ಕದ ಮನೆ ನಾಯಿಗೂ ಬೊಗಳಲು ಹೋಗಿ ಅದರ ಕೈಯಲ್ಲಿ ಕಚ್ಚಿಸಿಕೊಂಡಿದ್ದ. ಕಾಲು ಮುರಿದೇ ಹೋಯಿತು ಅಂದು ಕೊಂಡಿದ್ದೆವು. ಆದರೆ, ನಿಧಾನಕ್ಕೆ ಚೇತರಿಸಿಕೊಂಡ ಡಿಂಗ ತಿಂಗಳು ಕಳೆಯುವುದರೊಳಗೆ ಜಿಗಿ ಜಿಗಿದು ಓಡತೊಡಗಿದ್ದ. ಈಗ ಮುದುಕನಾಗುತ್ತಾ ಬಂದಿದ್ದಾನೆ, ಹಿಂದಿನ ಉತ್ಸಾಹ ಈಗ ಉಳಿದಿಲ್ಲ. ಆದ್ರೆ ಬಟ್ಟೆ ಎಳೆಯುವ ಕೆಟ್ಟ ಬುದ್ಧಿ ಮಾತ್ರ ಬಿಟ್ಟಿಲ್ಲ.<br /><br /><br /><br />ಮನೆಯೊಳಗೆ ಕಾಲಿಟ್ಟರೆ ಅಡಿಕೆಯ ಮಕ್ಕು(ಧೂಳು)..ಅಮ್ಮ ಪತ್ರೊಡೆಗೆ ಅಕ್ಕಿ ಅರೆಯುತ್ತಿದ್ದಳು. ಅಮ್ಮನ ಮುಖ ನೋಡಿದ್ದೇ ಒಮ್ಮೆ ರಿಫ್ರೆಶ್ ಆದ ಅನುಭವ. ಆದರೂ ಮನೆಗೆ ಬಂದಾಗ ಹಲವು ಬಗೆಯ ನೋವುಗಳು ಒಮ್ಮೆಗೆ ಉದ್ಭವಿಸಿ ಬಿಡುತ್ತವೆ. ಬೇರೇನಕ್ಕೂ ಅಲ್ಲ, ಅಲ್ಲಿ ನೋವು ಇಲ್ಲಿ ನೋವು ಅಂದರೆ ಅಮ್ಮನ ಕಾಳಜಿಯೂ ಜಾಸ್ತಿಯಾಗುತ್ತದೆ. ಅವಳ ಕಣ್ಣಲ್ಲಿ ವಿಚಿತ್ರ ಪ್ರೀತಿ ಇಣುಕುತ್ತದೆ. ಒಂದು ಬಗೆಯ ತುಡಿತ ಮನಸ್ಸನ್ನಾವರಿಸುತ್ತದೆ. ಕಾಲಿಗೆ ತಲೆಗೆ ಎಣ್ಣೆ ತಿಕ್ಕಿ, ಬೇಗ ಗುಣ ಆಗತ್ತೆ, ಅಂದಾಗ ನನಗೆ ಕಳ್ಳ ಖುಷಿ.<br />‘ ಇಲ್ಲಿಗೆ ಬಂದ ಕೂಡ್ಲೆ ಎಲ್ಲ ನೋವೂ ಶುರುವಾಗಿ ಬಿಡತ್ತೆ ಅವಳಿಗೆ ’ ತಮ್ಮನ ಮೂದಲಿಕೆ.<br /><br /><br /><br />ಅಪ್ಪ ಡೈರಿಗೆ ಹೋದವರು ಇನ್ನೂ ಬಂದಿರಲಿಲ್ಲ. ಅವರು ಬಂದಾಗ ಗಂಟೆ ಒಂಭತ್ತು. ಹಿಂದಿನ ಸೆಕ್ರೆಟರಿ ಡೈರಿಯ ಹಣ ತಿಂದ ಕಾರಣ, ಡೈರಿ ಲೆಕ್ಕ ಅಪ್ಪನ ತಲೆಗೆ ಬಿದ್ದಿತ್ತು. ಮುಗಿಯದ ತೋಟದ ಕೆಲಸದ ನಡುವೆಯೂ ದಾಕ್ಷಿಣ್ಯಕ್ಕೆ ಅಪ್ಪ ಈ ಕೆಲಸ ಒಪ್ಪಿದ್ದರು. ಮನೆಗೆ ಬಂದವರೇ ಸ್ನಾನ ಪೂಜೆ ಮುಗಿಸಿ ಮತ್ತೆ ಲೆಕ್ಕದಲ್ಲಿ ಮುಳುಗಿದ್ದರು. ರಾತ್ರಿ ತುಂಬ ಹೊತ್ತಿನವರೆಗೆ ಲೆಕ್ಕ ಮುಂದುವರಿದಿತ್ತು. ಅದರ ನಡು ನಡುವೆ ನನ್ನೊಡನೆ ಮಾತು. ಒಮ್ಮೆ,‘ ನಾನು ಈ ಜಾಗ ಮಾರ್ತೀನಿ’ ಅಂದರು. ಈ ಮಾತನ್ನು ಅವರು ಆವಾಗವಾಗ ಹೇಳುತ್ತಿದ್ದ ಕಾರಣ ನಾನು, ‘ ಹ್ಞುಂ’ ಅಂದು ಸುಮ್ಮನಾದೆ.<br /><br />ಆದರೆ, ಅಪ್ಪ ನಿರ್ಧರಿಸಿದಂತಿತ್ತು.<br /><br />‘ ಕಾರ್ಕಳದಲ್ಲಿ ಎಲ್ಲಾದರೂ ಹಿತ್ತಲು ಮನೆ ಇದೆಯಾ ಅಂತ ವಿಚಾರಿಸ್ತಾ ಇದೀನಿ. ಈ ಜಾಗ ಸೇಲಾದ ಕೂಡ್ಲೇ, ಪೇಟೆಯಲ್ಲಿ ಸಣ್ಣ ಮನೆ ಮಾಡಿ, ಜಾಗ ಮಾರಿದ ಹಣದಿಂದ ಬರುವ ಬಡ್ಡಿಯಲ್ಲಿ ಜೀವನ ಮಾಡೋದು. ’ ಅಂದರು.<br /><br /><br /><br />ನಮ್ಮದು ಮುನ್ನೂರ ಅರುವತ್ತೈದು ದಿನಗಳೂ ಸಮೃದ್ಧ ನೀರಿರುವ, ಕಾಡು ಪ್ರಾಣಿಗಳ ಕಾಟ ಬಿಟ್ಟರೆ ಅಷ್ಟೇನೂ ತೊಂದರೆ ಇಲ್ಲದ ಜಾಗ. ಆದರೆ ಇಲ್ಲಿ ಗ್ರಾಮಕ್ಕೊಂದರಂತೆ ಗೇರು ಬೀಜ (ಗೋಡಂಬಿ) ಕಾರ್ಖಾನೆಗಳು ಎದ್ದಿರುವ ಕಾರಣ ಕೂಲಿಯವರೆಲ್ಲ ಆ ಕೆಲಸಕ್ಕೇ ಹೋಗುತ್ತಿದ್ದಾರೆ. ಅಲ್ಲಿ ಕೂಲಿಯವರಿಗೆ ಅಪ್ಪ ಕೊಡುವಷ್ಟು ಸಂಬಳ ಸಿಗದಿದ್ದರೂ ಅದು ಶ್ರಮ ಬೇಡುವ ಕೆಲಸವಲ್ಲ. ಕೂತು ಗೇರು ಬೀಜದ ಸಿಪ್ಪೆ ತೆಗೆಯುವ ಕೆಲಸ. ಹಾಗಾಗಿ ಇಷ್ಟ ಪಟ್ಟು ಹೋಗುತ್ತಿದ್ದರು. ಇಲ್ಲವಾದರೆ ಅವರು ಕೆಲಸಕ್ಕೆ ಹೋಗುತ್ತಿದ್ದದ್ದು ರಬ್ಬರ್ ತೋಟ ಮಾಡುವ ಕೊಚ್ಚಿ ಕ್ರಿಶ್ಷಿಯನ್ನರ ಮನೆಗೆ. ಯಾಕೆಂದರೆ ಅವರು ಮಾಂಸ, ಹೆಂಡ ಕೊಡ್ತಾರೆ. ನಮ್ಮಪ್ಪ ಬ್ರಾಹ್ಮಣರಾದ ಕಾರಣ ಅದೆಲ್ಲ ಕೊಡಿಸುವುದು ಹೇಗೆ?<br /><br />ಆದರೂ ಆಗಾಗ ಯಶೋಧಾ ಕೆಲಸಕ್ಕೆ ಬರುತ್ತಿರುತ್ತಾಳೆ. ಗಂಡಾಳಿಗಿಂತ ಏನೂ ಕಡಿಮೆಯಿಲ್ಲದಂತೆ ದುಡಿಯುತ್ತಿದ್ದರೂ ಅವಳಿಗೆ ಮಾತ್ರ ಕಡಿಮೆ ಸಂಬಳ. ಅವಳಿಗಿಂತ ಎಷ್ಟೋ ಕಡಿಮೆ ಕೆಲಸ ಮಾಡುವ ಗಂಡಾಳಿಗೂ ಅವಳಿಗಿಂತ ಹೆಚ್ಚು ಕೂಲಿ. ಅದು ಅವಳ ಗಮನ ಬರುತ್ತಿರಲಿಲ್ಲ ಅಂತಲ್ಲ, ಆದರೂ ಏನೂ ಮಾತಾಡದೇ ಸುಮ್ಮನಾಗುತ್ತಿದ್ದಳು.<br /><br /><br /><br />ಯಶೋದಾ ಮತ್ತು ಅಪ್ಪ ಸೇರಿಕೊಂಡು ಇಡೀ ತೋಟಕ್ಕೆ ಮದ್ದು ಬಿಡುತ್ತಾರೆ. ಹತ್ತಿರತ್ತಿರ ಹತ್ತೆಕರೆ ತೋಟಕ್ಕೆ ಮದ್ದು ಬಿಟ್ಟು ಮುಗಿಸುವಾಗ ಅಪ್ಪ ಹಿಂಡಿ ಹಿಪ್ಪೆಯಾದಂತಾಗುತ್ತಾರೆ. ಇನ್ನು ಅಡಿಕೆ ಕೊಯಿಲಿನ ಸಮಯ ಬಂತೆಂದರೆ ಆ ಕೆಲಸವನ್ನೂ ಅಪ್ಪ, ಯಶೋಧಾ ಸೇರಿಕೊಂಡೇ ಮಾಡುತ್ತಾರೆ.<br /><br /><br /><br />ಅಪ್ಪನ ಪ್ರಾಯವೀಗ ಐವತ್ತೈದರ ಹತ್ತಿರ. ಕೃಷಿಯ ಬಗೆಗೆ ಅವರಿಗೆ ಮೊದಲಿದ್ದ ಆಸಕ್ತಿ ಕುಂದಿ ಹೋಗಿದೆ. ಮನಸ್ಸು ವಿಶ್ರಾಂತಿ ಬಯಸುತ್ತಿದೆ. ಸಹಾಯ ಮಾಡೋಣವೆಂದರೆ ನಾನು ಬೆಂಗಳೂರಿನಲ್ಲಿದ್ದೇನೆ. ಕೆಲಸ ಬಿಟ್ಟು ಬರುತ್ತೇನೆಂದರೆ ಅಪ್ಪ ಕೇಳುವುದಿಲ್ಲ, ‘ ನೀನು ಇಲ್ಲಿ ಬಂದರೂ ಮಾಡುವುದು ಇಷ್ಟೇ ಇದೆ. ಸುಮ್ಮನೆ ಏನೆಲ್ಲ ತಲೆಗೆ ಹಚ್ಚಿಕೊಳ್ಳಬೇಡ. ನಾವು ಹೇಗೋ ಸುಧಾರಿಸ್ತೇವೆ’ ಅಂತಾರೆ. ತಮ್ಮ ಇನ್ನೂ ಚಿಕ್ಕವನು, ಈಗಷ್ಟೇ ಹತ್ತನೇ ಕ್ಲಾಸು ಮುಗಿಸಿ ಕಾಲೇಜು ಸೇರಿಕೊಂಡಿದ್ದಾನೆ.<br /><br /><br /><br />ಅಪ್ಪನತ್ರ ಅಷ್ಟು ಒಳ್ಳೆ ಜಾಗ ಮಾರಬೇಡ ಅಂತ ಅನ್ನೋಣ ಅನಿಸುತ್ತದೆ. ಆದರೆ, ಅದು ಹೇಗೆ?ಜಗುಲಿಯ ಕಟ್ಟೆಯೇರಿದರೆ ಕಾಣುವ ಪಶ್ಷಿಮ ಘಟ್ಟದ ಸಾಲು, ತೋಟದ ಪಕ್ಕ ಸಶಬ್ಧವಾಗಿ ಹರಿವ ಸ್ವರ್ಣೆ, ನಮ್ಮ ಬಾಲ್ಯಕ್ಕೆ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುವ ತೋಟ, ಎತ್ತರ ಮಹಡಿಯ ಪುಟ್ಟಮನೆ ಚಿತ್ರ ಕಣ್ಣೆದುರು ಬರುತ್ತದೆ. ಜಾಗ ಮಾರಿದರೆ ಇದೆಲ್ಲ ಬಾಲ್ಯದಂತೆ ಒಂದು ನೆನಪು ಮಾತ್ರ.<br /><br />ಬೆಂಗಳೂರಿನ ಎ.ಸಿ ರೂಮಿನಲ್ಲಿ ಕೂತು ಇದೆಲ್ಲ ಬರೆಯುವ ಹೊತ್ತಿಗೆ ಅಪ್ಪ ದನದ ಕೊಟ್ಟಿಗೆ ಪಕ್ಕದ ಕೋಣೆಯಲ್ಲಿ ಕೂತು ಅಡಿಕೆ ಸುಲಿಯುತ್ತಿರುತ್ತಾರೆ. ಅಡಿಕೆ ಸಿಪ್ಪೆಯ ಮೇಲೆ ಸುತ್ತಿಕೋಂಡು ಮಲಗಿ ಬೆಚ್ಚನೆಯೊಳಗೆ ಸೇರಿ ಹೋಗಿರುತ್ತಾನೆ ಡಿಂಗ.ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com24tag:blogger.com,1999:blog-1312989296248046531.post-6679071021540443202008-08-22T09:24:00.000-07:002008-08-22T09:48:57.945-07:00ಇಳೆಯ ಕನವರಿಕೆಉಲ್ಲಾಸ, ಉತ್ಸಾಹ, ಒಳಗಿಂದೊಳಗೇ ಉಕ್ಕುವ ಖುಷಿ<br />ಹಾಗೆ ತಣ್ಣಗೆ ಆವರಿಸಿ, ಹೂ ಮುತ್ತನಿತ್ತು ಅವಧರಿಸಿ<br />ಒಳಗೊಳಗೆ ಗುಡುಗು, ಮಿಂಚು, ಒತ್ತರಿಸಿ ಬರುವ ಉನ್ಮಾದ<br /><br />ಹಾಗೇ ಒರಗಿದ್ದು, ಮೇಲೆರಗಿಯೇ ಬಿಡಬೇಕೆ?<br />ಅಲ್ಲೂ ಬಿರುಸು ಚಲನೆ, ಗಂಟಲಲ್ಲಿ ಪಸೆಯಾರಿದ ಅನುಭವ...<br />ಹೆಚ್ಚಿದ ಆವೇಗ, ಕೊನೆಗೂ ಶರಣು ಶರಣು<br />ಅದೋ, ದೋ ಎಂದು ಸುರಿದೇ ಬಿಟ್ಟಿತು ವರ್ಷಧಾರೆ<br /><br /><br />ತುಸು ಬಳಲಿಕೆ, ಸಂತೃಪ್ತ ಮನಸ್ಸು<br />ಒಳಗೊಳಗೇ ಹೊಸ ಚೈತನ್ಯದ ಹರಿವು<br />ಮೌನ, ತಲ್ಲೀನ ಇಳೆ, ಭೋರ್ಗರೆದ ಮಳೆಗೆ ಬಾಗಿದ ಮನ<br /><br />ಹಾಗೇ ನಸು ಮಂಪರು, ಆವರಿಸಿದ ನಿದ್ರೆ<br />ಅಲುಗಾಟ ಹೊರಳಾಟ ಇಲ್ಲ<br />ಯೋಗನಿದ್ರೆಯಂತೆ ಧ್ಯಾನಸ್ಥ<br />ಹಾ, ನಸು ಕದಲಿಕೆ, ತುಟಿಯಂಚಿನಲ್ಲಿ ನಸು ನಗು<br /><br />ತೊರೆಯ ಮೇಲೆ ಇಳಿಬಿಟ್ಟ ಕಾಲ್ಗಳನ್ನು<br />ಹಾಗೇ ಮೇಲೆಳೆದುಕೊಂಡೆ.<br />ಸದ್ದಿಲ್ಲದೆ ಎದ್ದೆ, ಹಾಗೆ ಸರಿದೆ<br />ಸ್ವಲ್ಪ ದೂರ, ಹಿಂತಿರುಗಿ ನೋಡಿದೆ<br />ಸದ್ಯ ಎಚ್ಚರವಾಗಲಿಲ್ಲ...ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com7tag:blogger.com,1999:blog-1312989296248046531.post-53347153815130826922008-08-09T09:23:00.009-07:002008-08-24T06:55:03.143-07:00ಶೀತಲ ಭಾವಗಳ ಜಯಕಾಂತನ್<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgjAUHn4Zo5yE4Xtrll08SNobuIjl3F2RIfFvLC7e92P0efJRVsitWSd06aeGiPhDN4zmk_z0m3D_lrezdqjwbiwovgEVOjqlfNSpSdvn_6UPh3EwZLYeeJuj-tXh7PKbNSQhLfljqnC_o/s1600-h/book.jpg"><img style="margin: 0pt 0pt 10px 10px; float: right; cursor: pointer;" src="https://blogger.googleusercontent.com/img/b/R29vZ2xl/AVvXsEgjAUHn4Zo5yE4Xtrll08SNobuIjl3F2RIfFvLC7e92P0efJRVsitWSd06aeGiPhDN4zmk_z0m3D_lrezdqjwbiwovgEVOjqlfNSpSdvn_6UPh3EwZLYeeJuj-tXh7PKbNSQhLfljqnC_o/s320/book.jpg" alt="" id="BLOGGER_PHOTO_ID_5238082269367043890" border="0" /></a><br />ಆ ವಿಶಾಲವಾದ ಜನಸಂದಣಿ ಇಲ್ಲದ ಪ್ರದೇಶದಲ್ಲಿ ಆ ಹುಡುಗಿ ಏಕಾಕಿಯಾಗಿ ನಿಂತಿದ್ದಳು. ಅವಳ ಜತೆಗೆ ಆ ವೃದ್ಧ ಪಶುವೂ ನಿಂತಿತ್ತು. ದೂರದಲ್ಲಿ ಎದುರುಗಡೆ ಕಾಲೇಜಿನ ಹೊರಾಂಗಣದಲ್ಲಿ ಆಗೀಗ ಯಾರಾದರೊಬ್ಬರು ನಡೆದಾಡುವುದು ಮಾತ್ರ ಕಾಣಿಸುತ್ತಿತ್ತು. ಥಟ್ಟನೆ ತೆರೆಯಿಳಿದಂತೆ ಕತ್ತಲು ಕವಿಯಿತು. ಅದರ ಹಿಂದೆಯೇ ಬಿರುಗಾಳಿ ಬೀಸಿ ಅಲ್ಲಿನ ಮರ ಗಿಡಗಳ ಎಲೆಗಳ ಮೇಲಿಂದ ನೀರು ಹನಿಗಳು ಪಟಪಟನೆ ಉದುರಿದವು. ಅವಳು ಮರಕ್ಕೆ ಒರಗಿ ನಿಂತಳು. ಸ್ವಲ್ಪ ನಿಂತಿದ್ದ ಆ ಮಳೆ ಇದ್ದಕ್ಕಿದ್ದಂತೆ ಹೆಚ್ಚಿತು. ಅಡ್ಡವಾಗಿ ದಾರಿಯಾಚೆ ಇದ್ದ ಕಾಲೇಜಿನೊಳಕ್ಕೆ ಪುನಃ ಹೋಗಲೆಂದು ಅವಳು ರಸ್ತೆಯ ಎರಡೂ ಕಡೆ ನೋಡಿದಳು. ದೊಡ್ಡ ಕಾರೊಂದು ದಾರಿಗಡ್ಡವಾಗಿ ಬಂದು ಅವಳ ಮುಂದೆ ಥಟ್ಟನೆ ನಿಂತಿತು. ಅದು ನಿಂತ ವೇಗಕ್ಕೆ ಸುಂದರವಾಗಿ ಅಲುಗಾಡಿತು.<br /><br />....ಇದು ಜಯಕಾಂತನ್ ಕತೆಯೊಂದರ ತುಣುಕು. ಬೆಂಗಳೂರಿನ ಎಚ್ಚರದ ರಾತ್ರಿಯೊಂದರಲ್ಲಿ ಜಯಕಾಂತನ್ ಕಥೆಗಳ ಗುಂಗಿನಲ್ಲಿದ್ದೆ. ಅಲ್ಲಿ ಪದೇ ಪದೇ ಬಂದು ಹೋಗುವ ಅಮಾಯಕ ಗುಣ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅದು ಜಯಕಾಂತನ್ ಅವರ ಅಗ್ನಿ ಪ್ರವೇಶ ಅನ್ನುವ ಸಣ್ಣ ಕಥೆ.<br /><br />ಆಕೆ ಆಗಷ್ಟೇ ಹರೆಯಕ್ಕೆ ಕಾಲಿಟ್ಟ, ಬುದ್ಧಿಯಿಲ್ಲೂ ಬಲಿಯದ ಪುಟ್ಟ ಹುಡುಗಿ. ಕಾಲೇಜಿಗೆ ಆಗಷ್ಟೇ ಸೇರಿಕೊಂಡಿರಬೇಕು. ಅಂಜಿಕೆ, ಅಳುಕು ಅದನ್ನು ತೋರಿಸುತ್ತಿತ್ತು. ಆಗ ಜೋರಾಗಿ ಹೊಡೆದ ಮಳೆಗೆ ಮತ್ತುಷ್ಟು ಆತಂಕ ಪಡುತ್ತಾಳೆ. ಅಷ್ಟೊತ್ತಿಗೆ ಸುಂದರ ಕಾರು ಅವಳ ಪಕ್ಕ ನಿಲ್ಲುತ್ತದೆ. ಮುಂದಿನವು ಕನಸಿನಂತೆ ಚಲಿಸಿಹೋಗುವ ಕ್ಷಣಗಳು. ಕ್ಷಣದ ಸಂಕೋಚ, ದಾಕ್ಷಿಣ್ಯಕ್ಕೆ ಸಿಕ್ಕಿ ಆಕೆ ಕಾರು ಹತ್ತಿ ಬಿಡುತ್ತಾಳೆ. ಪುಟ್ಟ ಪುಟ್ಟದಕ್ಕೂ ಅಚ್ಚರಿ ಪಡುತ್ತಾ, ಆ ಸುಂದರ ಶ್ರೀಮಂತ ಹುಡುಗನ ನಗೆಗೆ ಒಳಗೊಳಗೇ ಸುಖಿಸುತ್ತಾ, ಕಾರಿನೊಳಗಿನ ಜಗತ್ತಿಗೆ ಬೆರಗಾಗುತ್ತಾಳೆ.<br />ಹೀಗೆ ಸಣ್ಣ ಸಣ್ಣ ಘಟನೆಗಳನ್ನೂ ಸೂಕ್ಷ್ಮವಾಗಿ ನೂಲುತ್ತಾರೆ ಜಯಕಾಂತನ್. ಅವರ ಜತೆಗೆ ಪುಟ್ಟ ಹುಡುಗಿಯ ಮನಸ್ಸನ್ನೂ ಅದೇ ಅಮಾಯಕತೆಯಿಂದ ವಿವರಿಸುತ್ತಾರೆ. ಕಣ್ಣೆದುರಿನ ಜಗತ್ತಿನಿಂದ ಬೇರೆಯಾಗಿ ನಿಲ್ಲುತ್ತಾ, ನಮ್ಮ ಮನಸ್ಸನ್ನೂ ಅದಕ್ಕೊಪ್ಪಿಸುತ್ತಾ ಹೋಗುತ್ತದೆ ಈ ಕಥೆ.<br /><br />ಜಯಕಾಂತನ್ ತಮಿಳಿನ ಜ್ಞಾನಪೀಠ ಪುರಸ್ಕೃತ ಸಾಹಿತಿ. ಅವರದು ಹೋರಾಟದ ಹಾದಿ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಸ್ವಭಾವ. ‘ ಓರ್ವ ಲೇಖಕನೆಂಬ ಆಧಾರದಿಂದ ನನ್ನ ಹಕ್ಕುಗಳನ್ನು ಮುಂದಿಟ್ಟುಕೊಂಡು ಹೋರಾಡಲು ನನಗೆ ನಾಚಿಕೆ ಎನಿಸುತ್ತದೆ. ಯಾಕೆಂದರೆ, ಈ ಅಧಿಕಾರ ಅಂತರಾತ್ಮದಲ್ಲಿ ತಪ್ಪು ಎಸಗಿದ ಭಾವವನ್ನುಂಟು ಮಾಡುತ್ತದೆ.’ ಅನ್ನುವ ಅವರ ಮಾತುಗಳು ನೇರತನವನ್ನು ತೋರಿಸುತ್ತವೆ.<br />ಅದಿರಲಿ, ಅವರ ‘ ಹೊಸ ಚಪ್ಪಲಿ ಕಚ್ಚುತ್ತದೆ’ ಅನ್ನುವ ಕಥೆ ಮೇಲೆ ಹೇಳಿದ ಕತೆಗಿಂತ ಭಿನ್ನ. ವಿಭಿನ್ನ ಯೋಚನಾ ಲಹರಿ, ಹೊಸ ಹೊಸ ಹೊಳಹುಗಳು ಇಲ್ಲಿ ಬಹಳಾ ತಟ್ಟುತ್ತವೆ.<br /><br />‘ ಹೋದವಾರ ಹೊಸ ಚಪ್ಪಲಿ ಕೊಂಡುಕೊಂಡೆ. ಕಚ್ಚಿದೇರಿ...ಹೊಲಿಯುವಾಗ ಬೆರಳುಗಳು ಆಡುವುದರಿಂದ ಬೇಗ ವಾಸಿಯಾಗುವುದಿಲ್ಲ’ ಅಂತ ಹೇಳುತ್ತಿದ್ದವಳು, ತಲೆಎತ್ತಿ ಅವನ ಮುಖ ನೋಡಿ ನಕ್ಕಳು. ‘ ನೋಡಿದಿರೇನ್ರಿ, ಚಪ್ಪಲಿ ಕೂಡ, ಹೊಸದಾಗಿದ್ದರೆ ಕಚ್ಚುತ್ತೇರಿ. ಅದಕ್ಕಾಗಿ ಹಳೆಯ ಚಪ್ಪಲಿಗಳನ್ನು ಯಾರಾದ್ರೂ ಕೊಂಡುಕೊಳ್ಳುತ್ತಾರೇನ್ರಿ...?’ ಅವಳು ನಗುತ್ತಾ ಹೇಳಿದಳು. ಅವನು ಅವಳ ಕರಗಳನ್ನು ಹಿಡಿದುಕೊಂಡು ಅತ್ತುಬಿಟ್ಟ.<br /> ಇಂತಹ ಹಲವು ಚಿಂತನೆಗಳು ಇಲ್ಲಿ ಕಾಣಸಿಗುತ್ತವೆ.<br />ಹೀಗೆ ಆ ರಾತ್ರಿ ಓದಿದ ಕಥೆಗಳು ಕೆಲವೊಮ್ಮೆ ಅಚಾನಕ್ ಆಗಿ ನೆನಪಾಗುತ್ತವೆ. ತುಸು ಯೋಚಿಸಿ ನಕ್ಕು ಸುಮ್ಮನಾಗುತ್ತೇನೆ.ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com0tag:blogger.com,1999:blog-1312989296248046531.post-897510605778016152008-08-03T08:29:00.000-07:002008-08-09T09:13:48.502-07:00ನನ್ನಮ್ಮ ನನ್ನಮ್ಮ ಆಗುವ ಮೊದಲುಆಗ ಅವಳು ಕಾಲೇಜಿಗೆ ಹೋಗ್ತಾ ಇದ್ಳು. ವಿಟ್ಲದ ಕಾರಿಂಜ ಹತ್ತಿರದ ಅವಳ ಅಜ್ಜನ ಮನೆಯಿಂದ...ಅವಳಿಗೆ ಆಟ ಅಂದರೆ ಯಕ್ಷಗಾನದ ಹುಚ್ಚು ವಿಪರೀತ. ಅದಕ್ಕಾಗಿ ಅವತ್ತು ಅಜ್ಜನಮನೆಯಲ್ಲಿ ಜಗಳ ಮಾಡಿ ಪುತ್ತೂರಿಗೆ ಹೊರಟಿದ್ದಳು. ಅಲ್ಲೇ ಅವಳ ಗೆಳತಿಯ ಮನೆಯಿದ್ದ ಕಾರಣ ಇನ್ನೂ ಅನುಕೂಲವಾಗಿತ್ತು.ಅದು ಸಾಲಿಗ್ರಾಮ ಮೇಳದ ಕಾಡ ಮಲ್ಲಿಗೆ ಪ್ರಸಂಗ, ಕಾಳಿಂಗರಾಯರೇ ಭಾಗವತರು. ಆ ಕಾಲದ ಘಟಾನುಘಟಿಗಳೆಲ್ಲ ದೊಡ್ಡ ದೊಡ್ಡ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಣ್ಣದ ವೇಷದ ಖದರೇ ಬೇರೆ.ಅವಳು ರಾತ್ರಿಯಿಡೀ ಕಣ್ಣ್ ಮಿಟುಕಿಸದಂತೆ ಯಕ್ಷಗಾನ ನೋಡಿದಳು. ಬೆಳಗ್ಗೆ ಗೆಳತಿ ಮನೆ ಕಡೆ ಹೊರಟಳು.ಅಲ್ಲಿಗೆ ತಲುಪುದರೊಳಗಾಗಿ ಅವಳ ಸೋದರ ಮಾವ ಅಲ್ಲಿ ಕಾಯ್ತಾ ಇದ್ರು.ಅವಸರವಸರದಲ್ಲಿ ಅವರಿಗೆ ಶಾಪ ಹಾಕುತ್ತಾ ಕಾರು ಹತ್ತಿದಳು. ಕಾರು ಅಜ್ಜನ ಮನೆ ಕಡೆ ಹೋಗದೇ ಅವಳ ಮನೆ ದಾರಿ ಹಿಡಿಯಿತು.<br /> ಅವಳಿಗೆ ಕಸಿವಿಸಿ..ನಿನ್ನೆ ತಾನೇ ಜಗಳ ಮಾಡಿ ಮಾವನ ಹತ್ತಿರ ಕೋಪ ಮಾಡಿಕೊಂಡ ಕಾರಣ ಈಗ ಮಾವನಲ್ಲಿ, ಯಾಕೆ ಮನೆ ಕಡೆ ಕರ್ಕೊಂಡು ಹೋಗ್ತಾ ಇದ್ದೀರಾ? ಅಂತ ಕೇಳಲೂ ಮುಜುಗರ. ಹಸಿವು ಬೇರೆ. ಮಾವ ನಿನ್ನೆ ಜಗಳದ ಬಗ್ಗೆ ಅಪ್ಪನ ಹತ್ರ ಚಾಡಿ ಹೇಳವುದಕ್ಕೆ ಪ್ಲಾನ್ ಮಾಡ್ತಿದ್ದಾನಾ? ಅಂತ ಸಂಶಯ, ಒಳಗೊಳಗೇ ಭಯ.<br />ಈ ಟೆನ್ಶನ್ನಲ್ಲಿ ಸುಮ್ಮನೆ ಕೂರುವುದೂ ಕಷ್ಟವಾಗಿ ಮಿಸುಕಾಡುತ್ತಿದ್ದಳು. ಮಾವ ಮೌನವಾಗಿದ್ದ.<br /> ಕುಡ್ತಮೊಗೇರು ಬರುವ ಹೊತ್ತಿಗೆ ಕಾರಿನ ಟಯರ್ ಪಂಕ್ಚರ್. ಅಲ್ಲೆಲ್ಲೂ ಗ್ಯಾರೇಜಿಲ್ಲ. ಮಾವನತ್ರ ಎಕ್ಟ್ರಾ ಟಯರೂ ಇಲ್ಲ... ಕೊನೆಗೆ ಇದು ಇವತ್ತು ರಿಪೇರಿ ಆಗುವುದಿಲ್ಲ ಅಂದು ಕೊಂಡು ಕಾರನ್ನು ಪಕ್ಕಕ್ಕೆ ಹಾಕಿಯಾಯಿತು. ಅವಸರವಸರವಾಗಿ ನಡೆದುಕೊಂಡೇ ಹೋಗೋಣ, ಬೇಗ ನಡಿ ಅಂದ ಮಾವ. ಇವಳಿಗಿನ್ನೂ ಸಂಶಯ, ರಾತ್ರಿ ನಿದ್ದೆ ಕೆಟ್ಟದ್ದಕ್ಕೆ ಹೊಟ್ಟೆಯಲ್ಲಿ ಸಂಕಟ. ಅವಳು ಒಳಗೇ ಕೋಪದಿಂದ ಕುದಿಯುತ್ತಿದ್ದಳು...ಸಿಟ್ಟಿನಲ್ಲೇ ಮಾವನ ಜತೆಗೆ ಹೆಜ್ಜೆ ಹಾಕತೊಡಗಿದಳು.<br /> ಕುಡ್ತಮೊಗೇರಿನಿಂದ ಅಜ್ಜನ ಮನೆಗೆ ೫ ಮೈಲಿ ದೂರ...ನಡೆಯುವಾಗ ಕಾಲು ಜೋಮು ಹಿಡಿದಂತಾಗುತ್ತಿತ್ತು. ತಲೆ ಸಿಡಿತ ಬೇರೆ ಸುರುವಾಗಿತ್ತು. ಪೂವಕ್ಕು ಮನೆಯ ಹತ್ತಿರ ಬರುವಾಗ ತಲೆತಿರುಗಿ ಬಿದ್ದೇ ಬಿಟ್ಟಳು. ಮಾವನಿಗೆ ಏನು ಮಾಡುವುದೆಂದೇ ತಿಳಿಯಲಿಲ್ಲ...ಆಗ ಅವನಿಗಿನ್ನೂ ಇಪ್ಪತೈದರ ಪ್ರಾಯ.ಮದುವೆ ಆಗಿರಲಿಲ್ಲ. ದೇವರ ದಯೆದಿಂದ ಅದೇ ಸಮಯಕ್ಕೆ ಪೂವಕ್ಕು ಆ ದಾರಿಯಾಗಿ ಬರುತ್ತಿದ್ದಳು...ಮೂರ್ಛೆ ಹೋಗಿರುವ ಅವಳನ್ನೂ, ಬೆಪ್ಪನಂತೆ ನಿಂತಿರುವ ಮಾವನನ್ನೂ ಕಂಡು ವಿಷಯ ಏನೆಂದು ಕೇಳಿದಳು? ಮಾವ ಪೆದ್ದು ಪೆದ್ದಾಗಿ ಎಲ್ಲವನ್ನೂ ಹೇಳಿದ.<br /> ಅವಳಿಗೆ ಕಾಫಿಯನ್ನೂ ಕುಡಿಸದೇ ಹಾಗೇ ಕರೆದುಕೊಂಡು ಬಂದ ಮಾವನಿಗೆ ಅವಳಿಂದ ಸರಿಯಾಗಿಯೇ ಪೂಜೆಯಾಯಿತು. ನಂತರ ಪೂವಕ್ಕು ಮನೆಯಿಂದ ನೀರು ತಂದು ಅವಳ ಮುಖಕ್ಕೆ ನೀರು ಹಾಕಿದಾಗ ಆಕೆಗೆ ಜ್ಞಾನ ಬಂದಂತಾಯಿತು. ಬೇಡ ಬೇಡವೆಂದರೂ ಕೇಳದೇ ತಿಂಡಿ, ಕಣ್ಣ ಚಾ ( ಹಾಲಿಲ್ಲದ ಚಹ) ಕುಡಿಸಿದ ಮೇಲೆ ಆಕೆ ಸ್ವಲ್ಪ ಸುಧಾರಿಸಿದಳು. ಮಾವನಿಗೆ ಬುದ್ಧಿ ಹೇಳಿ ಅವಳನ್ನು ಮಾವನೊಂದಿಗೆ ಕಳುಹಿಸಿದಳು ಪೂವಕ್ಕು.<br /> ಅಂತೂ ಇಂತೂ ಮನೆಗೆ ಬಂದಾಗ ಅವಳು ಮನೆಗೆ ಬಂದು ಮುಟ್ಟಿದಾಗ ಮುಖ ನೊಡುವುದಕ್ಕೇ ಆಗುತ್ತಿರಲಿಲ್ಲ. ಆದರೇನು ಮಾಡುವುದು ಅವಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಹೊತ್ತಿಗೇ ಅವಳಮ್ಮ ಅವಳನ್ನು ಬಚ್ಚಲಿಗೆ ಕರೆದೊಯ್ದು, ತಲೆ ತಿಕ್ಕಿ , ಬೇಗ ಬೇಗ ಸ್ನಾನ ಮುಗಿಸಲು ಹೇಳಿದಳು..ಇವಳಿಗೆ ಇನ್ನೂ ಗೊಂದಲ..ಇವರೆಲ್ಲ ಯಾಕೆ ಹೀಗೆ ಮಾಡುತ್ತಾರೆ?, ಎಲ್ಲ ಒಗಟಿನಂತಿತ್ತು. ಸ್ನಾನ ಮುಗಿಸಿ ಬಂದವಳಿಗೆ, ಅಪ್ಪ ಅಮ್ಮ ಯಾರದೋ ದಾರಿ ನೋಡುತ್ತಿದ್ದದ್ದನ್ನು ಕಂಡು ಮತ್ತಷ್ಟು ಗೋಜಲು..ಇದೆಲ್ಲ ಎಂತಮ್ಮಾ? ಅಂತ ಕೇಳಿದರೆ, ಏನೂ ಇಲ್ಲ, ನೀನು ಹೆದರಬೇಡ, ಎಂತದ್ದೂ ಆಗುವುದಿಲ್ಲ ಅನ್ನುವ ಉತ್ತರ. ಮನೆಯಲ್ಲಿ ಹಾಕುವ ಉದ್ದ ಲಂಗ ಹಾಕಿ ಬಂದಾಗ, ‘ಸೀರೆ ಸುತ್ತು ಕೂಸೇ ...’ ಅವಳಪ್ಪ ಹೇಳಿದ್ರು...ಕಕ್ಕಾ ಬಿಕ್ಕಿಯಾಗಿ ಏನರಿಯದೇ ಮಿಕಿ ಮಿಕಿ ನೋಡಿದ್ಲು...ಅಪ್ಪ ಕಣ್ಣು ದೊಡ್ಡ ಮಾಡಿ ನೊಡಿದಾಗ, ವಿಧಿಯಿಲ್ಲದೇ ಹಳೇ ಸೀರೆಯುಟ್ಟು ಬಂದಳು.<br /> ಸ್ವಲ್ಪ ಹೊತ್ತಿನಲ್ಲೇ ಮನೆಗೆ ಅಪರಿಚಿತರ ಆಗಮನ. ಇದ್ಯಾರಪ್ಪ ನಂಗೆ ಗೊತ್ತಿಲ್ಲದ ನೆಂಟರು? ಅಂತ ಅವಳು, ಹಾಗೇ ನೋಡುತ್ತಿದ್ದಾಗ ಅಮ್ಮ ಅವಸರದಲ್ಲಿ ಬಂದು ಹೋಗಿ ಕಾಫಿ ಕೊಟ್ಟು ಬಾ ಅಂತ ಪ್ಲೇಟಿನ ಮೇಲೆ ಕಾಫಿ ಲೋಟವಿಟ್ಟು ಕಳುಹಿಸಿದಳು. ಆಮೇಲೆ ಏನಾಯಿತು ಅಂತ ಹೇಳಲಿಕ್ಕೆ ಅವಳಿಗೆ ನಾಚಿಕೆ. ಅಷ್ಟೊತ್ತಿಗೆ ಅವಳಮ್ಮ ನಗುತ್ತಾ ಹೇಳಿದಳು, ‘ಆಮೇಲೆ 2 ವರ್ಷ ಆಗುವ ಮೊದಲೇ ನೀನು ಹುಟ್ಟಿದೆ...ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com6tag:blogger.com,1999:blog-1312989296248046531.post-46333303149201395932008-08-03T01:47:00.000-07:002008-10-30T09:49:59.215-07:00ಹನಿ ಹನಿ ಕಹಾನಿನಮ್ಮ ಮನೆಯ ಮೇಲಿನ ಗುಡ್ಡೆಯ ಪುಟ್ಟ ದಿಣ್ಣೆ ಹತ್ತಿ ಕೂತಿದ್ದೆವು. ಈಗಷ್ಟೇ ಹನಿದರೂ ನೀಲಿ ಮೋಡಕ್ಕೆ ದಣಿವಿಲ್ಲ. ಆತ ಮೆಲ್ಲ ಗುನುಗುತ್ತಿದ್ದ. ಯಾವುದೋ ಘಜಲ್ ಸಾಲುಗಳು...ನಮ್ಮ ಎದುರಿಗಿದ್ದದ್ದು ಮೊದಲು ದಟ್ಟ ಕಾಡಾಗಿದ್ದ ಈಗ ರಬ್ಬರ್ ತೋಟವಾಗಿರುವ ಎತ್ತರ ತಗ್ಗಿನ ಭೂಮಿ. ಆಗ ಸಂಜೆ ಆರರ ಹೊತ್ತು, ಮಳೆಯ ಕಾರಣ ಇನ್ನೂ ಕತ್ತಲಾದಂತೆ ಕಾಣುತ್ತಿತ್ತು. ‘ ಈಗ ಜೋರು ಮಳೆ ಬಂದ್ರೆ ಕಷ್ಟ ಅಲ್ವಾ? ’ ನಾನಂದೆ. ಹೂಂ..ಅಂದ. ಗುನುಗುತ್ತಿದ್ದ ಘಜಲ್, ಒಮ್ಮೆ ನಿಂತು ಮತ್ತೆ ಸಣ್ಣ ಶಿಳ್ಳೆಯೊಂದಿಗೆ ಮುಂದುವರಿಯಿತು. ‘ ನಾವು ಇಂತದ್ದೇ ಜಾಗ ನೋಡಿ ಇಲ್ಲೇ ಮೂಡಬಿದ್ರೆ ಹತ್ರ ಒಂದು ಜಾಗ ಮಾಡಿದ್ರೆ ಹೇಗೆ? ’ ಮತ್ತೆ ಘಜಲ್ಗೆ ಅರ್ಧವಿರಾಮ. ಅವ ಉತ್ತರಿಸಲಿಲ್ಲ. ಗುನುಗು ಮುಂದುವರಿಯಿತು. ಒಂಥರಾ ಮುಖ ಮಾಡಿ ಹೇಳಿದ,‘ ಈಗೀಗ ಬರವಣಿಗೆ ಯಾಕೋ ಕೈ ಹಿಡೀತಾ ಇಲ್ಲ’. ಮತ್ತೆ ಹಾಡು ಮುಂದುವರಿಯಲಿಲ್ಲ. ‘ ಹೌದು, ರಸವೇ ಇಲ್ಲದೆ ಒಣಗಿದ ಹಾಗಿರುತ್ತದೆ’ ನಾನಂದೆ. ಆತ ಮತ್ತೆ ಮೌನವಾದ. ಆಯ್, ತಲೆ ಮೇಲೆ ದಪ್ಪ ಹನಿ ಬಿತ್ತು. ದೂರದಲ್ಲಿ ನವಿಲಿನ ಕೇಕೆ, ‘ಇಲ್ಲೇ ಎಲ್ಲೋ ನವಿಲಿರ್ಬೇಕು, ಬಾ ಮರದಡಿಗೆ ನಿಂತರೆ ಕಾಣಬಹುದು. ನವಿಲು ಕುಣಿಯುವುದು ಭಾರೀ ಚಂದ. ನಾನಿದುವರೆಗೆ ನೋಡಿಲ್ಲ’ ಅಂದ . ನಾನು ಹಿಂಬಾಲಿಸಿದೆ. ಮರದಡಿ ನಿಂತೆವು. ಅಷ್ಟರಲ್ಲಿ ಬರಾ..ಅಂತ ಸುರಿದ ಮಳೆಗೆ ನಾನು ಪೂರಾ ಒದ್ದೆ. ಅವನತ್ತ ನೋಡಿದೆ, ಅವ ಕಾಡ ಕಡೆಗೇ ನೋಡುತ್ತಿದ್ದ. ಮೈಯಿಂದ ನೀರಿಳಿಯುತ್ತಿತ್ತು. ಆ ರಾತ್ರಿ ಯಾಕೋ ಅವ ಮೌನವಾಗಿದ್ದ.....ಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.com1